ದಾವಣಗೆರೆ (Davanagere): ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಯಾವ ಜಾತಿಯವರು ಎಷ್ಟು ಜನ ಇದ್ದಾರೆ? ಅನ್ನೋ ಬಗ್ಗೆ ಸಮೀಕ್ಷೆ ನಡೆಯುತ್ತಿದೆ. ನಂತರ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುತ್ತದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ತಿಳಿಸಿದರು.
ತಾಲೂಕಿನ ಅಣಜಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಕ್ಷಣಕ್ಕೆ ಒಳ ಮೀಸಲಾತಿ ಜಾತಿ ಆಗಬೇಕು. ನಮ್ಮ ಪಾಲಿನ ಅಂಬೇಡ್ಕರ್ ಅಂದ್ರೆ ಸಿಎಂ ಸಿದ್ದರಾಮಯ್ಯ. ಅವರು ಮುಂದಿನ ಎಂಟತ್ತು ತಿಂಗಳಲ್ಲಿ ಒಳ ಮೀಸಲಾತಿ ಜಾರಿಗೆ ತರಲಿದ್ದಾರೆಂದು ಆಶಯ ವ್ಯಕ್ತಪಡಿಸಿದರು.
ಆರ್ಸಿಬಿ ಮೆರವಣಿಗೆಯಲ್ಲಿ ಕಲ್ತುಳಿತ ಪ್ರಕರಣದಲ್ಲಿ ಮೈಲೇಜ್ ತೆಗೆದುಕೊಳ್ಳುವ ಅವಶ್ಯಕತೆ ಸರ್ಕಾರಕ್ಕಿಲ್ಲ. ಆದರೆ, ಮೆರವಣಿಗೆ ಮುನ್ನ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕಿತ್ತು. ಸರ್ಕಾರ ತರಾತುರಿಯಲ್ಲಿ ಯಾವುದೇ ರೀತಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
Read also : ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮ : ಸಹಾಯಧನ, ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಯಾವ ಪೊಲೀಸ್ ಅಧಿಕಾರಿಯಿಂದ ಎಲ್ಲೆಲ್ಲಿ ಲೋಪವಾಗಿದೆ ಎಂಬುದನ್ನು ಆಧರಿಸಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಇದಕ್ಕಾಗಿ ಡಿಸಿಎಂ, ಗೃಹ ಸಚಿವರು ರಾಜೀನಾಮೆ ನೀಡಬೇಕಾಗಿಲ್ಲವೆಂದರು.
ಸಿಎಂ ಕುರ್ಚಿಗಾಗಿ ಕಾಂಗ್ರೆಸ್ನಲ್ಲಿ ಯಾವುದೇ ಪೈಪೋಟಿ, ಕದನವಿಲ್ಲ. ಎರಡೂವರೆ ವರ್ಷದ ಅಗ್ರಿಮೆಂಟ್ ಬಗ್ಗೆ ರಾಹುಲ್ ಗಾಂಧಿ ಬಿಜೆಪಿಯವರಿಗೆ ಹೇಳಿದ್ದಾರಾ? ಇದೆಲ್ಲಾ ಬಿಜೆಪಿಯವರ ಹಗಲುಗನಸು ಮಾತ್ರ ಎಂದರು.
ವೀರಶೈವರಿಂದ ದಲಿತರಿಗೆ ವಂಚನೆ:
ರಾಜ್ಯಯಲ್ಲಿ ಬೇಡ ಜಂಗಮರೇ ಇಲ್ಲಾ. ಆದರೆ, ಹೀಗೆ ಬೇಡ ಜಂಗಮ ಪ್ರಮಾಣ ಪತ್ರ ಪಡೆಯುತ್ತಿರುವವರು ವೀರಶೈವ ಲಿಂಗಾಯತರು. ಇದರಿಂದ ದಲಿತರಿಗೆ ವಂಚನೆ ಮಾಡುತ್ತಿದ್ದಾರೆ. ಎಂದು ಎಚ್. ಆಂಜನೇಯ ಆರೋಪಿಸಿದರು.
ಈ ಬೇಡ ಜಂಗಮರ ವಿರುದ್ಧ ಇಷ್ಟರಲ್ಲಿಯೇ ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಯ ಜನ ಸೇರಿ ಸಮಾವೇಶ ಮಾಡಿ, ಸಿಎಂ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.