ಜಗಳೂರು:ಕ್ಷೇತ್ರದಲ್ಲಿ ಅಭಿವೃದ್ಧಿಯ ಅಲೆ ಪ್ರಾರಂಭವಾಗಿದ್ದು ಅಭಿವೃದ್ಧಿ ಅಲೆಯಲ್ಲಿ ವಿರೋಧ ಪಕ್ಷದವರು ಕೊಚ್ಚಿ ಹೋಗುತ್ತಿದ್ದಾರೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು
ಭಾನುವಾರ ತಾಲೂಕಿನ ಹನುಮಂತಪುರ ಗೊಲ್ಲರಹಟ್ಟಿ ತಮಲೇ ಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭೂಮಿ ಪೂಜೆ ನೆರವೇರಿಸಿದ ನಂತರ ಕ್ಯಾಸೆನಳ್ಳಿ ಗ್ರಾಮದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಅಭಿವೃದ್ದಿ ಪರ್ವ ಪ್ರಾರಂಭವಾಗಿದ್ದು ತೊರೆಸಾಲ ಭಾಗದಲ್ಲಿ ಕಳೆದ ಎರಡು ದಿನಗಳ ಹಿಂದೆ 16 ಕೋಟಿ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಕ್ಯಾಸೇನಹಳ್ಳಿ ಭಾಗದಲ್ಲಿ 15 ಕೋಟಿ 34 ಲಕ್ಷ ರೂ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ನಾನು ಮಾತನಾಡುವ ಶಾಸಕನಲ್ಲ ನಾನು ಮಾಡಿರುವ ಕೆಲಸಗಳೇ ಮಾತನಾಡುತ್ತವೆ ವಿರೋಧಪಕ್ಷದವರು ಅಭಿವೃದ್ಧಿ ಅಲೆಯನ್ನು ಕಂಡು ಮಂಕಾಗಿ ಹೋಗಿದ್ದಾರೆ ಜಗಳೂರು ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ನಡೆಯದೇ ಇರುವಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದರು.
ತಾಲೂಕಿನ ಉದ್ದಘಟ್ಟ ಗ್ರಾಮದ ಸಮೀಪ ಬ್ರಿಡ್ಜ್ ಕಂ ಬ್ಯಾರೇಜ್ , ತೊರೆ ಸಾಲು ಭಾಗದಲ್ಲಿ ಜಿನಗೆ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ಮಾಡಲಾಗಿದ್ದು ಬಿಳಿಚೋಡಿನ ಬ್ರಿಡ್ಜ್ ಕಮ್ ಬ್ಯಾರೇಜ್ ಗೆ ಅನುದಾನ ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಜೊತೆಗೆ ಜಗಳೂರು ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿ ಮಾಡಲಾಗುತ್ತಿದೆ ಇವುಗಳನ್ನು ಕಂಡಂತಹ ವಿರೋಧ ಪಕ್ಷದವರು ಮೂಕ ವಿಸ್ಕಿತರಾಗಿ ನೋಡುತ್ತಿದ್ದಾರೆ ಎಂದರು.
ಇದಕ್ಕೂ ಮುನ್ನಾ ತಮಲೇ ಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು ಸಮಾಜದ ಮೇಲಿರುವ ಕಪ್ಪು ಚುಕ್ಕೆ ಹೋಗಬೇಂದರೆ ಮಕ್ಕಳಿಗೆ ಗುಣ ಮಟ್ಟದ ಶಿಕ್ಷದ ಕೊಡಿಸಿ ನಾನು ಶಿಕ್ಷಣ ಕೊಡಿಸಿದ್ದರಿಂದಲೇ ನೆಮ್ಮದಿಯ ಜೀವನ ದೊರೆತಿದೆ ಹಾಗಾಗಿ ಶಿಕ್ಷಣ ಕ್ಕೆ ಒತ್ತು ನೀಡಬೇಕು , ಗ್ರಾಮಕ್ಕೆ ೫೦ ಲಕ್ಷ ಅನುದಾನ ನೀಡಿದ್ದು ಮುಂದಿನ ದಿನಗಳಲ್ಲಿ ಕೆರೆ ಅಭಿವೃದ್ಧಿ ಪಡಿಸಲಾಗುವುದು ಮತ್ತು ಬೋಜನಾಯ ನಿರ್ಮಾಣ ಕ್ಕೆ ಅನುದಾನ ನೀಡಲಾಗುವುದು ಎಂದು ಹೇಳಿದರು.
ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಷಂಷೀರ್ ಮಾತನಾಡಿ , ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯೋಜನೆಗಳ ನಡೆಯು ನಡುವೆಯೂ ಕ್ಷೇತ್ರದ ಅಭಿವೃದ್ಧಿಗೆ ಮಾನ್ಯ ಮುಖ್ಯಮಂತ್ರಿಗಳು ಸಾಕಷ್ಟು ಅನುದಾನ ನೀಡುತ್ತಿದ್ದು ಕ್ಷೇತ್ರದ ಪ್ರತಿಯೊಂದು ಇವರೆಗೆ ಕ್ಷೇತ್ರದಲ್ಲಿ ಒಂದು ಸಾವಿರ ಕೋಟಿ ಅಭಿವೃದ್ಧಿ ಕೆಲಸ ಕಾರ್ಯಕ್ರಮ ನಡೆದಿವೆ ಎಂದರು.
Read also : ಆರೋಗ್ಯಾಧಿಕಾರಿ,ಸಿಬ್ಬಂದಿಗಳ ಕೊರತೆ : ಬಾಕ್ಸ್ ಗಟ್ಟಲೇ ಔಷಧಿಗಳು ವ್ಯರ್ಥ
ಭದ್ರ ಮೇಲ್ದಂಡೆ ನೀರಾವರಿ ಯೋಜನೆಯ ಎಇಇ ಆಫ್ರೀನ್ ಮಾತನಾಡಿ,ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವುದರಿಂದ ಅಂತರ್ಜಲ ಹೆಚ್ಚಳವಾಗಲಿದೆ ,ಭೂ ಸವಕಳಿ ತಡೆಯಲಿದೆ ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ , ಹನುಮಂತಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅನಿತಾ ,ಮಾಜಿ ಸದಸ್ಯ ಚೌಡಮ್ಮ , ತಮಲೇ ಗ್ರಾಮದ ಮುಖಂಡರಾದ ಗುರು ಮೂರ್ತಿ . ಹನುಮಂತಪ್ಪ, ಒಬಯ್ಯ, ಗೌಡ್ರು ಅಜ್ಜಪ್ಪ, ನಾಗರಾಜ್ , ನಾಗರಾಜ, ಜಿಲ್ಲಾ ಪಂಚಾಯಿತಿ ಎಇಇ ಡಬ್ಲ್ಯೂ ಶಿವಮೂರ್ತಿ, ಸಣ್ಣ ಸೂರಜ್ಜ, ಕಲಿಲ್ ಸಬ್, ಪಲ್ಲಾಗಟ್ಟೆ ಶೇಖರಪ್ಪ , ಸೋಮಣ್ಣ ಸೇರಿದಂತೆ ಮತ್ತಿತರರು.
ಸಂವಿಧಾನದ ಅಡಿಯಲ್ಲಿ ಆಯ್ಕೆಯಾಗಿರುವಂತಹ ರಾಜ್ಯಪಾಲರು ಅಧಿವೇಶನದಲ್ಲಿ ರಾಷ್ಟ್ರಗೀತೆ ಹೇಳುವಷ್ಟು ಸಹ ಸಮಯವಿಲ್ಲ. ರಾಷ್ಟ್ರಗೀತೆ ಹೇಳದೆ ಹಾಗೆಯೇ ತೆರೆದಿದ್ದಾರೆ ತೆರಳಿದ್ದಾರೆ . ಭಾರತದ ಪ್ರಜೆಗಳಾದ ನಾವು ರಾಷ್ಟ್ರಗೀತೆ ರಾಷ್ಟ್ರ ಧ್ವಜ ಗೌರವ ನೀಡುವುದರೊಂದಿಗೆ ರಾಷ್ಟ್ರ ರಕ್ಷಣೆ ಪ್ರಾಣಾಪಣೆಯನ್ನು ಮಾಡಬೇಕು. ಆದರೆ, ರಾಷ್ಟ್ರ ಗೀತೆಯನ್ನು ಹೇಳದೇ ತೆರಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು
ಬಿ. ದೇವೇಂದ್ರಪ್ಪ, ಶಾಸಕರು
