Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸಾಮಾಜಿಕ ನ್ಯಾಯದ ಸಾಕ್ಷಿ ಪ್ರಜ್ಞೆ ಎಲ್.ಜಿ.ಹಾವನೂರು
Blog

ಸಾಮಾಜಿಕ ನ್ಯಾಯದ ಸಾಕ್ಷಿ ಪ್ರಜ್ಞೆ ಎಲ್.ಜಿ.ಹಾವನೂರು

Dinamaana Kannada News
Last updated: September 22, 2024 5:03 am
Dinamaana Kannada News
Share
Davanagere
ಎಲ್.ಜಿ.ಹಾವನೂರು
SHARE

Kannada News |  Dinamaana.com | 22-09-2024

ಉಳಿದ ಮಾತು ……(LG Havanur)

ಭಾರತೀಯ ಅಧಿಕಾರಶಾಹಿಯು ಮೇಲ್ಜಾತಿಗಳ ಹಿಡಿತದಲ್ಲಿ ದೃಢವಾಗಿದೆ, ಅಷ್ಟೇ ಅಲ್ಲದೆ, ಮೇಲ್ಜಾತಿಗಳು ಮತ್ತು ಕೆಳಜಾತಿಗಳ ನಡುವಿನ ಅಂತರವೂ ದಿನೇ ದಿನೇ ವಿಸ್ತಾರಗೊಳ್ಳುತ್ತಿದೆ. ಹಿಂದುಳಿದ ಜಾತಿಗಳ ಮೀಸಲಾತಿ ಜಾರಿ ಕೂಡ ನಲವತ್ತು ವರುಷಗಳ ಕಾಲ ವಿಳಂಬವಾಯಿತು. ಈಗ ಕಾಲ ಬದಲಾಗಿದೆ. ಅಸ್ಪೃಶ್ಯರು, ಹಿಂದುಳಿದವರು, ಅಲ್ಪಸಂಖ್ಯಾತರು ಮುಂತಾದ ಕಾಯಕ ಜೀವಿಗಳ ಬದುಕು ಅಸಹನೀಯವಾಗುವತ್ತ ಸಾಗುತ್ತಿದೆ. ಇದು ಭಾರತದ ವೈಫಲ್ಯ.

ಹೀಗೆ ದೇಶದ ಮುಕ್ಕಾಲು ಭಾಗಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಸಮುದಾಯಗಳು ಅಲ್ಪಮಟ್ಟಿಗಾದರೂ ತಮ್ಮ ಬದುಕನ್ನು ಘನತೆಯಿಂದ, ಗೌರವಗಳಿಂದ, ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲು ಕಾರಣವಾದವರು ಎಲ್.ಜಿ.ಹಾವನೂರು ಎಂಬ ಒಬ್ಬ ಸಾಮಾನ್ಯ ಗ್ರಾಮೀಣ ಪ್ರತಿಭೆ.

ಹಾವನೂರು ವರದಿ ಸಾಮಾಜಿಕ ನ್ಯಾಯದ ಕನ್ನಡಿ..(LG Havanur)

ಇಡೀ ದೇಶಕ್ಕೇ ಮಾದರಿಯಾದಂತಹ ಹಿಂದುಳಿದ ವರ್ಗಗಳ ಬೈಬಲ್ ಎಂದೇ ಪ್ರಖ್ಯಾತಿ ಪಡೆದ ಹಾವನೂರು ವರದಿಯು ತನ್ನ ತಲಸ್ಪರ್ಶಿ, ವೈಜ್ಞಾನಿಕವಾದ ಅಧ್ಯಯನಗಳಿಂದ ಸಾಮಾಜಿಕ ನ್ಯಾಯದ ಕನ್ನಡಿಯಂತಿದೆ.

ಸಂವಿಧಾನದ ಶ್ರಮವನ್ನು ನೆನಪಿಸುವ ರೀತಿಯಲ್ಲಿ  ಬದುಕಿದರು..(LG Havanur)

“ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವಂತಹ ಅವಕಾಶ ಸಂವಿಧಾನದಲ್ಲಿ ಇಲ್ಲ.ಒಂದು ವೇಳೆ, ಈ ವ್ಯವಸ್ಥೆಯನ್ನೇನಾದರೂ ನಿರ್ಮೂಲನೆ ಮಾಡಿದ್ದಿದ್ದರೆ ನಮ್ಮ ಸಂವಿಧಾನದ ಪರಿವಿಡಿ ಹಾಗೂ ಇತರೆ ಕಾನೂನುಗಳು ಈಗ ಇರುವುದಕ್ಕಿಂತ ಅರ್ಧದಷ್ಟು ಕಡಿಮೆಯಾಗಿರುತ್ತಿತ್ತು.”ಹೀಗೆ ಬಾಬಾಸಾಹೇಬ ಅಂಬೇಡ್ಕರ್ ರ ಸಂವಿಧಾನದ ಶ್ರಮವನ್ನು ನೆನಪಿಸುವ ರೀತಿಯಲ್ಲಿ ಲಕ್ಷ್ಮಣ ಗೂಳಪ್ಪ ಹಾವನೂರು ಬದುಕಿದರು.

ಇಂದಿನ ಭಾರತ, ತನ್ನ ಗರ್ಭದಲ್ಲಿರಿಸಿಕೊಂಡಿರುವ ಜಾತಿ ತಾರತಮ್ಯಗಳನ್ನು ಕೊನೆಗೊಳಿಸಲು ತೀವ್ರವಾಗಿ ಶ್ರಮಿಸುತ್ತಿದೆ ಎಂಬಂತಹ ವಾತಾವರಣ ದೇಶದ ಯಾವ ಮೂಲೆಯಲ್ಲೂ ಕಂಡುಬರುತ್ತಿಲ್ಲ.ಜಾತಿರಹಿತ ಸಮಾಜ ಕಟ್ಟುವ ಈ ವಿಷಯದಲ್ಲಂತೂ ಇನ್ನೂ ಆರಂಭವೇ ಆಗಿಲ್ಲ ಎನ್ನುವಷ್ಟರ ಮಟ್ಟಿಗೆ ಇದೆ.  ಸುಮಾರು 250  ಮಿಲಿಯನ್ನಿಗೂ ಹೆಚ್ಚಿರುವ ಅಸ್ಪೃಶ್ಯ ಜನರು, ಅಸ್ಪೃಶ್ಯತೆಯ ಬೇಗೆಯಲ್ಲಿ ಬೇಯುತ್ತಿದ್ದಾರೆ.

ಭಾರತದ ಸಂವಿಧಾನ ಕೂಡ ಅಪಾಯದಲ್ಲಿ …

ಜಾಗತೀಕರಣ,ಉದಾರೀಕರಣ ಮತ್ತೆ ಈಗಿನ ಕೋಮುವಾದೀಕರಣಗಳ ಬಿರುಗಾಳಿಯ ದಾಳಿಗಳಿಗೆ ಸಿಕ್ಕು,ಅತ್ತ, ಕೈಯ್ಯಲ್ಲಿ ಕಸುಬೂ ಇಲ್ಲದೆ,ವಿಶಾಲ ಭಾರತದಲ್ಲಿ ಜಾಗವೂ ಇಲ್ಲದೆ ಅಭದ್ರತೆಯ ಭಾವದಲ್ಲಿ ಬದುಕುತ್ತಿರುವ ,ಅಂಚಿನ ಸಮುದಾಯಗಳು,ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಏಕೈಕ  ರಕ್ಷಕನಂತಿರುವ ಭಾರತದ ಸಂವಿಧಾನ ಕೂಡ ಅಪಾಯದಲ್ಲಿ ಇರುವಂತೆ ತೋರುತ್ತಿದೆ.

Read also  : ದಿನಮಾನ ಹೆಮ್ಮೆ : ನೆಲದ ಮೈಯ್ಯಿಗೆ ದುಡಿವ ಹೆಜ್ಜೆಗಳ ಕಾವ್ಯ ಬರೆವ -ಪಿ.ಆರ್.ವೆಂಕಟೇಶ್

ಇಂಥಾ ಹೊತ್ತಿನಲ್ಲಿ ಮತ್ತೆ ಮತ್ತೆ ಹಾವನೂರು ನೆನಪಾಗುತ್ತಾರೆ. ಇಂತಹ ಒಬ್ಬ ವ್ಯಕ್ತಿ ಕರ್ನಾಟಕದಲ್ಲಿ ಜೀವಿಸಿದ್ದರು ಎಂಬುದು ಕೂಡ ಇಂದಿನ ಯುವ ತಲೆಮಾರಿಗೆ ತಿಳಿದಂತೆ ಕಾಣಿಸುತ್ತಿಲ್ಲ.ಆದುದರಿಂದ ವಿದ್ಯಾರ್ಥಿಗಳನ್ನು, ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಿರು ಪುಸ್ತಕವನ್ನು ರಚಿಸಲಾಗಿದೆ.  ಇಲ್ಲಿರುವ ಹಾವನೂರು ಕುರಿತ ಮಾಹಿತಿಗಳು ಆರೋಗ್ಯವಂತ ಸಮ ಸಮಾಜ ನಿರ್ಮಾಣ ಕಾರ್ಯಕ್ಕೆ ಕೇವಲ ಪ್ರವೇಶಿಕೆ ಮಾತ್ರವೇ ಆಗಿವೆ ಎಂಬುದನ್ನು ಮರೆಯುವಂತಿಲ್ಲ.        

ಬಿ.ಶ್ರೀನಿವಾಸ

TAGGED:dinamaana.comLatest Kannada NewsLG Havanurಎಲ್.ಜಿ.ಹಾವನೂರುಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article davanagere Davanagere | ಎಸ್ ಎಸ್ ಎಂ ಜನ್ಮದಿನ ; ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಚಾಲನೆ
Next Article DAVANAGERE Davanagere | ಲಕ್ಷ್ಮಣ್  ಬಿ. ಹೆಚ್. ಅವರಿಗೆ ಡಾಕ್ಟರೇಟ್ ಪದವಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Harihara | ರಾಜ್ಯ ಮಟ್ಟದ ದೇಹಧಾರ್ಢ್ಯ ರಾಜ್ಯ ಸ್ಪರ್ಧೆ : ರಾಹುಲ್ ಮೆಹರ್ವಾಡೆಗೆ ಪ್ರಥಮ ಸ್ಥಾನ

ಹರಿಹರ (Harihara):  ಮೈಸೂರಿನಲ್ಲಿ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್, ಆಕ್ಸಿಜನ್ ಫಿಟ್‍ನೆಸ್ 365, ಸೂಪರ್‍ನೋವಾ ಫಿಟ್‍ನೆಸ್ 365 ಹಾಗೂ…

By Dinamaana Kannada News

Davangere news | ಖಬರಸ್ತಾನಕ್ಕೆ ವಾಟರ್‌ ಪ್ರೂಫ್‌ ಟೆಂಟ್‌ ಉಡುಗೊರೆ

ದಾವಣಗೆರೆ (Davangere District)  :  ನಗರದ ಎರಡು ಖಬರಸ್ತಾನ್‌ ಗಳಿಗೆ  ಇಂಡಿಯನ್‌ ಹೆಲ್ಪಿಂಗ್‌ ಹ್ಯಾಂಡ್ಸ್‌  ಯುವಕರ ತಂಡದ  ವಾಟರ್‌ ಫ್ರೂಫ್‌…

By Dinamaana Kannada News

ದೇವಸ್ಥಾನಕ್ಕೆ ಕನ್ನ ಹಾಕುತ್ತಿದ್ದ ಖದೀಮರು| ಹೊಯ್ಸಳ ಕ್ಷಿಪ್ರ ಕಾರ್ಯಚರಣೆ | ಮುಂದೆ ಆಗಿದ್ದೇನು?

ಜಗಳೂರು (Davanagere):  ಜಗಳೂರು ಠಾಣಾ ವ್ಯಾಪ್ತಿಯ ಅಣಬೂರು ಗೊಲ್ಲರಹಟ್ಟಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಹುಂಡಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು 112…

By Dinamaana Kannada News

You Might Also Like

Political analysis
Blog

Political analysis | ಸಿದ್ದು ಸಂಪುಟಕ್ಕೆ ಹೊಸ ಸೇನಾನಿ?

By Dinamaana Kannada News
Davangere
Blog

ಸಾಹಿತ್ಯ ,ಬರಹಗಳು ಸಾಮಾಜಿಕ‌ ದೋಷ ತಿದ್ದಬೇಕು : ಲೇಖಕಿ ಮಂಜುಳಾ ಮಂಜಪ್ಪ

By Dinamaana Kannada News
Davanagere
ತಾಜಾ ಸುದ್ದಿ

ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯಿಂದ ಅಕ್ರಮ ಮಾದಕ ವಸ್ತುಗಳು ವಶಕ್ಕೆ

By Dinamaana Kannada News
Davanagere
ತಾಜಾ ಸುದ್ದಿಅಪರಾಧ ಸುದ್ದಿ

Davanagere | ಹಾವು ಕಚ್ಚಿ ಬಾಲಕಿ ಸಾವು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?