Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > DAVANAGERE : ಮಾದಿಗ ಸಮಾಜಕ್ಕೆ ಒಳ‌ಮೀಸಲಾತಿ ಜಾರಿ ಹಿನ್ನೆಲೆ ವಿಜಯೋತ್ಸವ
ತಾಜಾ ಸುದ್ದಿ

DAVANAGERE : ಮಾದಿಗ ಸಮಾಜಕ್ಕೆ ಒಳ‌ಮೀಸಲಾತಿ ಜಾರಿ ಹಿನ್ನೆಲೆ ವಿಜಯೋತ್ಸವ

Dinamaana Kannada News
Last updated: August 3, 2024 6:38 am
Dinamaana Kannada News
Share
DAVANAGERE
ಮಾದಿಗ ಸಮಾಜ ವಿಜಯೋತ್ಸವ
SHARE

ದಾವಣಗೆರೆ (Davangere district ) : ಒಳ ಮೀಸಲಾತಿ ಜಾರಿ ಮಾಡುವಂತೆ ನೀಡಿರುವ ಆದೇಶ ಹಿನ್ನೆಲೆ ಮಾದಿಗ ಸಮಾಜದಿಂದ  ನಗರದ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿ. ಒಳಮೀಸಲಾತಿಗಾಗಿ ಹೋರಾಟ ನಡೆಸಿದವರಿಗೆ ಸಮಾಜದವರು ಕೃತಜ್ಞತೆ ಸಲ್ಲಿಸಿದರು.

 ಮಾದಿಗ ಸಮಾಜದ ಮುಖಂಡ ಆಲೂರು ನಿಂಗರಾಜ್, ಕರ್ನಾಟಕದಲ್ಲಿ ಮಾದಿಗ ಸಮಾಜಕ್ಕೆ ಉದ್ಯೋಗ ಸಾಮಾಜಿಕ, ಶೈಕ್ಷಣಿಕ ಹಾಗು ಇನ್ನಿತರೆ ಮೀಸಲಾತಿ ಸವಲತ್ತನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ (ಒಳಮೀಸಲಾತಿ) ಜಾರಿ ಮಾಡುವಂತೆ ಈ ಹಿಂದೆ ಕರ್ನಾಟಕದ ಅಂಬೇಡ್ಕರ್ ಎಂದೇ ಪ್ರಾಖ್ಯಾತರಾಗಿದ್ದ ಪ್ರೋ. ಬಿ. ಕೃಷ್ಣಪ್ಪನವರು 1996ರಲ್ಲಿ ಪ್ರತ್ಯೇಕ ಮೀಸಲಾತಿಗಾಗಿ ಹೋರಾಟದ ಹಣತೆ ಹಚ್ಚಿದರು ಎಂದು ನೆನಪಿಸಿಕೊಂಡರು.

ನಂತರ 1997ರಲ್ಲಿ ಪ್ರೋ.ಬಿ.ಕೆ. ಕೃಷ್ಣಪ್ಪ ಮೃತರಾದಾಗ ಕರ್ನಾಟಕದಲ್ಲಿದ್ದ ಮಾದಿಗ ಸಂಬಂಧಿತ ಕರ್ನಾಟಕದ ದಲಿತ ಸಂಘಟನೆಗಳು, ಮಾದಿಗ ಸಂಘಟನೆಗಳು, ಅಂಬೇಡ್ಕರ್ ಸಂಘಟನೆಗಳೆಲ್ಲವು ಸೇರಿ ಪ್ರತಿಭಟನೆ, ಧರಣಿ ಅರಬೆತ್ತಲೆ ಜೈಲು ಬೋರೋ ಚಳುವಳಿ ಉಪವಾಸ ಸತ್ಯಗ್ರಹಗಳಾದಂತಹ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದರಿಂದ ಅಂದಿನ 2004ರಲ್ಲಿ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣರವರು ಒಳ ಮೀಸಲಾತಿಗಾಗಿ ಅಧ್ಯಯನ ನಡೆಸಿ ವರದಿ ಕೊಡುವಂತೆ ನ್ಯಾಯಮೂರ್ತಿ ಎ.ಜೆ. ಸದಾಶಿವರವರನ್ನು ನೇಮಕ ಮಾಡಿತ್ತು. ನಂತರ ಸುಮಾರು ವರ್ಷಗಳ ಅಧ್ಯಯನ ಮಾಡಿ ವರದಿ ತಯಾರಿಸಿದ್ದರೂ ಕೂಡ ಸಾಮಾಜಿಕ ನ್ಯಾಯದ  ಮಂಚೂಣಿ ನಾಯಕ ಎಂದು ಬಿಂಬಿಸಿಕೊಂಡಿದ್ದ  ಸಿದ್ದರಾಮಯ್ಯನವರು ಸತತ 5 ವರ್ಷ ಪೂರ್ಣಾವಧಿ ಮುಖ್ಯಮಂತ್ರಿಗಳಾಗಿದ್ದರೂ ಕೂಡ ಮಾದಿಗ ಸಮಾಜಕ್ಕೆ ಏನು ಮಾಡಲಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದರು.

ಇಂತಹ ಸಂದರ್ಭದಲ್ಲಿ ಸಂಘ ಪರಿವಾರದ ಮಾರ್ಗದರ್ಶನದಂತೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ಅವಧಿಯಲ್ಲಿ ಕೇವಲ ಶೇ. 15 ಇದ್ದ ಮೀಸಲಾತಿಯನ್ನು ಶೇ. 17ಕ್ಕೆ ಹೆಚ್ಚಿಸಿದ್ದಲ್ಲದೇ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಜಾತಿಯಲ್ಲಿ ಬರುವ 101 ಜಾತಿಗಳಿಗೂ ಸಮನಾಗಿ ಅಂದರೆ ಮಾದಿಗ ಜಾತಿಗೆ ಶೇ. 6 ವಲಯ ಜಾತಿಗೆ ಶೇ. 5.5, ಭೋವಿ ಲಂಬಾಣಿ ಜಾತಿಗಳಿಗೆ 4.5 ಮತ್ತು ಇತರೆ ಹಕ್ಕಿಪಿಕ್ಕಿ ಜಾತಿಗಳಿಗೆ ಶೇ. 1 ಮೀಸಲಾತಿಯ ಆಯೋಗ ರಚನೆ ಮಾಡಿ ಅವಕಾಶ ಮಾಡಿಕೊಟ್ಟರು ಎಂದು ತಿಳಿಸಿದರು.

READ ALSO : DAVANAGERE JUDGMENT NEWS : ಪ್ರೀತಿಸು ಎಂದು ಚುಡಾಯಿಸಿದ ವ್ಯಕ್ತಿಗೆ ಕಾರಾಗೃಹ ಶಿಕ್ಷೆ !

ಈ ವಿಚಾರದಲ್ಲಿ ನಮ್ಮ ಸಮುದಾಯದ ಆಶಯಗಳನ್ನು ಈಡೇರಿಸುವಂತಹ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರು ಹೈದ್ರಾಬಾದಿನಲ್ಲಿ ನಡೆದ ಮಾದಿಗ ಸಮಾವೇಶದಲ್ಲಿ ಪಾಲ್ಗೊಂಡು ಭರವಸೆ ಕೊಟ್ಟಿದ್ದರು. ಆದರೆ ಕರ್ನಾಟಕದಲ್ಲಿದ್ದಂತಹ ಕಾಂಗ್ರೆಸ್ ಮೀಸಲಾತಿ ಜಾರಿ ಮಾಡುವಲ್ಲಿ ವಿಳಂಬ ಮಾಡಿ ಗೊಂದಲ ಉಂಟು ಮಾಡಿದ್ದರಿಂದ ನಮ್ಮ ಸಮಾಜದ ಮುಖಂಡರುಗಳು ಸುಪ್ರೀಂ ಕೋರ್ಟಿಗೆ ಹೋಗಿದ್ದರು. ಸುಪ್ರಿಂ ಕೋರ್ಟ್‌ನ 7  ನ್ಯಾಯಾಧೀಶರ ಪೀಠವು ಆಗಸ್ಟ್ 1ನೇ ರಂದು ಒಳ ಮೀಸಲಾತಿಯನ್ನು ಜಾತಿ ಜನಸಂಖ್ಯೆಗನುಗುಣಾವಾಗಿ ಹಂಚಿಕೆ ಮಾಡಬಹುದೆಂದು ಐತಿಹಾಸಿಕ ತೀರ್ಪನ್ನು ನೀಡಿದ್ದು ಇದು ನಿಜಕ್ಕೂ ಮಾದಿಗ ಸಮಾಜದ ನಡೆಸಿದ ಹೋರಾಟಕ್ಕೆ ಸಿಕ್ಕ ಫಲವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಇಲ್ಲಿನ ಕಾಂಗ್ರೆಸ್ ಸರ್ಕಾರವು ಕೋರ್ಟ್ ಆದೇಶವನ್ನು ತತ್‌ಕ್ಷಣದಿಂದಲೇ ಪುರಸ್ಕರಿಸಿ ಎಲ್ಲಾ ಇಲಾಖೆಗೂ ಆದೇಶವನ್ನು ಕಳಿಸಿ ಜಾರಿಗೊಳಿಸುವಂತೆ ಮಾಡಬೇಕೆಂದು ಒತ್ತಾಯಿಸಿದರು‌.

ದಲಿತ ಮುಖಂಡರಾದಂತಹ ಹೆಚ್. ಮಲ್ಲೇಶ್, ಎಂ. ಹಾಲೇಶ್, ಶಾಮನೂರು ರಾಜು, ಜಯಪ್ರಕಾಶ್, ಹಾಲೇಶ್ ಜಿಗಳಿ, ಹನುಮಂತಪ್ಪ ಗಾಂಧಿನಗರ, ಅಂಜಿನಪ್ಪ, ರಾಜಪ್ಪ, ದುರ್ಗೆಶ್ ನಿಟ್ಟುವಳ್ಳಿ, ಆನಂದ ಜಾಲಿಹಾಳ್, ನಿಂಗರಾಜ್ ರೆಡ್ಡಿ, ಸಾವಜ್ಜರ್ ಮಂಜು, ಷಣ್ಮುಖ, ಸೊಮ್ಹಾಪುರ ಹನುಮಂತಪ್ಪ, ರಾಮಚಂದ್ರಪ್ಪ, ರಾಘವೇಂದ್ರ, ರವಿ ಕೆಟಿಜೆ ನಗರ, ಮಾನು, ಚೇತನ್, ಜಯಣ್ಣ ಎಸ್‌.ಓ.ಜಿ. ಕಾಲೋನಿ, ಚಿಕ್ಕನಹಳ್ಳಿ ಹನುಮಂತಪ್ಪ, ಹಾಗೂ ಇತರರು ಪಾಲ್ಗೊಂಡಿದ್ದರು.

TAGGED:Davangeredinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davangere DAVANAGERE JUDGMENT NEWS : ಪ್ರೀತಿಸು ಎಂದು ಚುಡಾಯಿಸಿದ ವ್ಯಕ್ತಿಗೆ ಕಾರಾಗೃಹ ಶಿಕ್ಷೆ !
Next Article Linganamakki Dam Linganamakki Dam : ಲಿಂಗನಮಕ್ಕಿ ಡ್ಯಾಂನಿಂದ ಭಾರೀ ನೀರು ಶರಾವತಿ ನದಿಗೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಕನ್ನಡ ನಾಡು ನುಡಿಯ ಪರವಾಗಿ ನಿಲ್ಲುವೆ :  ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ : ಕನ್ನಡ ನಾಡು ನುಡಿಯ ಪರವಾಗಿ ಸದಾ ನಿಲ್ಲುವೆ ಎಂದು ದಾವಣಗೆರೆ ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.…

By Dinamaana Kannada News

ಸಚಿವರಿಂದ ಮಾವು-ಹಲಸು ಇತರೆ ಹಣ್ಣುಗಳು ಪ್ರದರ್ಶನದ ಪೋಸ್ಟರ್ ಬಿಡುಗಡೆ

ದಾವಣಗೆರೆ (Davanagere): ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಜೂನ್ 16 ರಿಂದ 18 ರವರೆಗೆ ಹಮ್ಮಿಕೊಂಡಿರುವ ಮಾವು, ಹಲಸು…

By Dinamaana Kannada News

Davanagere | ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ   

ದಾವಣಗೆರೆ (Davanagere): ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ ಮಾಡಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ 20…

By Dinamaana Kannada News

You Might Also Like

Aadhar
ತಾಜಾ ಸುದ್ದಿ

ಆಧಾರ್‌ ಕಾರ್ಡ್‌..  ಬಯೋಮೆಟ್ರಿಕ್ ಅಪ್‌ಡೇಟ್‌ ಏಕೆ?

By Dinamaana Kannada News
Eeshwaramma Higher Primary and High School
ತಾಜಾ ಸುದ್ದಿ

ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಿ : ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ

By Dinamaana Kannada News
Modern Dairy Training
ತಾಜಾ ಸುದ್ದಿ

ದಾವಣಗೆರೆ|ಆಧುನಿಕ ಹೈನುಗಾರಿಕೆ ತರಬೇತಿ

By Dinamaana Kannada News
Power outage
ತಾಜಾ ಸುದ್ದಿ

ದಾವಣಗೆರೆ |ಜು. 26 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?