ದಾವಣಗೆರೆ (Davanagere) : ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳನ್ನು ರಾಷ್ಟಸಂತ ಎಂದು ಘೋಷಣೆ ಮಾಡಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ದಾವಣಗೆರೆ ನಗರದ ಕೊಂಡಜ್ಜಿ ರಸ್ತೆಯ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿ ಸರ್ಕಲ್ ಯುವಕರ ಬಳಗದಿಂದ ಸೋಮವಾರ ಹಮ್ಮಿಕೊಂಡಿದ್ದ 6 ನೇ ವರ್ಷದ ಡಾ. ಶಿವಕುಮಾರ ಸ್ವಾಮಿಗಳ ಸ್ಮರಣೋತ್ಸವ ಮತ್ತು ಪುತ್ತಳಿ ಅನಾವರಣ ಹಾಗೂ ದಾಸೋಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಡೆದಾಡುವ ದೇವರು ಎಂದೇ ಜನಮಾನಸದಲ್ಲಿ ನೆಲೆಸಿರುವ ಸಿದ್ದಗಂಗಾ ಶ್ರೀಗಳನ್ನು ಸರಕಾರ ಕೂಡಲೇ ರಾಷ್ಟ್ರಸಂತ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಸಮಾಜದಲ್ಲಿ ವಿವಿಧ ಪೀಠದ ಶ್ರೀಗಳಿಗೆ, ಶರಣರಿಗೆ ಗೌರವ ಮರ್ಯಾದೆಗಳು ದೊರೆಯುತ್ತಿದೆ ಎಂದರೆ ‘ನಡೆದಾಡುವ ದೇವರು’ ಎಂದೇ ಪ್ರಸಿದ್ಧಿ ಹೊಂದಿದ್ದ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳು ಮಾಡಿದ ಸೇವೆ, ಬದುಕಿದ ಆದರ್ಶ ಜೀವನವೇ ಕಾರಣ” ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಸ್ಮರಿಸಿದರು.
“ತ್ರಿವಿಧ ದಾಸೋಹಿ ನಡೆದಾಡುವ ದೇವರು ಎಂದ ಖ್ಯಾತರಾಗಿದ್ದ ಸಿದ್ದಗಂಗಾ ಶಿವಕುಮಾರ ಶ್ರೀಗಳು ನಾಡಿನ ಎಲ್ಲಾ ಶರಣರಿಗೂ, ಎಲ್ಲಾ ಪೀಠದ ಶ್ರೀಗಳಿಗೂ ಆದರ್ಶಪ್ರಾಯರಾಗಿದ್ದಾರೆ. ಅವರು ಅನ್ನದಾಸೋಹ, ಅಕ್ಷರದಾಸೋಹ ಕೈಗೊಂಡು ನಾಡಿನ ಎಲ್ಲ ಜನರಿಗೆ ಜಾತಿ ಧರ್ಮ ಬೇಧಗಳಿಲ್ಲದೆ ಮಾಡಿದ ಅವರ ತ್ರಿವಿಧ ದಾಸೋಹ ಎಲ್ಲರಿಗೂ ಮಾದರಿ. ಹಾಗಾಗಿ ಜನ ಅವರನ್ನು ನಡೆದಾಡುವ ದೇವರು ಎಂದು ಕರೆಯುತ್ತಿದ್ದರು. ಇಂದು ಸಮಾಜದಲ್ಲಿ ಹಲವು ಪೀಠದ ಶ್ರೀಗಳಿಗೆ ಶರಣರಿಗೆ ಅಲ್ಪಸ್ವಲ್ಪ ಮರ್ಯಾದೆ ಗೌರವ ಸಿಗುತ್ತಿದೆ ಎಂದರೆ ಅದಕ್ಕೆ ಸಿದ್ಧಗಂಗಾ ಶ್ರೀಗಳಂತ ಮಹಾಪುರುಷರು ಕಾರಣ ಎಂದು ಅಭಿಪ್ರಾಯಪಟ್ಟರು.
ದಾವಣಗೆರೆ ವಿರಕ್ತಪೀಠದ ಬಸವಕುಮಾರ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಮರುಳ ಶಂಕರ ಗುರುಪೀಠದ ಸಿದ್ದ ಬಸವ ಕಬೀರ ಶ್ರೀಗಳು, ಚಿತ್ರದುರ್ಗ ಐಮಂಗಲದ ಹರಳಯ್ಯ ಪೀಠದ ಶ್ರೀ ಬಸವ ಹರಳಯ್ಯ ಶ್ರೀಗಳು, ಬೆಂಗಳೂರಿನ ಸರ್ವಧರ್ಮ ಸಮನ್ವಯಪೀಠದ ಸಂಗಮಾನಂದ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಮಾಜಿ ಸಂಸದ ಜಿ ಎಂ ಸಿದ್ದೇಶ್ವರ, ಮಾಜಿ ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಯಶವಂತ ರಾವ್ ಜಾಧವ್, ಕಾಂಗ್ರೇಸ್ ಮುಖಂಡ ಬಕ್ಕೇಶ್, ವಾಣಿ ಬಕ್ಕೇಶ್ ಧೂಡಾ ಸದಸ್ಯರು, ಬಿಜೆಪಿ ಮುಖಂಡರಾದ ಪುಲಾಯ್, ನವೀನ್ ಕುಮಾರ್, ಮಂಜುನಾಥ್ ಪಿಬಿ, ವೀರೇಶ್ ಹೆಚ್ ಎಸ್, ಜೆಎಚ್ ಪಟೇಲ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮುಸ್ತಫಾ, ಸಿದ್ದಗಂಗಾ ಶಿವಕುಮಾರ ಸರ್ಕಲ್ ಯುವಕರ ಸಂಘದ ಅಧ್ಯಕ್ಷ ಶಂಕರ್ ಶಿರೇಕರ್, ಸಮಿತಿಯ ಸದಸ್ಯರು ಸಾರ್ವಜನಿಕರು ಭಾಗವಹಿಸಿದ್ದರು.
Read also : Crime news | ಆಟೋದಲ್ಲಿ ಲ್ಯಾಪ್ಟ್ಯಾಪ್ ಬಿಟ್ಟು ಹೋದ ಮಹಿಳೆ : 24 ಗಂಟೆಯಲ್ಲಿ ಪತ್ತೆ ಹಚ್ಚಿದ ಪೊಲೀಸ್