Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > my poem | ನನ್ನ ಕವಿತೆ ….
Blog

my poem | ನನ್ನ ಕವಿತೆ ….

Dinamaana Kannada News
Last updated: October 25, 2024 4:59 am
Dinamaana Kannada News
Share
Literature
ಪಿ.ಆರ್. ವೆಂಕಟೇಶ್
SHARE

ನೀವೆಂದೂ  ನನ್ನ ಕವಿತೆಯೊಂದಿಗೆ
ನಡೆಯಲಾರಿರೆ
ಅವಳ ಜಾಡು ಸಿಗದು ನಿಮಗೆ
ಅವಳ ದಾರಿಯೇ ಬೇರೆ
ನಿಮ್ಮ ವ್ಯಂಗ್ಯ ಘೊಷಿಸಬಹುದು
ಬರೀ ಮುಳ್ಳಿನ ದಾರಿಯೆಂದು
ಮುಳ್ಳಿನ ಮೇಲೆ
ನೀವು ತುಳಿದ ಹೂಗಳನ್ನು
ಅರಳಿಸುತ್ತಾಳೆ ಅವಳು.
ಯಾವ ನಿಶೆಗೂ ಬಗ್ಗದವಳು
ನೆಲದ ನಂಟಿನ ದೃಢ ಹೆಜ್ಜೆಯ
ನೇರನಡೆ ಅವಳದು
ನೆಲದ ಸೂರ್ಯ ಮಾತ್ರ
ಅವಳೊಂದಿಗೆ ನಿರಂತರ ನಡೆಯಬಲ್ಲ.
ಸಾವನ್ನು ಉಡಿಯಲಿ ಕಟ್ಟಿಕೊಂಡ
ದುರ್ಗಮದ ಕೊರಕುಗಳ ಹಾಯುತ್ತಾಳೆ
ಹೊಣೆಯರಿತ ಕಾಯಕದ ಅವಳು ನಡೆದಲೆಲ್ಲಾ ಜಿವಂತ ಕನಸುಗಳ‌ ನಾಟಿ.

 

 

ನಿಮ್ಮನ್ನು ಮೆಚ್ಚಿಸಲಾರಳು ಅವಳು
ಕಲಾತ್ಮಕತೆಯ ಕುಸುರಿಲ್ಲ, ಸುಂದರ ಪದಗಳ  ಧಿರಿಸಿಲ್ಲ
ಕಲ್ಪನೆಯ ಖರಾಮತ್ತುಗಳಿಲ್ಲ, ಭ್ರಮೆಯ ಬಣ್ಣಗಳಿಲ್ಲ.
ನೀವು ಉಗಿದ ಕಸ, ಚಿಂದಿಯ ರಾಶಿ,  ತಿಪ್ಪೆ, ಉಪ್ಪಿನ ಘಮಟು,, ಕಕ್ಕಿದ ಕೀವಿನೊಂದಿಗೆ
ಬದುಕ ಕಟ್ಟಿಕೊಳ್ಳುವುದೆ ಅವಳ ಕಲಾತ್ಮಕ ಜಗತ್ತು
ಕಸ ಬಸಿದು ರಸ ಉಣಿಸುತ್ತಾಳೆ
ಚಿಂದಿಗಳ ಹೊಲೆದು
ಚಳಿಗೆ ನಡುಗುವ ಜಗದ ಹೃದಯಕೆ ಬೆಚ್ಚಗಿನ ಕಾವು ಕೊಡುತ್ತಾಳೆ
ನಿದ್ದೆಗಾಗಿ ಹಳಹಳಿಸಿ ಡನ್ ಲಪ್ ಹಾಸಿಗೆಯಲಿ ಹೊರಳಾಡುವ ನಿಮಗೆ
ಆ ಕಾವಿನ ರುಚಿ ದಕ್ಕದು ಬಿಡಿ.

 

 

ನನ್ನ ಕವಿತೆ ನಿಮ್ನಳತೆಗೆ ಸಿಗಲಾರಳು
ಅವಳ ಸೌಂದರ್ಯ ದಕ್ಕದು ನಿಮಗೆ
ಬೆವರ ಮಣಿ ತೊಟ್ಟ ಧೀರೆ ಅವಳು
ಕೊಡುವುದಷ್ಟೇ ಗೊತ್ತು ಕಸುದ ರೂಢಿಯಿಲ್ಲ ಅವಳಿಗೆ
ಎಲ್ಲ ಕಣ್ಣಿಗಳ ಕಿತ್ತ ಮುಕ್ತೆ ಅವಳು
ನಿಮ್ಮ ಜಾಣ ಕುರುಡಿಗೆ ಬಲಿಯಾದವಳು
ಅವಳನ್ನೊಮ್ಮೆ ತಡವಿ ನೋಡಿ
ಆಯುಧವಾಗುತ್ತಾಳೆ
ಆಯುಧದ ಹರಿತ ನಿಮಗೆ ದಕ್ಕಿದರೆ ನೀವು ಸಾಯುತ್ತೀರಿ ಮತ್ತೆ ಹುಟ್ಟುತ್ತೀರಿ
ಬಣ್ಣಗಳಿಲ್ಲದ ಬಟ್ಟೆ ತೊಟ್ಟ ಹೊಸ ಬದುಕೊಂದಿಗೆ
ಅವಳಲ್ಲಿ   ಸಿಡಿಮದ್ದಿನ ಸ್ಫೋಟವಿದೆ
ಯಾರ ಮನೆಗೂ ಸಿಡಿಯಲ್ಲಿಲ್ಲ
ಪ್ರೀತಿಯ ತೋಟಕೆ  ಜಂಗಳ ಕಾಯುವ ಬೇಲಿಯವಳು

 

 

 

ಅವಳು  ಶ್ರಮದ ಹಣತೆ
ಪಾಂಡಿತ್ಯದ ಗೊಡವೆಗೆ ಹೋಗದವಳು
ಹಣತೆಯ ಬೆಳಕಲ್ಲಿ
ಜತನಗೊಂಡ ಜವಾಬ್ದಾರಿಯಂತೆ
ಮುಲಾಮು ಹುಡುಕುತ್ತಾಳೆ
ಬದುಕ ಹೋರಾಟದಲಿ ಗಾಯಗೊಂಡ
ಶ್ರಮದ ಮಕ್ಕಳ ಗಾಯ ಸವರಲು.
ನಿಮ್ಮ ಮೌನದೊಂದಿಗೆ ಸಂವಾದಿಸಲು
ಬಿಡುವಿಲ್ಲ. ಅವಳಿಗೆ
ಹದಗೆಟ್ಟ ರಸ್ತೆಗೆ ಡಾಂಬರು ಹಾಸಬೇಕು
ಕಟ್ಟಡಕ್ಕೆ ಕಲ್ಲು ಕಟೆಯಬೇಕು
ಕತ್ತಲೆಯಲ್ಲಿ  ಹೂತ ಚುಕ್ಕೆಗಳ ಹುಡುಕಿ
ಜಗದ ಅಂಗಳಕೆ ರಂಗೋಲಿ ಹೊಯ್ಯಬೇಕು
ಅವಳು ಸೌಂದರ್ಯದ ಗಣಿ
ದ್ವೇಷ ಮಥಿಸಿದ ಪ್ರೀತಿ ಹೃದಯಕೆ
ಬೆಳದಿಂಗಳ ಹಾಲವಳು.

 

Read also : poem | ನಾ ಹೊಲೆದ ಕೆರವ ನಾ ಮೆಟ್ಟಿದ್ದರೆ

 

ಪಿ.ಆರ್. ವೆಂಕಟೇಶ್

TAGGED:dinamaana.comliteraturemy-poempr-venkateshದಿನಮಾನ.ಕಾಂನನ್ನ-ಕವಿತೆವೆಂಕಟೇಶ್ಸಾಹಿತ್ಯ
Share This Article
Twitter Email Copy Link Print
Previous Article davanagere Davanagere | ಯತ್ನಾಳ, ಸಿ.ಟಿ.ರವಿ, ಸೂಲಿಬೆಲೆ ಚಕ್ರವರ್ತಿ ವಿರುದ್ದ ದೂರು ದಾಖಲು
Next Article Davanagere Davanagere | ಅ.26, 27 ರಂದು ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ನೊಂದ ನೆರಿಗೆಯ ಸ್ವಾಗತ 

  ಆಕಾಶದ ನೀಲಿಯಲಿ ಚಂದ್ರ ತಾರೆ ತೊಟ್ಟಿಲಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರಷ್ಟೇ ಸಾಕೆ…

By Dinamaana Kannada News

ಭಾರತಾಂಬೆಯ ಮಕ್ಕಳು ಜಯಶಾಲಿಯಾಗಿ ವಿಜಯ ಪತಾಕೆ ಹಾರಿಸಲಿ

ದಾವಣಗೆರೆ (Davanagere): ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಪಾಕಿಸ್ತಾನದ ಪಾಪಿ ಗಳನ್ನು ಸದೆ ಬಡಿದು  ಭಾರತಾಂಬೆಯ ಮಕ್ಕಳು…

By Dinamaana Kannada News

ಸವಿತಾ ಸಮಾಜ ಅಭಿವೃದ್ದಿ ನಿಗಮ : ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ದಾವಣಗೆರೆ (Davanagere) : ಕರ್ನಾಟಕ ಸವಿತಾ ಸಮಾಜ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

Davanagere | ಕಂಪ್ಯೂಟರ್ ಆಧಾರಿತ ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಪರೀಕ್ಷೆಗಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯದಿಂದಿರಿ : ರೈತರಿಗೆ ಸಚಿವರಿಂದ ಅಭಯ

By Dinamaana Kannada News
Davanagere
ತಾಜಾ ಸುದ್ದಿ

ತಾನಾಗಬಲ್ಲ-ತಾನಾಗಿಸಬಲ್ಲ ಇದು ಶಿಕ್ಷಕನಲ್ಲಿರುವ ಗುಣಧರ್ಮ : ಡಾ|| ರಾಘವೇಂದ್ರ ಗುರೂಜಿ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?