Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere : ಭದ್ರಾ ಕಾಲುವೆ- ಮಳೆ ನೀರು ಹರಿದು ನೆರೆ ಹಾನಿ: ಶಾಸಕ ಕೆ.ಎಸ್.ಬಸವಂತಪ್ಪ ಪರಿಶೀಲನೆ
ತಾಜಾ ಸುದ್ದಿ

Davanagere : ಭದ್ರಾ ಕಾಲುವೆ- ಮಳೆ ನೀರು ಹರಿದು ನೆರೆ ಹಾನಿ: ಶಾಸಕ ಕೆ.ಎಸ್.ಬಸವಂತಪ್ಪ ಪರಿಶೀಲನೆ

Dinamaana Kannada News
Last updated: August 14, 2024 1:12 pm
Dinamaana Kannada News
Share
davanagere
ಭದ್ರಾ ಕಾಲುವೆ ಮತ್ತು ಮಳೆ ನೀರು ಹರಿದು ನೆರೆಹಾನಿಯಾದ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕಬ್ಬೂರಿ ಗ್ರಾಮಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
SHARE
ದಾವಣಗೆರೆ  (Davanagere) : ಮಾಯಕೊಂಡ ಕ್ಷೇತ್ರದ  ವ್ಯಾಪ್ತಿಯ ಭದ್ರಾ ಕಾಲುವೆಯಲ್ಲಿ ನೀರು ತುಂಬಿ ಹರಿದು ನೆರೆ ಹಾನಿಯಾದ ಪ್ರದೇಶಗಳಿಗೆ ಬುಧವಾರ ಶಾಸಕ ಕೆ.ಎಸ್.ಬಸವಂತಪ್ಪ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭದ್ರಾ ಜಲಾಶಯದಿಂದ ಈಗಾಗಲೇ ಎಡ ಮತ್ತು ಬಲ ದಂಡೆ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಿದ್ದು, ನೀರು ಭದ್ರಾ ಕಾಲುವೆಯಲ್ಲಿ ಹರಿದು ಬರುತ್ತಿದೆ. ಬುಧವಾರ ಬೆಳಗಿನಜಾವ ಸುರಿದ ಧಾರಾಕಾರ ಮಳೆಯಿಂದ ಹಳ್ಳ- ಕೊಳ್ಳಗಳಲ್ಲಿ ಹರಿಯುತ್ತಿರುವ ನೀರು ಭದ್ರಾ ಕಾಲುವೆಗೆ ಸೇರಿದ ಪರಿಣಾಮ ಭದ್ರಾ ಕಾಲುವೆ ಕಿತ್ತುಕೊಂಡು ಜಮೀನುಗಳಿಗೆ ನೀರು ನುಗ್ಗಿದೆ. ಬ್ರಿಡ್ಜ್ ಗಳು ಮತ್ತು ರಸ್ತೆಗಳು ಹಾನಿಯಾಗಿವೆ.
ನೆರೆ ಹಾನಿ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಶಾಸಕ ಕೆ.ಎಸ್.ಬಸವಂತಪ್ಪ (MLA K.S.Basavanthappa) ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕಬ್ಬೂರು ಗ್ರಾಮಕ್ಕೆ ಭೇಟಿ ನೀಡಿ ಹಾನಿಯಾದ ಪ್ರದೇಶಗಳನ್ನು ಪರಿಶೀಲನೆ ನಡೆಸಿದರು.
ಭದ್ರಾ ಕಾಲುವೆಗಳಿಗೆ ಬಿಟ್ಟಿದ್ದ ನೀರಿನ ಪ್ರಮಾಣಕ್ಕಿಂತ ಹೆಚ್ಚು ನೀರು ಬುಧವಾರ ಬೆಳಗಿನಜಾವ ಸುರಿದ ಮಳೆಯಿಂದ ಕಾಲುವೆಯಲ್ಲಿ ಹರಿದ ಪರಿಣಾಮ ಮೊದಲೇ ಸುಮಾರು 50 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಕಾಲುವೆಗಳು, ಬ್ರಿಡ್ಜ್ ಗಳು ಹಾಳಾಗಿವೆ. ಜಲಾಶಯದಿಂದ ಬಿಟ್ಟ ನೀರು, ಮಳೆ ನೀರು ಸೇರಿ ಕಾಲುವೆಗಳು ತುಂಬಿ ಹರಿದು ಕಾಲುವೆ ಮಾರ್ಗಗಳಲ್ಲಿ ನೆರೆ ಹಾನಿಯಾಗಿ ಜಮೀನುಗಳಿಗೆ ನೀರು ನುಗ್ಗಿದೆ, ರಸ್ತೆಗಳು ಹಾಗೂ ಹಾಳಾಗಿದ್ದ ಕಾಲುವೆ, ಬ್ರಿಡ್ಜ್ ಗಳು ಮತ್ತಷ್ಟು ಹಾನಿಯಾಗಿವೆ ಎಂದು ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮನೋಜ್ ಶಾಸಕರಿಗೆ ಮಾಹಿತಿ ನೀಡಿದರು.
ರಾತ್ರಿ ಸುರಿದ ಮಳೆ ನೀರು ಕಾಲುವೆಗೆ ಸೇರಿ ಹರಿದ ಪರಿಣಾಮ ಅಲ್ಲಲ್ಲಿ ಕಾಲುವೆ ಕಿತ್ತುಕೊಂಡು ಹೊಲಗಳಿಗೆ ನೀರು ನುಗ್ಗಿದೆ. ಬ್ರಿಡ್ಜ್, ರಸ್ತೆಗಳು ಹಾಳಾಗಿವೆ. ಇದರಿಂದ ಬೆಳೆಗಳು ಹಾನಿಯಾಗಿವೆ. ಕೂಡಲೇ ಭದ್ರಾ ಕಾಲುವೆ ಆಧುನೀಕರಣಗೊಳಿಸಿ ಕಾಮಗಾರಿ ಶಾಶ್ವತವಾಗಿ ಉಳಿಯುವಂತೆ ಮಾಡಬೇಕೆಂದು ಗ್ರಾಮಸ್ಥರು ಶಾಸಕರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡರು.
ಭದ್ರಾ ಕಾಲುವೆಯಲ್ಲಿ ಹರಿಯುವ ನೀರು ತಗ್ಗಿದ ಮೇಲೆ ಕೂಡಲೇ ತಾತ್ಕಾಲಿಕ ದುರಸ್ತಿ ಮಾಡಿ ನೀರು, ಜಮೀನುಗಳಿಗೆ ನುಗ್ಗದಂತೆ, ರಸ್ತೆಗಳಿಗೆ ಹರಿದು ಹಾನಿಯಾಗದಂತೆ ಕ್ರಮ ವಹಿಸಬೇಕು. ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಮಾರು 50 ವರ್ಷಗಳ ಹಿಂದಿನ ಭದ್ರಾ ಕಾಲುವೆ ಮಾರ್ಗದಲ್ಲಿ ಕಾಲುವೆಗಳು, ಬ್ರಿಡ್ಜ್ ಗಳು ಕಿತ್ತುಕೊಂಡಿ ಹೋಗಿ ಹಾನಿಯಾಗಿರುವ ಬಗ್ಗೆ  ಈಗಾಗಲೇ ಸದನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆದಿದ್ದೇನೆ.
ಕಂದಾಯ ಸಚಿವ ಕೃಷ್ಣಭೈರೇಗೌಡ ಹಿರಿಯ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಭದ್ರಾ ಕಾಲುವೆಗಳ ಆಧುನೀಕರಣಗೊಳಿಸುವುದಾಗಿ ಭರವಸೆ ನೀಡಿದರು.

 

 

Read also : Davanagere Scholarship : ವಿದ್ಯಾಸಿರಿ, ಶುಲ್ಕ ಮರುಪಾವತಿ, ವಿದ್ಯಾರ್ಥಿವೇತನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬಳಿಕ ಮಳೆ ಮತ್ತು ಭದ್ರಾ ಕಾಲುವೆ ತುಂಬಿ  ನೀರು ಹರಿದು ನೆರೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಬ್ಬೂರು ಗ್ರಾಮಸ್ಥರಾದ ಬಸವರಾಜ್ , ಮಲ್ಲಿಕಾರ್ಜುನ್, ರಾಮಗೊಂಡನಹಳ್ಳಿ ಶರಣಪ್ಪ, ರಂಗನಾಥ್ ಹಾಗೂ ನೀರಾವರಿ ಇಲಾಖೆಯ ಆಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.
TAGGED:Davanagere districtDinamana.comLatest Kannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Applications invited Davanagere Scholarship : ವಿದ್ಯಾಸಿರಿ, ಶುಲ್ಕ ಮರುಪಾವತಿ, ವಿದ್ಯಾರ್ಥಿವೇತನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
Next Article DAVANAGERE Davangere University : ಸೃಜನಶೀಲ ಸಾಹಿತ್ಯ ಕಲಿಕೆ ನಿರಂತರ: ಸೊರಟೂರ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಕುತಂತ್ರ, ತಂತ್ರಗಾರಿಕೆ ನಡುವೆ ನೈತಿಕತೆಗೆ ಸೋಲಾಗಿದ್ದು, ಆತ್ಮಸ್ಥೆರ್ಯ ಹೆಚ್ಚಿದೆ : ಡಾ.ವೈ.ಎ.ನಾರಾಯಣಸ್ವಾಮಿ

ದಾವಣಗೆರೆ :  ಕುತಂತ್ರ, ತಂತ್ರಗಾರಿಕೆಗಳ ನಡುವೆ   ನೈ ತಿಕತೆಗೆ ಸೋಲಾಗಿದ್ದು, ಇದರಿಂದ ನಾನು ಕಂಗಾಲಾಗಿಲ್ಲ, ಆತ್ಮವಿಶ್ವಾಸ ವೃದ್ಧಿಯಾಗಿದ್ದು, ಶಿಕ್ಷಕರ ಸೇವೆಯನ್ನು…

By Dinamaana Kannada News

Davanagere punishment news | ಕೊಲೆ : ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

ದಾವಣಗೆರೆ.ಆ.17 (Davangere District) : ಪ್ರಿಯತಮನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದ ಹೆಂಡತಿ ಮತ್ತು ಪ್ರಿಯಕರನಿಗೆ ಜೀವಾವಧಿ ಶಿಕ್ಷೆ …

By Dinamaana Kannada News

Davangere Crime| ಸ್ವಾಮೀಜಿ ಶಿಷ್ಯರೆಂದು ಜನರಿಗೆ ವಂಚನೆ : ಐವರ ಬಂಧನ

ದಾವಣಗೆರೆ.ಆ.19 (Davangere District) : ಐರಣಿ ಮಠದ ಸ್ವಾಮೀಜಿಯ ಶಿಷ್ಯರೆಂದು ಹೇಳಿಕೊಂಡು ಅಸಲಿ ನೋಟಿನ ಕೆಳಗೆ ಬಿಳಿಯ ಹಾಳೆಗಳುಳ್ಳ ಬಾಕ್ಸ್…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

By Dinamaana Kannada News
MLA Basavanthappa
ತಾಜಾ ಸುದ್ದಿ

ಆನಗೋಡಿನಲ್ಲಿ ರೈತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಬಸವಂತಪ್ಪ

By Dinamaana Kannada News
loka adlat davanagere
Blog

ದಾವಣಗೆರೆ ಲೋಕ್ ಆದಾಲತ್‌ : ಸಹಬಾಳ್ವೆ ನಡೆಸಲು 24 ಜೋಡಿಗಳು ನಿರ್ಧಾರ

By Dinamaana Kannada News
Davanagere
ತಾಜಾ ಸುದ್ದಿ

ಅನಧಿಕೃತ ಪಡಿತರ ಚೀಟಿ ಪತ್ತೆಹಚ್ಚಿ,ಹೊಸ ಪಡಿತರಕ್ಕೆಅವಕಾಶ :ಸಚಿವ ಕೆ.ಹೆಚ್.ಮುನಿಯಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?