Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere news | ನೈಜ ಸಾಹಿತ್ಯದಿಂದ ಸಮಾಜ ಪರಿವರ್ತನೆ : ರುದ್ರಪ್ಪ ಹನಗವಾಡಿ
ತಾಜಾ ಸುದ್ದಿ

Davanagere news | ನೈಜ ಸಾಹಿತ್ಯದಿಂದ ಸಮಾಜ ಪರಿವರ್ತನೆ : ರುದ್ರಪ್ಪ ಹನಗವಾಡಿ

Dinamaana Kannada News
Last updated: August 28, 2024 5:13 am
Dinamaana Kannada News
Share
davanagere
ಹರಿಹರ: ಮಾನವ ಬಂಧುತ್ವ ವೇದಿಕೆ, ದಾವಣಗೆರೆ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಿಂದ ಮಂಗಳವಾರ ಹರಿಹರದಲ್ಲಿ ಆಯೋಜಿಸಿದ್ದ ‘ಸಾಹಿತ್ಯದಲ್ಲಿ ಸಂವಿಧಾನದ ಆಶಯಗಳು’ ವಿಷಯ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ರುದ್ರಪ್ಪ ಹನಗವಾಡಿ ಮಾತನಾಡಿದರು. ಪ್ರೊ.ಎ.ಬಿ.ರಾಮಚಂದ್ರಪ್ಪ, ಪ್ರೊ.ದಾದಾಪೀರ್ ನವಿಲೇಹಾಳ್, ಆರ್.ನಾಗರಾಜ್, ಡಾ.ಫಕೀರೇಶ್ ಹಳ್ಳಳ್ಳಿ, ಮದಕರಿ ನಾಯಕ ಎಚ್.ಆರ್ ಇದ್ದರು.
SHARE

ಹರಿಹರ (Davanagere ): ಸಮಾಜದಲ್ಲಿ ಪರಿವರ್ತನೆ ತರುವ ಸಾಮರ್ಥ್ಯ ಇರುವ ಸಾಹಿತ್ಯ ಮಾತ್ರ ನೈಜ ಸಾಹಿತ್ಯ ಎಂದು ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ನ ಟ್ರಸ್ಟಿ ರುದ್ರಪ್ಪ ಹನಗವಾಡಿ ಹೇಳಿದರು.

ಮಾನವ ಬಂಧುತ್ವ ವೇದಿಕೆ, ದಾವಣಗೆರೆ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಸಹಯೋಗದಲ್ಲಿ   ಮೈತ್ರಿ ವನದಲ್ಲಿ ಆಯೋಜಿಸಿದ್ದ ‘ಸಾಹಿತ್ಯದಲ್ಲಿ ಸಂವಿಧಾನದ ಆಶಯಗಳು’ ವಿಷಯ ಕುರಿತ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸಾಹಿತ್ಯದಲ್ಲಿ ಪ್ರಭುತ್ವದಲ್ಲಿರುವವರನ್ನು ಹೊಗುಳುವುದೆ ಸಾಹಿತಿಗಳ ಕೈಂಕರ್ಯವಾಗಿತ್ತು. ಆಗಿನ ಕಾಲದ ಜನ ಸಾಮಾನ್ಯರ, ಮಹಿಳೆಯರು, ಶೋಷಿತರ ಕಷ್ಟಗಳನ್ನು ದಾಖಲಿಸಿರುವುದು ಅಪರೂಪವಾಗಿಯೆ ಉಳಿಯಿತೆಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರಸಕ್ತ ಕಾಲಮಾನದಲ್ಲಿರುವ ಸಾಮಾಜಿಕ ಪಿಡುಗುಗಳು, ಬಡ ಜನರ ಸಂಕಷ್ಟಗಳನ್ನು ನಿವಾರಿಸುವ, ಪ್ರಭುತ್ವದ ಲೋಪಗಳನ್ನು ಬಿಂಬಿಸುವ ಗುರಿ ಸಾಹಿತ್ಯ ರಚನಾಕಾರರಿಗೆ ಇರಬೇಕು. ಸಂವಿಧಾನದ ಅರಿವು ಹೊಂದಿದ್ದರಿAದಲೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪನವರು ಸೊರಬದ ಚಂದ್ರಗುತ್ತಿ ದೇವಾಲಯದಲ್ಲಿ ನಡೆಯುತ್ತಿದ್ದ ದಲಿತ ಮಹಿಳೆಯರ ಬೆತ್ತಲೆ ಸೇವೆ ವಿರುದ್ಧ ಜನಾಂದೋಲನವನ್ನು ರೂಪಿಸಿದರು ಎಂದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಬೋಧನೆ ಮಾಡುವ ಪಠ್ಯವು ಎಷ್ಟೆ ನಂಜಿನಿAದ ಕೂಡಿದ್ದರು ಅಧ್ಯಾಪಕರು ಅದನ್ನು ಸಮಕಾಲಿನ ಸ್ಥಿತಿಗತಿಗೆ ಅನ್ವಯಿಸಿ ಬೋಧಿಸಬೇಕೆಂದರು.

ಒಬ್ಬ ದಲಿತ ಮಹಿಳೆಯನ್ನು ಸಾವಿರಾರು ಜನರ ಸಮ್ಮುಖದಲ್ಲಿ ಬೆತ್ತಲೆ ಮೆರೆವಣಿಗೆ ಮಾಡಿದರೂ ಈಗಿನ ಪ್ರಭುತ್ವದಲ್ಲಿರುವವರು ಪ್ರತಿಕ್ರಿಯಿಸಲಿಲ್ಲ, ಆದರೆ ಬೇಟಿ ಪಡಾವೋ, ಬೇಟಿ ಬಚಾವೋ ಎಂಬ ಘೋಷಣೆ ಮೊಳಗಿಸಿ ಪ್ರಚಾರವನ್ನು ಮಾತ್ರ ಪಡೆಯಲಾಗುತ್ತಿದೆ ಎಂದು ಟೀಕಿಸಿದರು.

ಆದಿ ಕಾಲದಿಂದ ಇದ್ದ ಅನುಪಯುಕ್ತ ಸಾಹಿತ್ಯ ಪರಂಪರೆಗೆ ೧೨ನೇ ಶತಮಾನದಲ್ಲಿ ಬಸವಣ್ಣನವರ ವಚನ ಸಾಹಿತ್ಯ ಪ್ರತಿ ಏಟು ನೀಡಿತು. ಅನುಪಯುಕ್ತ ಸಾಹಿತ್ಯ ಮೇಳೈಸಿದಾಗ ಪ್ರತಿಸಂಸ್ಕೃತಿ ಬಿಂಬಿಸುವ ಪರ್ಯಾಯ ಸಾಹಿತ್ಯ ರಚನೆಯಾಗುಬೇಕಾಗುತ್ತದೆ ಎಂದರು.

Read also : Davanagere news | ಹೆಣ್ಣು ಮಕ್ಕಳ ಹಕ್ಕುಗಳ ಸಂರಕ್ಷಣೆ ಎಲ್ಲಾರ ಜವಾಬ್ದಾರಿ : ನ್ಯಾ.ಮಹಾವೀರ ಮ.ಕರೆಣ್ಣವರ

ನಿವೃತ್ತ ಕನ್ನಡ ಅಧ್ಯಾಪಕ ಪ್ರೊ.ದಾದಾಪೀರ್ ನವಿಲೇಹಾಳ್ ಮಾತನಾಡಿ, ಇನ್ನೊಬ್ಬರ ಸುಖ, ದುಃಖಗಳಿಗೆ ಸ್ಪಂದಿಸುವ ಗುಣ ಕನ್ನಡದ ನೆಲದಲ್ಲಿ ಕಾಣಬಹುದಾಗಿದೆ. ಸಂವಿಧಾನದ ಮೂಲ ಆಶಯಗಳಿಗೆ ಸ್ಪಂದಿಸಿ ರಚಿಸಿದ ಸಾಹಿತ್ಯ ಕನ್ನಡ ಭಾಷೆಯಲ್ಲಿ ಗಣನೀಯ ಸಂಖ್ಯೆಯಲ್ಲಿದೆ ಎಂದರು.

ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟಿನ ಟ್ರಸ್ಟಿ ಆರ್.ನಾಗರಾಜ್ ಮಾತನಾಡಿದರು. ವಿದ್ಯಾರ್ಥಿನಿ ತನುಜ ಪ್ರಾರ್ಥಿಸಿದರು. ಇಂಗ್ಲಿಷ್ ವಿಭಾಗದ ಸಂಯೋಜನಾಧಿಕಾರಿ ಡಾ.ಫಕೀರೇಶ್ ಹಳ್ಳಳ್ಳಿ ಸ್ವಾಗತಿಸಿ, ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಮದಕರಿ ನಾಯಕ ಎಚ್.ಆರ್. ವಂದಿಸಿದರು.

TAGGED:Davanagere districtDinamana.comLatest Kannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere Davanagere news | ಹೆಣ್ಣು ಮಕ್ಕಳ ಹಕ್ಕುಗಳ ಸಂರಕ್ಷಣೆ ಎಲ್ಲಾರ ಜವಾಬ್ದಾರಿ : ನ್ಯಾ.ಮಹಾವೀರ ಮ.ಕರೆಣ್ಣವರ
Next Article davangere Davanagere news | ಒಳಮೀಸಲು ಜಾರಿಗೊಳಿಸಲು ಮಾದಿಗ ಸಮುದಾಯದ ಮುಖಂಡರಿಂದ ಮನವಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ನದಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ : ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮನವಿ

ಹರಿಹರ (Harihara): ತಾಲ್ಲೂಕಿನ ತುಂಗಭದ್ರಾ ನದಿ ಹಾಗೂ ಸೂಳೆಕೆರೆ ಹಳ್ಳದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಾ ಅಪಾಯಕಾರಿ ಗುಂಡಿಗಳನ್ನು ಸೃಷ್ಟಿsಸುವ…

By Dinamaana Kannada News

Davanagere news | ನಗರ ಸ್ವಚ್ಚಗೆ ನಾಗರಿಕರು ಕೈಜೋಡಿಸಬೇಕು: ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಸೆ.3  (Davanagere ):  ನಾವು ಆರೋಗ್ಯವಾಗಿರಲು ನಮ್ಮ ಮನೆ, ಮನಸ್ಸು ಸದಾ ಸ್ವಚ್ಚವಾಗಿರಬೇಕು. ಅದೇ ರೀತಿ ನಮ್ಮ ಪರಿಸರವು…

By Dinamaana Kannada News

ದಾವಣಗೆರೆ |ʼರಕ್ಷಾ ಬಂಧನ’ ಒಂದು ಹೃದಯ ಸ್ಪರ್ಶಿ ಆಚರಣೆ

ದಾವಣಗೆರೆ: ರಕ್ಷಾ ಬಂಧನ ಸೋದರ-ಸೋದರಿಯರ ಪವಿತ್ರ ಬಂಧನವನ್ನು ಸಾರುವ ಹಬ್ಬವಾಗಿದೆ. ಸಹೋದರಿಯರು ಸಹೋದರರಿಗೆ ವಿಜಯದ ವೀರ ತಿಲಕವನ್ನು ಹಚ್ಚಿ ರಕ್ಷಾ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

By Dinamaana Kannada News
MLA Basavanthappa
ತಾಜಾ ಸುದ್ದಿ

ಆನಗೋಡಿನಲ್ಲಿ ರೈತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಬಸವಂತಪ್ಪ

By Dinamaana Kannada News
loka adlat davanagere
Blog

ದಾವಣಗೆರೆ ಲೋಕ್ ಆದಾಲತ್‌ : ಸಹಬಾಳ್ವೆ ನಡೆಸಲು 24 ಜೋಡಿಗಳು ನಿರ್ಧಾರ

By Dinamaana Kannada News
Davanagere
ತಾಜಾ ಸುದ್ದಿ

ಅನಧಿಕೃತ ಪಡಿತರ ಚೀಟಿ ಪತ್ತೆಹಚ್ಚಿ,ಹೊಸ ಪಡಿತರಕ್ಕೆಅವಕಾಶ :ಸಚಿವ ಕೆ.ಹೆಚ್.ಮುನಿಯಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?