Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Relationship | ಸಂಬಂಧಗಳೆಂದರೆ ಹೀಗೆಕೇ…?
Blog

Relationship | ಸಂಬಂಧಗಳೆಂದರೆ ಹೀಗೆಕೇ…?

Dinamaana Kannada News
Last updated: October 9, 2024 3:55 am
Dinamaana Kannada News
Share
davanagere
ಸುಚಿತ್ರ .ಟಿ
SHARE

ಸಂತಸ ತರುವ ಬಂಧಗಳೇ ಸಂಬಂಧಗಳು..ಕೆಲವೊಮ್ಮೆ ಸಂಕಟ ತರುವ ಬಂಧಗಳು ಸಂಬಂಧಗಳಾಗುತ್ತವೆ. ಸಂಬಂಧಗಳನ್ನು ಸಂತಸ ಮಾಡಿಕೊಳ್ಳುವ, ಸಂಕಟ ಮಾಡಿಕೊಳ್ಳುವ ಜವಾಬ್ದಾರಿ ನಮ್ಮದೇ ಆಗಿರುತ್ತದೆ. ಕುಟುಂಬ ಅಂದಮೇಲೆ ಸಂಬಂಧಗಳ ಸರಮಾಲೆ ನೋಡುತ್ತೇವೆ..ಸುಖ ದುಃಖ ಎಲ್ಲವನ್ನೂ ಹಂಚಿಕೊಳ್ಳಲು ಸಂಬಂಧಗಳು ಬಹಳ ಮುಖ್ಯ,ಕುಟುಂಬದ ಹೊರತಾಗಿ ಸ್ನೇಹ ಸಂಬಂಧವೂ ಅಮೂಲ್ಯವಾದದ್ದು. ಕುಟುಂಬ ಸಂಬಂಧದಲ್ಲಿ ಇಂದಿನ ಕಾಲದಲ್ಲಿ ಅತ್ಯಂತ ಒಗಟಾಗಿರುವ ಸಂಬಂಧ ಅತ್ತೆ ಮತ್ತು ಸೊಸೆಯರದ್ದು.

ಪರಿಸ್ಥಿತಿ ಸರಿ ಇಲ್ಲದೆ ಇದ್ದಾಗ ನಾವು ನಮ್ಮ ಮನಸ್ಥಿತಿ ಸರಿಯಾಗಿ ಇಟ್ಟುಕೊಳ್ಳಬೇಕು ಎನ್ನುವ ಮಾತಿದೆ..ನಮ್ಮ ಯೋಚನಾ ಲಹರಿ ನಮ್ಮೆಲ್ಲ ನೋವು ನಲಿವಿಗೆ ಕಾರಣವಾಗಿದೆ.ಅತ್ತೆ- ಸೊಸೆ ಎಂದರೆ ಜಗಳ ,ಮುನಿಸು , ಮನಸ್ತಾಪ ಎನ್ನುವ ಮಟ್ಟಿಗೆ ಇಂದಿನ ಪರಿಸ್ಥಿತಿ ನಿರ್ಮಾಣವಾಗಿದೆ.
ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬ ಆಗಲು ಕಾರಣ ಕೂಡ ಇದಾಗಿದೆ.

ಯಾವುದೇ ವ್ಯಕ್ತಿಯನ್ನು ನೋಡಿದಾಗ ಅವನಲ್ಲಿ ಉತ್ತಮ ಅಂಶಗಳ ಜೊತೆಗೆ, ಬೇಡವಾದ ಕೆಲವೊಂದು ಗುಣಗಳು ಇರುತ್ತವೆ. ಅದೇ ರೀತಿ ಯಾವುದೇ ಸಂಬಂಧ ತೆಗೆದುಕೊಂಡರು ಅದರಲ್ಲಿ ಒಳ್ಳೆಯದರ ಜೊತೆಗೆ ಕೆಲವು ಲೋಪಗಳು ಇರುವುದು ಸಹಜ. ಇಂದಿನ ಕೆಲ ಹೆಣ್ಣುಮಕ್ಕಳು ಅವಿಭಕ್ತ ಕುಟುಂಬದ ಎಲ್ಲಾ ಲಾಭಗಳನ್ನು ಬಯಸುತ್ತಾರೆ, ಆದರೆ ಕಷ್ಟ ಸಹಿಸಲು ಒಪ್ಪುವುದಿಲ್ಲ..

Read also : poem | ತಾಯಿಯ ಪ್ರೀತಿ…

ಒಟ್ಟಾಗಿರುವ ಲಾಭಗಳು ಮತ್ತು ನಷ್ಟಗಳ ಬಗ್ಗೆ ನಾವು ಅನೇಕ ಓದಿರುತ್ತೇವೆ, ಹಾಗೆಯೇ ಇಂದಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ.ನಾವು ನಮ್ಮ ಮನಸ್ಥಿತಿಯನ್ನು ಹೇಗೆ ಹೊಂದಿಸಿಕೊಳ್ಳಬೇಕು ಎಂಬುದರ ಬಗ್ಗೆ ಒಂದೆರಡು ಮಾತುಗಳು

  • ನಮ್ಮ ಮಕ್ಕಳ ಹುಟ್ಟು ಹಬ್ಬಕ್ಕೆ ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಹೋಗುವ ನಾವುಗಳು ನಮ್ಮ ಮನೆಯಲ್ಲಿ ಇರುವ ವೃದ್ಧರನ್ನು ಪ್ರೀತಿಸೋಣ, ಗೌರವಿಸೋಣ.
  • ಸಮಾಜ ಸೇವೆ ಎಂದು ಎಲ್ಲೆಲ್ಲೋ ಹೋಗುವ ನಾವುಗಳು ನಮ್ಮ ಮನೆಯವರ ಸೇವೆಯನ್ನೇ ಮಾಡೋಣ.
  • ದಾದಿಯರನ್ನು ಗೌರವಿಸುವ ನಾವು ಅವರ ಕೆಲಸವನ್ನು ಸ್ವಲ್ಪ ಮಟ್ಟಿಗೆ ಮನೆಯಲ್ಲಿ ಮಾಡಿದರೆ ಸಾಕು.
  • ಕೆಲಸ ತಪ್ಪಿದ್ದಲ್ಲ ಅಂತ ತಿಳಿದ ಮೇಲೆ ಅದನ್ನು ನಗುತ್ತಲೇ ಮಾಡೋಣ.
  • ಸ್ಟೇಟಸ್ ಗಳಲ್ಲಿ ಅತ್ಯಂತ ಪ್ರಬುದ್ಧ ಸಾಲುಗಳನ್ನು ಹಾಕುವ ನಾವುಗಳು ಸ್ವಲ್ಪ ಪ್ರಬುದ್ಧವಾಗಿ ಯೋಚಿಸೋಣ..
  • ತಾಳ್ಮೆಗಿಂತ ಮಿಗಿಲಾದ ಶಕ್ತಿ ಇನ್ನೊಂದು ಇಲ್ಲ ಎಂಬುದನ್ನು ಅರಿಯೋಣ.
  • ನಮ್ಮ ಹೆತ್ತವರೊಂದಿಗೆ ನಾವು ಜಗಳ ಆಡುತ್ತೇವೆ. ಅಣ್ಣ -ತಮ್ಮಂದಿರ ಜೊತೆಗೆ ಅಕ್ಕ- ತಂಗಿಯರ ಜೊತೆಗೆ ಭಿನ್ನಾಭಿಪ್ರಾಯಗಳು ಬರುತ್ತವೆ ಅಂದಮೇಲೆ ಬೇರೆ ಪರಿಸ್ಥಿತಿ ಬೇರೆ ವಾತಾವರಣದಲ್ಲಿ ಬೆಳೆದವರೊಂದಿಗೆ ಭಿನ್ನಾಭಿಪ್ರಾಯ ಬರುವುದು ಸಹಜ ಎಂಬುದನ್ನು ಅರ್ಥ ಮಾಡಿಕೊಳ್ಳೋಣ.
  • ಎಲ್ಲರೊಂದಿಗೆ ಬದುಕಿದಾಗ ಆಗುವ ಲಾಭಗಳನ್ನು ಪ್ರತಿದಿನ ಮಲಗುವ ಮುನ್ನ ಸ್ಮರಿಸೋಣ.
  • ಪ್ರತಿನಿತ್ಯ ಅವರೊಂದಿಗೆ ಬದುಕಲೇ ಬೇಕು ಅವರ ಮುಖ ನೋಡಲೇ ಬೇಕು ಅಂದಾಗ ಅವರೊಂದಿಗೆ ಜಗಳ ಆಡಿ ಮುಖ ಕೆಡಿಸಿಕೊಳ್ಳುವುದಕ್ಕಿಂತ ಸ್ವಲ್ಪ
    ಸಹಿಸಿಕೊಳ್ಳೋಣ.
  • ನಾವು ಒಂದು ಸಾರಿ ನಾವು ನಮ್ಮದು ಕಷ್ಟ ಅಸಾಧ್ಯ ಅಲ್ಲ ಅಂತ ಯೋಚಿಸಲು ಶುರು ಮಾಡಿದರೆ ಸಾಕು ಮನೆ ನೆಮ್ಮದಿಯ ತಾಣವಾಗುತ್ತದೆ.ಕ್ಷಮಿಸುವ ಗುಣವನ್ನು ಬೆಳಸಿಕೊಂಡು ಮುಂದೆ ನಡೆದರೆ ಜೀವನ ಸುಂದರ..

ಸುಚಿತ್ರ .ಟಿ (ಸುವಿ)
ದಾವಣಗೆರೆ

TAGGED:ArticleRelationshipSuchitraಲೇಖನಸಂಬಂಧಗಳುಸುಚಿತ್ರ .ಟಿ
Share This Article
Twitter Email Copy Link Print
Previous Article DAVANAGERE Davanagere | ಯುವ ಪೀಳಿಗೆ ಮಾದಕ ವಸ್ತುಗಳಿಗೆ ಬಲಿಯಾಗದಂತೆ ತಡೆಗಟ್ಟುವುದು ಅನಿವಾರ್ಯ
Next Article DAVANAGERE ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿರುವ 38ನೇ ವಾರ್ಡ್ ಮಾದರಿ: ಮೇಯರ್ ಕೆ. ಚಮನ್ ಸಾಬ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಆಡಳಿತ ನಿರ್ಲಕ್ಷ್ಯ : ಮಲೇಬೆನ್ನೂರು ರಸ್ತೆಗೆ ಎಸ್.ಡಿ.ಪಿ.ಐ ಕಾರ್ಯಕರ್ತರಿಂದ ತಾತ್ಕಾಲಿಕ ಪರಿಹಾರ

ಮಲೇಬೆನ್ನೂರು : ಶಿವಮೊಗ್ಗ, ಹರಿಹರ ಮತ್ತು ಹೊಸಪೇಟೆ ಸಂಪರ್ಕಿಸುವ ರಾಜ್ಯ ಹೆದ್ದಾರಿ 25ರ ಮಲೇಬೆನ್ನೂರು ಪಟ್ಟಣದ ಮೂಲಕ ಹಾದು ಹೋಗುವ…

By Dinamaana Kannada News

Davanagere | ಒಳಮೀಸಲಾತಿಗೆ ಜಾರಿಗೆ ಒತ್ತಾಯಿಸಿ ಸೆ.12 ರಂದು ಡಿಎಸ್ಸೆಸ್ ನಿಂದ ಬೃಹತ್ ತಮಟೆ ಚಳವಳಿ

ದಾವಣಗೆರೆ (Davanagere):  ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯಕ್ಕೆಯಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ…

By Dinamaana Kannada News

ಮತಕಳವು|ಎಸ್ ಐಆರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭಾಗಿ

ನವದೆಹಲಿ/ದಾವಣಗೆರೆ.ಆ.12; ಮತಕಳವು ಹಾಗೂ ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಕ್ರಮಗಳ ವಿರುದ್ಧವಾಗಿ, ನವದೆಹಲಿಯ ಸಂಸತ್ ಭವನದ ಆವರಣದಲ್ಲಿ…

By Dinamaana Kannada News

You Might Also Like

Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Davanagere
Blog

ಹಿರಿಯ ನಾಗರೀಕರ ಬಗ್ಗೆ ಅಸಡ್ಡೆ ಬೇಡ: ನ್ಯಾ. ಮಹಾವೀರ ಮ.ಕರೆಣ್ಣನವರ್

By Dinamaana Kannada News
Blog

ಸಿದ್ಧು ಸೇಫ್ ಆಗಿದ್ದೇ ಬಿಜೆಪಿಗೆ ಚಿಂತೆ

By Dinamaana Kannada News
Applications invited
Blog

ದಾವಣಗೆರೆ: ಏಕಲವ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?