Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 59: ಆ ಟೇಮ್ನಾಗ ರೊಕ್ಕ ಅನ್ನಾವು ಕಲ್ಲಳ್ಳು ಆಗೋಗಿದ್ವು….
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 59: ಆ ಟೇಮ್ನಾಗ ರೊಕ್ಕ ಅನ್ನಾವು ಕಲ್ಲಳ್ಳು ಆಗೋಗಿದ್ವು….

Dinamaana Kannada News
Last updated: June 19, 2024 3:39 am
Dinamaana Kannada News
Share
sanduru stories
ಸಂಡೂರಿನ ಕಥನಗಳು
SHARE

Kannada News | Sanduru Stories | Dinamaana.com | 19-06-2024

ಕಳ್ಳು ಕಿವುಚಿಕೊಂಡು ಬಂದಂಗಾಗ್ತೈತೆ (Sanduru Stories)

ಸುಮಾರು ಅರವತ್ತು ವರ್ಷಕ್ಕೂ ಕಮ್ಮಿಯೇ ವಯಸ್ಸಾಗಿದ್ದರೂ ಎಂಭತ್ತರ ಅಜ್ಜನಂತೆ ಕಾಣುವ ಕೃಶಕಾಯದ ಆ ವ್ಯಕ್ತಿಯ ಹೆಸರು ಕೊಮಾರಪ್ಪ.  ಈತ ಚಿಕ್ಕವಯಸ್ಸಿನವನಿರುವಾಗಿಂದಲೂ ಮೈನಿಂಗ್ ಇತ್ತಾದರೂ ಇವನ ತಂದೆ ತಾಯಿಗಳು ಮಾತ್ರ ಬೇಸಾಯವನ್ನೆ ನೆಚ್ಚಿಕೊಂಡು ಬದುಕಿದವರು.

ಎರಡು ಎಕರೆ ಜಮೀನು ಇತ್ತಂತೆ.ಈಗಲೂ ಇದೆಯಂತೆ.ಆದರೆ ನೋಡಾಕ್ ಹೋಗ್ಬೇಡಿ ಸಾರ್….ಕಳ್ಳು ಕಿವುಚಿಕೊಂಡು ಬಂದಂಗಾಗ್ತೈತೆ ಎಂದ. ಅಪ್ಪ ಅವ್ವನಂತೆ ತಾನೂ ಕೂಡ ಬೇರೆಯವರ ಹೊಲಗಳಲ್ಲಿ ವ್ಯವಸಾಯದ ಕೂಲಿಗಳಾಗಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದರು.

ಕುಮಾರಸ್ವಾಮಿ ಬೆಟ್ಟದ ಕಡಿಗೆ ಕೈ ಮುಗಿದೇ ಮುಂದಿನ ಕೆಲಸ (Sanduru Stories)

ರಂಟಿ ಹೊಡಿಯೋದು ಕಲ್ತಮ್ಯಾಲಂತೂ ನಮ್ಮಪ್ಪ,ಎರಡೊಪ್ಪತ್ತಿನ ಹೊಟ್ಟಿ ಕೂಳಿಗೆ ಏನೂ ದೋಖಾ ಇಲ್ಲದಂಗ ಮಾಡಿದೆಪ್ಪಾ ಕುಮಾರಸ್ವಾಮಿ ಎಂದು ಬೆಟ್ಟದ ಕಡಿಗೆ ಕೈ ಮುಗಿದೇ ಮುಂದಿನ ಕೆಲಸಕ್ಕೆ ಹೋಗುತ್ತಿದ್ದ. ದುಡಿದು, ದಣಿದುಕೊಂಡು ಬಂದು ಕುಂತು ಉಣ್ಣುವಾಗ ನೋಡ್ಬೇಕಿತ್ತು ಸಾ…..ನಮ್ಮಪ್ಪನ್ನ ತೃಪ್ತಿಯಿಂದ ಮೀಸೆಯನ್ನು ಹುರಿಗೊಳಿಸುತ್ತ ಉಣ್ಣಪಾ…ಹೊಟ್ಟೆ ತುಂಬ ಉಣ್ಣಪ ಅಂತಿದ್ದ ನಮ್ಮಪ್ಪ ಎಂದು ಹೇಳುತ್ತಾ ಮೌನಕ್ಕೆ ಜಾರಿದ.

ಬ್ಯಾಸಾಯನ ಸಾಯ್ಸಿಬಿಟ್ರು.. (Sanduru Stories)

ಈ ಊರಿಗೆ ಗಣಿಗಾರಿಕೆ ಶುರುವಾತು ನೋಡಿ ಸಾ…ಬ್ಯಾಸಾಯ ಅನ್ನೋದು ಸಾಯಬಡ್ದೋತು. ವರಷಕ್ಕೊಂದು ಬೆಳೆ ಬಂದ್ರೂ ಎಂಥಾ ಬೆಳೆ ಸಾರ್,ಕಲ್ಲು ಭೂಮ್ಯಾಗ ಎಳ್ಳು,ಗುರೆಳ್ಳು,ಸೂರ್ಯಕಾಂತಿ ಎಣ್ಣೆಕಾಳುಗಳ ಬೆಳೆ ಹೆಂಗ್ ಬರ್ತಿತ್ತು ಅಂತೀರಿ ?ಗಣಿಧಣಿಗಳ ಕೂಲಿಯಾಸೆಗೆ ಜನರೆಲ್ಲ ಬ್ಯಾಸಾಯನ ಸಾಯ್ಸಿಬಿಟ್ರು.

ಹೊಲದ ಗರ್ಭ ಬಗೆದರು (Sanduru Stories)

ಒಂದಿನ ನಾವೂ ಮೈನ್ಸ್ನಾಗ ಕೆಲಸಕ್ಕೆ ಹೊಂಟು ನಿಂತೆವು.ಮಳೆ ಕಡಿಮ್ಯಾಗಿ ಬೆಳೆಯಿಲ್ಲದೆ ಏನ್ಮಾಡೋದು ?ಆ ಕೆಲಸ ಹೆಂಗಿತ್ತಪಾ ಅಂದ್ರೆ…ನಮ್ ಹೊಲದ ಮಣ್ಣು ಕಲ್ಲನ್ನೇ ಟಿಪ್ಪರನಗೇರಿಕಂಡು ಎಲ್ಲಿಗೋ ಕಳಸಾಕ ಹತ್ತಿದೆವು.ಮೊದ ಮೊದಲು ಬರೀ ಕಲ್ಲು ಸಾಕು ಎಂದವರು ಬರಬರುತ್ತಾ ಮಣ್ಣಿನಾಗೂ ಅದಿರು ಐತೆ ಎಂದು ಗೊತ್ತಾಗಿ ಲೋಡುಗಟ್ಟಲೆ ಹೊಲದ ಗರ್ಭ ಬಗೆದು ಕಳಿಸುತ್ತಿದ್ದೆವು.

Read also : Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 42 : ಆಕೆ ತಲೆಯೆತ್ತಿ ನಡೆದಿದ್ದಾಳೆ..

ಏನ್ ಮಾಡ್ತೀರಿ ನಮ್ ಹಣೇಬರ (Sanduru Stories)

ಇಂತದ್ದನ್ನೆಲ್ಲ ನೋಡಲಾರದೆಯೋ ಏನೋ ನಮ್ಮಪ್ಪ,ನಮ್ಮವ್ವ…ಅಷ್ಟೇ ಅಲ್ಲ,ಅವರ ಸರೀಕರೆಲ್ಲ ಒಬ್ಬೊಬ್ಬರಾಗಿ ಒಂದೇ ವಾರಿಗೆಯವರು ಆ ಒಂದು ವರ್ಷದಲ್ಲಿ ತೀರಿಹೋದರು.ಇನ್ನೂ ಕೆಲವರು ತಲೆಗೇನೋ ಆಗಿ ನೆಲಕಚ್ಚಿದವರು ಮ್ಯಾಕ ಏಳಲಿಲ್ಲ ನೋಡರಿ ಎಂದ.

ಹೇಗೋ ಏನೋ…ಆದರೆ ಒಂದ್ ಮಾತಂತೂ ಸತ್ಯ.ಆ ಟೇಮ್ನಾಗ ರೊಕ್ಕ ಅನ್ನಾವು ಕಲ್ಲಳ್ಳು ಆಗಿದ್ದಂತೂ ನಿಜ…ಎಂದ.   ಏನ್ ಮಾಡ್ತೀರಿ ನಮ್ ಹಣೇಬರ..ಅಷ್ಟೆ ಸಾ…ಆತನೀಗ ಮೌನಕ್ಕೆ ಶರಣಾಗಿದ್ದ.

ಅಜ್ಜಂದೋ..ಅಪ್ಪನದೋ ರಗುತ ನೋಡಿದಂಗಾಗ್ತೈತೆ (Sanduru Stories)

ಸ್ವಲ್ಪ ಹೊತ್ತಿನ ಗಾಢ ಮೌನದ ನಂತರ ” ಈಗ ನೋಡ್ರೀ..ನಮ್ಮ ಹೊಲದ ಲೀಜು ಮುಗಿದಿದೆ. ವಾಪಸ್ಸೇನೋ ಕೊಟ್ಟಾರ. ತೆಗ್ಗಿನಾಗ ಕೆಂಪೋಗ ನೀರು ನಿಲ್ತವು. ಅಜ್ಜಂದೋ..ಅಪ್ಪನದೋ ರಗುತ ನೋಡಿದಂಗಾಗ್ತೈತೆ.  ಈ ಬಾರಿ ಅವನು ಮತ್ತೆ ಮಾತನಾಡಲಿಲ್ಲ.

ನನ್ನ ಎದೆ ಕೂಡ ಭಾರವಾಗಿತ್ತು.

ಬಿ.ಶ್ರೀನಿವಾಸ

TAGGED:Davanagere Newsdinamaana.comKannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article Davanagere ಯೋಗ ತರಬೇತಿ ಶಿಬಿರ
Next Article davanagare ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ: ವೈದ್ಯರು ಇಲ್ಲದ್ದನ್ನು ಕಂಡು ಶಾಸಕ ಬಸವಂತಪ್ಪ ಗರಂ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

34 ದಿನಕ್ಕೆ ಕಾಲಿರಿಸಿದ ಸತ್ಯಾಗ್ರಹ

ರಾಯಚೂರ : ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ವಾಲ್ಮೀಕಿ ಸಮಾಜ ನಡೆಸುತ್ತಿರುವ ಹೋರಾಟ 34 ನೇ ದಿನಕ್ಕೆ ಕಾಲಿರಿಸಿದೆ. ಮಾ…

By Dinamaana Kannada News

ಸಂವಿಧಾನದಿಂದ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

ಹೊನ್ನಾಳಿ ಜೂ 6: ಮೂಲ ಸಂವಿಧಾನದ ಪ್ರಕಾರ ನಾವೆಲ್ಲರೂ ನಡೆದುಕೊಂಡರೆ ದೇಶದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ಪ್ರಜಾಪರಿವರ್ತನಾ…

By Dinamaana Kannada News

ಪೊಲೀಸ್ ಸಬ್‍ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ (Davanagre) :  ಪ್ರಸಕ್ತ ಸಾಲಿಗೆ ಮಂಜೂರಾದ ರಾಜ್ಯದ ಬೆಳಗಾವಿ, ಮೈಸೂರು ಕಂದಾಯ ವಿಭಾಗಗಳಲ್ಲಿನ ಪೊಲೀಸ್ ಸಬ್ ಇನ್ಸ್ ಪೆಕ್ಟರ್…

By Dinamaana Kannada News

You Might Also Like

MP visits STPI Bengaluru
ತಾಜಾ ಸುದ್ದಿ

ದಾವಣಗೆರೆ | ಸಂಸದರಿಂದ ಎಸ್‌ಟಿಪಿಐ ಬೆಂಗಳೂರು ಭೇಟಿ : ಐಟಿವಲಯಕ್ಕೆ ಹೊಸ ಉತ್ತೇಜನ

By Dinamaana Kannada News
ದಾವಣಗೆರೆ
ತಾಜಾ ಸುದ್ದಿ

ದಾವಣಗೆರೆ | ಆತ್ಮಹತ್ಯೆಗೆ ಯತ್ನ : ತಾಯಿ ಮತ್ತು  ಮಗು ರಕ್ಷಿಸಿದ 112 ಹೊಯ್ಸಳ ಸಿಬ್ಬಂದಿ

By Dinamaana Kannada News
District Jawahar Bal Manch
ತಾಜಾ ಸುದ್ದಿ

ದಾವಣಗೆರೆ | ಮಾದಕ ವಸ್ತುಗಳಿಂದ ಭವಿಷ್ಯ ಸರ್ವನಾಶ : ದಿನೇಶ್ ಕೆ. ಶೆಟ್ಟಿ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ಮಾನವ ಅಭಿವೃದ್ದಿ ವರದಿ ತಯಾರಿಕೆಗೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?