Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು-12 ನಂಬಲಾರದ ದು:ಸ್ವಪ್ನ
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು-12 ನಂಬಲಾರದ ದು:ಸ್ವಪ್ನ

Dinamaana Kannada News
Last updated: May 3, 2024 5:08 am
Dinamaana Kannada News
Share
sanduru 12
ಸಂಡೂರಿನ ಕಥನಗಳು
SHARE

“ದುಡುದ್ವಿ ಸಾರ್,ಹಗಲೂ ರಾತ್ರಿ ಕೂಡ ದುಡುದ್ವಿ ನಾನ್ ಇಲ್ಲಾ ಅಂಬಕುಲ್ಲ…ರಕ್ಕ ಹೆಂಗ್   ಬಂದ್ವು,ಹಾಂಗಾ ಹೋದ್ವು…!

ದೊಡ್ಡೋರ್ ಹೇಳೋದ್ ಸತ್ಯ ಸರ್

ದೊಡ್ಡೋರ್ ಹೇಳೋದ್ ಸತ್ಯ ಸರ್,ಮಣ್ಣನ್ನ,ಗಂಗಮ್ಮನ್ನ,ಮತ್ತೆ ಕಲ್ಲುನ ಮಾರಿಕ್ಯಾಬಾರದು.  ಮಾರಿಕ್ಯಂಡನು ಉದ್ಧಾರ ಆಗಾಂಗಿಲ್ಲ … ಯಾಕಂದ್ರ ನಾವಿದೀವಲ್ಲ …ಅಷ್ಟಾಕಂದು ರಕ್ಕ ಇಟಕಂಡೂ, ನಾಕು ಟಾಟಾ ಟಿಪ್ಪರ್ ಗಾಡಿಗುಳು,ಕೈತುಂಬಾ ರಕ್ಕ , ಎಲ್ಲ ಇದ್ವು.ಆದ್ರೇನಾತು ಇವತ್ತಿಂದಿಸ ಹುಡುಕ್ಯಾಡಿದ್ನಪ ಅಂದ್ರೆ ಐಪಸ ಸೈತ ಇಲ್ಲ.” ಎಂದು ನಕ್ಕು, ಹೇಳುತ್ತಿದ್ದವನನ್ನೆ ನೋಡಿದೆ.  ಕಾಲದ ಕರಾಳ ಅನುಭವಗಳು ಮೂವತ್ತರ ಆ ಹುಡುಗನನ್ನು ಮಾಗಿಸಿದಂತಿದ್ದವು.

ಚೈತನ್ಯ ಶೀಲ ಸಮಾಜವೊಂದು ಮನುಷ್ಯನಿಗೆ ಇರುವ ಅಗಾಧ ಸಾಧ್ಯತೆಗಳನ್ನು ರೂಪಿಸಬಲ್ಲುದು ಎಂಬುದೇನೋ ನಿಜ.ಚೈತನ್ಯವೇ ಉಡುಗಿಹೋದ ಸಮಾಜಗಳ ಚಿಕಿತ್ಸೆ ಮಾಡುವುದು ಹೇಗೆ?  ಇಂಥದ್ದೇ ವಿವರಗಳನ್ನು ಆತ ಒಂದೊಂದಾಗಿ ನೀಡುತ್ತಿದ್ದ.ಅದೊಂದು ಊರು. ಹೆಸರಿನಲ್ಲಿಯೇ ಪಾಪವನ್ನು ಹೊತ್ತ ಪುಟ್ಟ ಹಳ್ಳಿ.ಒಂದು ಕಾಲದಲ್ಲಿ ಆ ಊರಿನಲ್ಲಿ ಮನುಷ್ಯರಿಗಿಂತ ಟಾಟಾ ಟಿಪ್ಪರುಗಳೇ ಜಾಸ್ತಿಯಿದ್ದುವಂತೆ.ಹೊಸಪೇಟೆಯಿಂದ ಕೇವಲ ಹತ್ತು ಕಿಲೋ ಮೀಟರ್ ದೂರದ ಈ ಹಳ್ಳಿಯ ಮನೆ ಮನೆಗೂ ಒಂದೊಂದು ಟಾಟಾ ಟಿಪ್ಪರುಗಳಿದ್ದುವಂತೆ!.

ಸಾವ್ಕಾರ ರತನ್ ಟಾಟಾನೇ ಊರಿಗೆ ಬಂದಿದ್ದರು

ಭಾರತದ ಮೂಲೆಯೊಂದರಲ್ಲಿ, ಇಂಥದೊಂದು ಪುಟ್ಟ ಹಳ್ಳಿಯೊಂದರಲ್ಲಿ ಇಷ್ಟೊಂದು ಪ್ರಮಾಣದ ಗಾಡಿಗಳು ಮಾರಾಟವಾಗಿದ್ವು ಎಂದರೆ,  ಅದೆಂಥಹ ಊರಿರಬೇಕು ಎಂಬ ಕುತೂಹಲದೊಂದಿಗೆ ಸ್ವತಃ ಆ ಸಾವ್ಕಾರ ರತನ್ ಟಾಟಾನೇ ಕುತೂಹಲಿಯಾಗಿ ಊರನ್ನು , ಜನರನ್ನು ನೋಡಬೇಕೆಂದು ಬಂದು ಹೋದನೆಂದು ಹೇಳುತ್ತಾರೆ. ಹಾಗೆ ಹೇಳುವಾಗ ಆತನ ಕಣ್ಣುಗಳು ಇಷ್ಟಗಲ ಆಗುವುದನ್ನು ಗಮನಿಸಿ, ” ನೀವು ನೋಡಿ ಮಾತಾಡಿಸಿದಿರ?” ಕೇಳಿದೆ.  “ಇಲ್ಲ ಸಾರ್….ಟಾಟಾ ಧಣಿ ವೇಷ ಮರೆಸಿಕೊಂಡು ಬಂದು ಹೋದ್ನಂತೆ” ನೋಡಲಾಗಲಿಲ್ಲವಲ್ಲ ಎಂಬ ನಿರಾಶೆಯೊಂದಿಗೆ ನುಡಿದ.

ನಾಗರಿಕ ಹಕ್ಕುಗಳು ದಮನಕ್ಕೆಈ ಊರುಗಳೇ ಸಾಕ್ಷಿ

ಅಕ್ರಮ ಗಣಿಗಾರಿಕೆಯೆನ್ನುವುದು ಒಂದು ಕಾಲಕ್ಕೆ ಮುಗಿದು ಹೋಗಿರಬಹುದು ಅಥವಾ ಇತಿಹಾಸ ಕೋಶದಲ್ಲಿ ಸೇರಿಹೋಗಿರಬಹುದು.ಆದರೆ ನಾಗರಿಕ ಹಕ್ಕುಗಳು ದಮನಗೊಳ್ಳುತ್ತಾ ಹೋದಂತೆ ಶೋಷಣೆಯೂ ಕ್ರೂರವಾಗುತ್ತ ಹೋಗುತ್ತದೆ ಎನ್ನುವುದಕ್ಕೆ ಇಂಥ ಊರುಗಳು ಸಾಕ್ಷಿಯಾಗುತ್ತವೆ.

ಮಾಡದ ತಪ್ಪಿಗೆ ಅಜೀವ ಕಾರಾಗೃಹ ಶಿಕ್ಷೆ

ದಿನದಿಂದ ದಿನಕ್ಕೆ ಕಣ್ಣಿಗೆ ಕಾಣದಂತಹ ಈ ಮಹಾರೋಗದ ಕೊಡುಗೆಯಾದ ಒಂಟಿತನ, ಕೆಲಸವಿಲ್ಲದ ಖಾಲಿತನ,..ಜನ ದಿಗ್ಭ್ರಮೆ ಯಲ್ಲಿರುವ ಹಾಗೆ ಕಾಣಿಸುತ್ತಾರೆ. ಇಡೀ ಜಗತ್ತಿನೊಂದಿಗೆ ಸಂಪರ್ಕವಿಲ್ಲದ ವರ ಹಾಗೆ ಏಕಾಂಗಿಯಾಗಿ ಭಾವ ಖಿನ್ನತೆಗೆ ಒಳಗಾಗಿದ್ದಾರೆ.  ಮಾಡದ ತಪ್ಪಿಗೆ ಅಜೀವ ಕಾರಾಗೃಹ ಶಿಕ್ಷೆ ಅನುಭವಿಸುತ್ತಿರುವವರ ಮನಃಸ್ಥಿತಿಯಿಂದ ಬಳಲುವುದು ಈ ಕಾಲದ ತಲ್ಲಣಗಳಲ್ಲೊಂದು.  ಇಂಥ ಅನೇಕ ನೆನಪುಗಳು ಹಳ್ಳಿಗರಿಗೆ ಹೊಸ ದುಃಸ್ವಪ್ನ ಗಳಾಗಿ ಕಾಡುತ್ತಲೆ ಇರುತ್ತವೆ.

             ಬಿ.ಶ್ರೀನಿವಾಸ

TAGGED:dinamaana.comKannada NewsSanduru stories.ಕನ್ನಡ ಸುದ್ದಿದಿನಮಾನ.ಕಾಂಸಂಡೂರಿನ ಕಥನಗಳು.
Share This Article
Twitter Email Copy Link Print
Previous Article hamsaleka ಜನವಿರೋಧಿ ಆಡಳಿತವನ್ನು ರಕ್ತಕ್ರಾಂತಿ ಇಲ್ಲದೆಯೆ ಬದಲಾಯಿಸಬೇಕು : ಸಂಗೀತ ನಿರ್ದೇಶಕ ಹಂಸಲೇಖ
Next Article davanagere ಏರೋಬಿಕ್ಸ್‍ನೊಂದಿಗೆ ಮತದಾನ ಜಾಗೃತಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Political analysis | ಅಮಿತ್ ಷಾ ಆಟ ಬಲ್ಲವರಾರು?

ವಿಧಾನಸೌಧದ ಮೂರನೇ ಅಂತಸ್ತಿನಲ್ಲಿರುವ ಗೃಹ ಸಚಿವ ಡಾ.ಪರಮೇಶ್ವರ್ ಅವರ ಕೊಠಡಿಯಲ್ಲಿ ಮೊನ್ನೆ ಶುಕ್ರವಾರ ಮಹತ್ವದ ಸಭೆ ನಡೆದಿದೆ. ಈ ಸಭೆಯಲ್ಲಿ…

By Dinamaana Kannada News

ದೇಶದ ಉತ್ತಮ ಭವಿಷ್ಯಕ್ಕಾಗಿ ಬಿಜೆಪಿ ಅಧಿಕಾರದಿಂದ ದೂರವಿಡಿ

ದಾವಣಗೆರೆ :   ದೇಶಾದ್ಯಂತ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಐ.ಎನ್.ಡಿ.ಐ. ಒಕ್ಕೂಟದ ಭಾಗವಾಗಿರುವ ಭಾರತ ಕಮ್ಯುನಿಸ್ಟ್ ಪಕ್ಷವು ಬಿಜೆಪಿ ಹಾಗೂ ಎನ್‌ಡಿಎ…

By Dinamaana Kannada News

Davanagere | ಜೂ.14ಕ್ಕೆ ಮುಟ್ಟಿಸಿಕೊಂಡವರು’ ಪುಸ್ತಕ ಬಿಡುಗಡೆ

ದಾವಣಗೆರೆ (Davanagere): ಬೀ ಕಲ್ಟರ್ ಪ್ರಕಾಶನ-ಬೆಂಗಳೂರು ವತಿಯಿಂದ ಡಾ. ಬಿ.ಎಂ. ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವ ಅಂಗವಾಗಿ ನೇತ್ರತಜ್ಞ ಡಾ ಬಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

By Dinamaana Kannada News
Political analysis
ರಾಜಕೀಯ

Political analysis | ವಿಜಯೇಂದ್ರ ಅವರಿಗೆ ಲಾಸ್ಟ್ ಚಾನ್ಸು?

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?