Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು-16 ಅವನನ್ನು ಹುಚ್ಚನೆಂದು ನಾನಂತೂ ಕರೆಯಲಾರೆ
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು-16 ಅವನನ್ನು ಹುಚ್ಚನೆಂದು ನಾನಂತೂ ಕರೆಯಲಾರೆ

Dinamaana Kannada News
Last updated: May 7, 2024 4:39 am
Dinamaana Kannada News
Share
sanduru - stories
ಸಂಡೂರಿನ ಕಥನಗಳು
SHARE

ಸೊಂಡೂರಿನ ಸುತ್ತಲೂ ಹರಡಿಕೊಂಡಿರುವ ಬೆಟ್ಟಗಳು ಆನೆಯ ಸೊಂಡಿಲಿನಂತೆ ಕಾಣುವುದರಿಂದ ಸೊಂಡಿಲ ಊರು ಬರು ಬರುತ್ತಾ ಸೊಂಡೂರು ಆಗಿರುವುದೆಂದು ಹೇಳುತ್ತಾರೆ.  ಈ ಪರಿಸರದಲ್ಲಿರುವ ಅರಣ್ಯಗಳು,ವಿವಿಧ ಕಾಡುಪ್ರಾಣಿಗಳು,ಪಕ್ಷಿಗಳು,ಝರಿಗಳು ನೀರೂ,ಹಳ್ಳಗಳಿಂದಾಗಿ,ಜಲ ನೆಲಗಳೆರೆಡೂ ಸಮೃದ್ಧಿಯಾಗಿತ್ತು.

ಕುಮಾರಸ್ವಾಮಿ ಇಲ್ಲಿನ ಜನರ ಆರಾಧ್ಯದೈವ.ಸ್ಕಂದ ಎಂಬ ಹೆಸರಿನ ಈ ದೇವರ ಹೆಸರಿನ ಕಥೆಗಳು ಜನರ ಬಾಯಿಯಲ್ಲಿ ಇವೆ.ಇಂತಹ ಪ್ರಕೃತಿಯ ರಮ್ಯ ತಾಣಗಳನ್ನು ಪುರಾಣ ಕಾಲದಿಂದಲೂ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿದೆ.

ತ್ರೇತಾಯುಗದಲ್ಲಿ ಸ್ವರ್ಣಗಿರಿ

ಸೊಂಡೂರಿನ ಪರ್ವತ ಶ್ರೇಣಿಗಳಿಗೆ ದೇವಗಿರಿ ಎಂದೂ, ತ್ರೇತಾಯುಗದಲ್ಲಿ ಸ್ವರ್ಣಗಿರಿ ಎಂದು, ದ್ವಾಪರಯುಗದಲ್ಲಿ ದಿವ್ಯಾಚಲ ಎಂದೂ ಕಲಿಯುಗದಲ್ಲಿ’ ಲೋಹಾಚಲ ‘ಎಂದು ಕರೆಯುತ್ತಿದ್ದುದನ್ನು ಜನರ ಬಾಯಿಂದಲೇ ಕೇಳಬಹುದು.ತಾರಕಾದಿ ಅಸುರರ ಸಂಹಾರಕ್ಕಾಗಿ ನವಿಲು ಸ್ವಾಮಿ ಅಂದರೆ ಕುಮಾರಸ್ವಾಮಿ -ಕಾರ್ತಿಕೇಯ ಈ ಬೆಟ್ಟದಲ್ಲಿ ನೆಲೆಸಿದನಂತೆ.

‘ಷಣ್ಮುಖ ಕಾಪಾಡಪ್ಪಾ

ಇಂತಹ ನವಿಲು ಸ್ವಾಮಿ ಬೆಟ್ಟದ ಕಡೆಗೆ ಜನರು ಈಗಲೂ ಬೆಳಗ್ಗೆದ್ದು ಮೊದಲು ಕೈ ಮುಗಿದೇ ಮುಂದಿನ ಕೆಲಸಕ್ಕೆ ಹೋಗುತ್ತಾರೆ.ರಾತ್ರಿ ವೇಳೆ ಕೂಡ ‘ಷಣ್ಮುಖ ಕಾಪಾಡಪ್ಪಾ ‘ ಎಂದು ಹೇಳಿ ಆ ಬೆಟ್ಟದ ಕಡೆಗೆ ತಲೆ ಮಾಡಿಯೆ  ಮಲಗುತ್ತಾರೆ. ಜೋ..ಜೋ…ಲಾಲೀ ನನ್  ಬಂಗಾರ….ಅಲ್ನೋಡ್ ಅಲ್ನೋಡು ,ನವಿಲಿನ ಮ್ಯಾಲೆ ಕುತ್ಕೊಂಡು ನಮ್ ಪಾಪೂನ  ಕುಂದ್ರಿಸಿಕಂಡು ಆ ದೇಶ… ಈ ದೇಶನೆಲ್ಲ ಸುತ್ತಿಸ್ಕಂಡು …ಈ ಗುಡ್ಡ ಆ ಬೆಟ್ಟದ ,ಕೈಲಾಸ,ವೈಕುಂಠಗಳನೆಲ್ಲಾ ತೋರಿಸ್ಕಂಡು ಬರ್ತಾನೆ ಸ್ವಾಮೀ…

………..ಲಾಲೀ… ಲಾಲಿ…ಲಾಲೀ

ಅರೆ ಕ್ಷಣದ ಹೊತ್ತು ಅವಳ ಮಾತನ್ನೆ ಕೇಳುತ್ತಿದ್ದ ಮಗು ಮತ್ತೆ  ಅಳತೊಡಗುತ್ತದೆ. ಆಕೆ… ಅಳಬ್ಯಾಡ ಪಾಪೂ… ಗಂಡಿ ನರಸಿಂಹ ಮೀಸೆ ಬಿಟ್ಕೊಂಡು ಬಂದು ಕುಂಡಿ ಚಿವುಟ್ತಾನೆ . ಗಪ್ ಚುಪ್…. ಸುಮ್ನೆ ಮಕ್ಕಾ…. ಲಾಲೀ ಲಾಲೀ….ನನ ಬಂಗಾರ ಇಲ್ಲೋಗಪ ನಮ್ ಪಾಪೂ ಸುಮ್ನೆ ಮಲಗ್ಯಾನ ಹೋಗ್ ಹೋಗು ಸ್ವಾಮಿ,ಕಣ್ ಮುಚ್ಚಿ ಮಲಕಂಡಾನ… ಹೂ ಮುತ್ತನೊಂದಿತ್ತು ಮಲಗಿಸಿದ ಅವ್ವಂದಿರ ಹಾಡುಗಳು,ಕಥೆಗಳೀಗ ಕೇಳಿಸುತ್ತಿಲ್ಲ.

ನಿರ್ಜನ ಬೀದಿಗಳು.

ಸ್ಥಬ್ದಗೊಂಡ ಬೆಟ್ಟಗಳು  ಬಿಕ್ಕುಗಳ ಹೊರತು ಬೇರೆ ಸದ್ದೇ ಇಲ್ಲ..ಸದ್ಧಿಲ್ಲ,ಪದ್ದಿಲ್ಲ …ಸುಡುಗಾಡು ಮೌನ! ಊರ ತುಂಬಾ ಆವರಿಸಿಬಿಟ್ಟಿದೆ. ಇಂತಹ ಊರುಗಳಿಗೆ ಮೊದಲಿನಂತೆ ಜನ ಕೂಡ ಬರುತ್ತಿಲ್ಲ.ಮದುವೆ ಮುಂಜಿಗಳೂ ನಡೆದರೆ ತಾನೆ ಬರೋದು ? ಬೀಗರು,ನೆಂಟರುಗಳೂ ಇತ್ತ ತಿರುಗಿನೋಡುವುದಿಲ್ಲ. ತೀರಾ ಅನಿವಾರ್ಯವಾದ ಕೆಲಸವಿದ್ದರೆ ಮಾತ್ರ ಬರುತ್ತಾರೆ. ಆಗ ಆತ ಬಂದೇ ಬಿಡುತ್ತಾನೆ !

ನೀವು ಬರೋದೊಂದು ಬಾಕಿಯಿತ್ತು

ಓಹೋ….ಈಗ ಬಂದಿರೇನ್ರೀ ? ಎಲ್ಲಾ ಮುಗಿದೈತೆ, ನೀವು ಬರೋದೊಂದು ಬಾಕಿಯಿತ್ತು.ನಿಮ್ಮನ್ನೇ ಕಾಯುತ್ತ ಕುಳಿತಿದ್ವಿ.ಈಗಾಗಲೇ ಎರಡು ಬಾರಿ ಹಲಿಗೆ ಬಾರಿಸಿದ್ದಾಗಿದೆ. ಇನ್ನೊಂದು ಲಾಸ್ಟನೇದು ಬಾರಿಸಿಬಿಟ್ಟರೆ ಮೂರಕ್ಕೆ ಮುಕ್ತಾಯ ಆದಂಗಾತು.ಎಲ್ಲ ಮುಗೀತಲ್ಲ.ಇನ್ನು ತಡ ಮಾಡಂಗಿಲ್ಲ.ಆರಾಮಿದ್ದುದಾದರೆ ರಾತ್ರಿ ಭಜನೆ ಗಿಜನೆ ಇಟ್ಕೋಂಡು ನಾಳೆ ಮಾಡಬೋದಿತ್ತು,ಮೈ ತುಂಬಾ ರಣಗಾಯ,ಕೀವು ಎಲ್ಲಾ ಸೋರುತ್ತಿತ್ತು.ಇಟ್ಕಣಾಕ ಬರದಿಲ್ರೀ…. ಇಳಿದು ಬರುವಾಗಿನಿಂದ ಹಿಡಿದು, ದಾರಿಯುದ್ದಕ್ಕೂ ಅವನು ಹೀಗೆ ಮಾತನಾಡುತ್ತಲೇ ಇರುತ್ತಾನೆ. ಬಸ್ಸಿಳಿದು ಯಾರೇ ಬಂದರೂ ಅವನದು ಇದೇ ಮಾತು..ಮಾತು.

ಯಾರೋ ಗದರಿಸಿದರು.

ಆದರೂ ಬಿಡದೆ ಹೇಳಿದ.

“ಇದೂ …ಊರಂತರೇನ್ರೀ? ಊರಾಗ ಯಾರನ ಬದುಕ್ಯಾರೇನ್ರಿ ?”

ಅಡ್ಡಗಟ್ಟಿ ಕೇಳಿದ ಆತನನ್ನು ಹುಚ್ಚನೆಂದು ಹೇಗೆ ಕರೆಯಲಿ ?

 

         ಬಿ.ಶ್ರೀನಿವಾಸ

TAGGED:dinamaana.comLatest Kannada NewsSanduru stories.ಕನ್ನಡ ಸುದ್ದಿದಿನಮಾನ.ಕಾಂಸಂಡೂರಿನ ಕಥನಗಳು.
Share This Article
Twitter Email Copy Link Print
Previous Article Sahitya Parishad ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಬೇಕು : ಜಿ.ಎಸ್.ಸುಭಾಷ್ ಚಂದ್ರ ಬೋಸ್
Next Article sanduru mining ಸೊಂಡೂರಿನ ಕಗ್ಗತ್ತಲೆಯ ಕಥನಗಳು-17 ಅಂತರಂಗ ಕಳೆದುಕೊಂಡ ನತದೃಷ್ಟ ಊರಿನಲ್ಲಿ…

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಘನತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಬೆಂಕಿ: ಆವರಗೊಳ್ಳ ಗ್ರಾಮಕ್ಕೆ ಹಬ್ಬಿದ ವಿಷ ಹೊಗೆ

ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆಯ ಆವರಗೊಳ್ಳದಲ್ಲಿನ ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ವಿಷಪೂರಿತ ಹೊಗೆ ಗ್ರಾಮವನ್ನು…

By Dinamaana Kannada News

ಗಣಿಗಾರಿಕೆ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪಗಳು ಬಂದರೆ ಸಮಸ್ಯೆಗಳು ಉಲ್ಭಣಿಸುತ್ತವೆ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

ದಾವಣಗೆರೆ/ ಬೆಂಗಳೂರು (Davanagere): ಗಣಿಗಾರಿಕೆಯ ವಿಚಾರದಲ್ಲಿ ರಾಜಕೀಯ ನುಸುಳಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವರಾದ…

By Dinamaana Kannada News

SC -ST ಅಭ್ಯರ್ಥಿಗಗಳಿಂದ ಮೊಬೈಲ್ ಕ್ಯಾಂಟೀನ್ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ (Davanagere):  ಪ್ರಸಕ್ತ ಸಾಲಿನಲ್ಲಿ ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮ : ಸಹಾಯಧನ, ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

By Dinamaana Kannada News
Davangere
ತಾಜಾ ಸುದ್ದಿ

ಪಿಎಸ್‍ಐ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿ ಅವಧಿ ವಿಸ್ತರಣೆ

By Dinamaana Kannada News
Davanagere
ತಾಜಾ ಸುದ್ದಿ

ದೇವರಾಜ ಅರಸು ಅಭಿವೃದ್ದಿ ನಿಗಮ: ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ವಿಶ್ವಕರ್ಮ ಅಭಿವೃದ್ದಿ ನಿಗಮ : ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?