Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಯಾದವ, ವಾಲ್ಮೀಕಿ, ಕುರುಬ ಸೇರಿ ಇತರೆ ಸಮಾಜಗಳು ಇಂದಿಗೂ ಹಿಂದುಳಿದ ವರ್ಗಗಳಾಗಿವೆ: ಜಿ. ಬಿ. ವಿನಯ್ ಕುಮಾರ್ ಬೇಸರ
ತಾಜಾ ಸುದ್ದಿ

ಯಾದವ, ವಾಲ್ಮೀಕಿ, ಕುರುಬ ಸೇರಿ ಇತರೆ ಸಮಾಜಗಳು ಇಂದಿಗೂ ಹಿಂದುಳಿದ ವರ್ಗಗಳಾಗಿವೆ: ಜಿ. ಬಿ. ವಿನಯ್ ಕುಮಾರ್ ಬೇಸರ

Dinamaana Kannada News
Last updated: August 23, 2025 1:37 pm
Dinamaana Kannada News
Share
Davanagere
SHARE
ದಾವಣಗೆರೆ: ದೇಶದಲ್ಲಿ ಇಂದಿಗೂ ಯಾದವ, ವಾಲ್ಮೀಕಿ, ಕುರುಬ ಸೇರಿದಂತೆ ಇತರೆ ಸಮಾಜಗಳು ಹಿಂದುಳಿದ ವರ್ಗಗಳಾಗಿ ಉಳಿದಿವೆ. ಇದಕ್ಕೆ ಕಾರಣ ಏನು ಎಂಬುದನ್ನು ಕಂಡುಕೊಂಡು ಮುಂದೆ ತರುವ ಕೆಲಸ ಆಗಬೇಕಿದೆ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನ.ಯ್ ಕುಮಾರ್ ಕರೆ ನೀಡಿದರು.
ಜಗಳೂರು ಪಟ್ಟಣದ ಮರೇನಹಳ್ಳಿ ರಸ್ತೆಯ ಸಮೀಪ ಜಗಳೂರು ತಾಲೂಕು ಯಾದವ ಸಂಘ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಯಾವ ಸಮಾಜದ ಸಂಸ್ಕೃತಿ ಗಟ್ಟಿಯಾಗಿರುತ್ತದೆಯೋ ಆ ಸಮಾಜದಲ್ಲಿ ಭೌತಿಕತೆ ಉತ್ಕೃಷ್ಟವಾಗಿರುತ್ತದೆ. ಸಮಾಜದ ಸಂಸ್ಕೃತಿ ಗಟ್ಟಿಯಿದ್ದರೆ ಬಹಳ ಪ್ರತಿಭೆಗಳು ಹೊರ ಬರುತ್ತವೆ. ಆಗ ಆಳವಾದ ಜ್ಞಾನವೂ ಇರುತ್ತದೆ. ಇದೆಲ್ಲಾ ಸಾಧ್ಯ ಆಗುವುದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.
ಕುರುಬ, ಯಾದವ, ವಾಲ್ಮೀಕಿ ಸೇರಿದಂದೆ ಇತರೆ ಸಮಾಜಗಳು ನಾಗರಿಕ ಸಂಸ್ಕೃತಿ ಹೊಂದಿದ್ದರೂ ಮುಂದುವರಿದ ಸಮಾಜಗಳಾಗಲಿಲ್ಲ. ಎಲ್ಲಾ ಸಮಾಜ, ಸಂಸ್ಕೃತಿಗೆ ಮೂಲ ಬೇರು ಈ ಸಮಾಜಗಳು. ಆದ್ರೆ, ಕನಿಷ್ಠ ಸೌಲಭ್ಯ ಪಡೆದುಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಮ್ಮ ದೇಶದಲ್ಲಿ ಇದೆ. ಸಮಾಜಗಳ ಅಸ್ಮಿತೆ, ಸಂಸ್ಕೃತಿ ಉಳಿಸಬೇಕಿದೆ. ಉತ್ತಮ ಶಿಕ್ಷಣ ಕೊಡಿಸಲು ಹೋರಾಟ ಮಾಡಬೇಕಾದ ಅಗತ್ಯತೆಯೂ ಇದೆ ಎಂದು ತಿಳಿಸಿದರು.
Read also : ದಾವಣಗೆರೆ : ಮಧ್ಯಸ್ಥಿಕೆ ಮತ್ತು ರಾಜಿಯಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ : ನ್ಯಾ.ವೇಲಾ ಡಿಕೆ
ಸಂಸ್ಕೃತಿ ಉಳಿಯಬೇಕಾದರೆ ಸಮಾಜಕ್ಕೆ ಸಮುದಾಯ ಭವನ ಬೇಕು, ದೇವಸ್ಥಾನ, ಶಿಕ್ಷಣ ಸಂಸ್ಥೆಗಳೂ ಅವಶ್ಯಕ. ಈ ಸಮಾಜದಲ್ಲಿ ಪ್ರಬಲ ಮತ್ತು ಬಲಾಢ್ಯ ರಾಜಕೀಯ ನಾಯಕರಿದ್ದರೆ ಸಾಧ್ಯವಾಗುತ್ತದೆ. ನಮ್ಮ ಸಮಾಜದ ಐಎಎಸ್, ಐಪಿಎಸ್ ಪಡೆದವರು ಹೆಚ್ಚಾಗಬೇಕು. ಆಗ ಸಮಸ್ಯೆಗಳು ಕಡಿಮೆಯಾಗುತ್ತವೆ. ಬೆರಳೆಣಿಕೆಯಷ್ಟು ಮಾತ್ರ ಅಧಿಕಾರಿಗಳಿರುತ್ತಾರೆ. ಕೆಲಸವೂ ಆಗುವುದಿಲ್ಲ, ಸೌಲಭ್ಯವೂ ಸಿಗಲ್ಲ. ರಾಜಕೀಯ ಪ್ರಾತಿನಿಧ್ಯವೂ ದೊರೆಯುವುದಿಲ್ಲ ಎಂದು ಹೇಳಿದರು.
ದೇಶದಲ್ಲಿಯೇ ಇನ್ ಸೈಟ್ಸ್ ಸಂಸ್ಥೆ ಮೂರನೇ ಸ್ಥಾನದಲ್ಲಿರುವ ದೊಡ್ಡ ಸಂಸ್ಥೆ. ನಮ್ಮ ಸಂಸ್ಥೆಗಳಲ್ಲಿಯೂ ಹೆಚ್ಚಿನ ಹಿಂದುಳಿದ ಸಮಾಜದವರು ಬರಲ್ಲ. ಟಾಪ್ ಹತ್ತು ಸ್ಥಾನದಲ್ಲಿ ಬರಲು ಆಗದು. ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಉತ್ಕೃಷ್ಟ, ಗುಣಮಟ್ಟದ ಶಿಕ್ಷಣ ದೊರೆಯಬೇಕು. ಮಕ್ಕಳಲ್ಲಿ ಐಎಎಸ್ ಮುಂದೆ ಓದಿ ಪಾಸಾಗಿ ಅಧಿಕಾರಿಗಳಾಗುತ್ತೇವೆಂಬ ಧೈರ್ಯ ತುಂಬಬೇಕಾಗಿದೆ. ಈ ನಿಟ್ಟಿನಲ್ಲಿ ಪೋಷಕರು, ಸರ್ಕಾರ ಗಂಭೀರ ಆಲೋಚನೆ ಮಾಡಬೇಕಾದ ತುರ್ತು ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಆಗ ತೋರಿದಷ್ಟೇ ಪ್ರೀತಿ ಈಗಲೂ ಜನರು ತೋರುತ್ತಿದ್ದಾರೆ. ಚುನಾವಣೆ ಮಾಡಲಿ, ಬಿಡಲಿ. ಸಂಸ್ತೆ ನಡೆಸುವ ಸಂಸ್ಥಾಪಕನಾಗುವ ಭಾಗ್ಯಸಿಕ್ಕಿದೆ. ಶಿಕ್ಷಣವನ್ನು ಇನ್ನೊಬ್ಬರಿಗೆ ನೀಡುವಂಥ ಅತ್ಯುನ್ನತ ಕಾರ್ಯ ದೊರೆತಿದೆ. ನಿಮ್ಮ ಜೊತೆ ಸದಾ ಇರುತ್ತೇನೆ. ನಾನು ಈಗಲೂ ದಿನಕ್ಕೆ 2 ಗಂಟೆಗಳ ಕಾಲ ಐಎಎಸ್, ಕೆಎಎಸ್ ಓದಲು ತಯಾರಿ ಹೇಗೆ ಮಾಡಿಕೊಳ್ಳಬೇಕು? ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಓದುವಾಗಿನಿಂದಲೇ ಶಿಸ್ತು ಹೇಗೆ ಬೆಳೆಸಿಕೊಳ್ಳಬೇಕು? ತರಬೇತಿ ಹೇಗಿರಬೇಕು ಎಂಬುದೂ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.
ಜಗಳೂರು ಶಾಸಕ ಚಿಕ್ಕಮ್ಮನಹಳ್ಳಿ ಬಿ. ದೇವೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಚಿತ್ರದುರ್ಗದ ಶ್ಬೀ ಕ್ಷೇತ್ರ ಗೊಲ್ಲಗಿರಿ ಯಾದವ ಮಹಾಸಂಸ್ಥಾನ ಮಠದ ಶ್ರೀ ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಯಾದವ ಸಂಘದ ಅಧ್ಯಕ್ಷ ಬಿ. ಸಿ. ಕೃಷ್ಣಮೂರ್ತಿ ವಹಿಸಿದ್ದರು. ಮಾಜಿ ಶಾಸಕ ಹೆಚ್. ಪಿ. ರಾಜೇಶ್, ಶಾಂತಕುಮಾರಿ ಶಶಿಧರ್, ಜೆ. ಎಸ್. ವೇಣುಗೋಪಾಲ್, ತಿಪ್ಪೇಸ್ವಾಮಿ ಗೌಡ್ರು, ಕೆ. ಪಿ. ಪಾಲಯ್ಯ, ಮಹೇಶ್ವರಪ್ಪ, ಚಿತ್ತಪ್ಪ, ಕೆ. ಬಿ. ಕಲ್ಲೇರುದ್ರೇಶ್, ಜಿ. ಬಿ. ಬಾಲರಾಜ್ ಮತ್ತಿತತರು ಹಾಜರಿದ್ದರು.
TAGGED:Davanagere NewsDinamana.comKannada Newsಕನ್ನಡ ಸುದ್ದಿಜಿ.ಬಿ.ವಿನಯ್ ಕುಮಾರ್ದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ದಾವಣಗೆರೆ|ಮಧ್ಯಸ್ಥಿಕೆ ಮತ್ತು ರಾಜಿಯಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ:ನ್ಯಾ.ವೇಲಾ ಡಿಕೆ
Next Article Davanagere ಒಳ ಮೀಸಲಾತಿ|ಲಾಭ ಪಡೆದುಕೊಳ್ಳಲು ಜ್ಞಾನದ ಗ್ರಹಿಕೆಯ ಶಕ್ತಿ ಬೆಳೆಸುವುದು ಮುಖ್ಯ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಲೋಕಸಭಾ ಚುನಾವಣೆ  9 ನಾಮಪತ್ರ ಸಲ್ಲಿಕೆ

ದಾವಣಗೆರೆ :  ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಏಪ್ರಿಲ್ 15 ರಂದು…

By Dinamaana Kannada News

ಈ ದೀಪಾವಳಿ ಕತ್ತಲೆಯಿಂದ ಬೆಳಕನ್ನು ತರಲಿ

​ದೀಪಾವಳಿ, ಅಂದರೆ ದೀಪಗಳ ಸಾಲು. ಇದು ಕೇವಲ ಒಂದು ಹಬ್ಬವಲ್ಲ, ನಮ್ಮ ಸಂಸ್ಕೃತಿ ಮತ್ತು ನಂಬಿಕೆಯ ಪ್ರಕಾಶಮಾನವಾದ ಪ್ರತಿಬಿಂಬ. ಪ್ರತಿ…

By Dinamaana Kannada News

Davanagere | 23 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಸೆರೆ

ದಾವಣಗೆರೆ.ಅ.1 (Davanagere):  ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮನೆ ಮತ್ತು ದೇವಸ್ಥಾನಗಳಲ್ಲಿ ನಡೆದಿದ್ದ 23 ಕಳ್ಳತನ ಪ್ರಕರಣಗಳಲ್ಲಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಹರಿಹರ: ನಿಯಮಬಾಹಿರ ಮಣ್ಣು ಗಣಿಗಾರಿಕೆ ತಡೆಯಲು ಆಗ್ರಹಿಸಿ ಮನವಿ

By Dinamaana Kannada News
Davanagere
ತಾಜಾ ಸುದ್ದಿ

ಮೆಕ್ಕೆಜೋಳದ ಬೆಲೆ ಕುಸಿತ :ಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

By Dinamaana Kannada News
Davanagere
ತಾಜಾ ಸುದ್ದಿ

ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By Dinamaana Kannada News
Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?