ದಾವಣಗೆರೆ (Davanagere): ಫಲಾನುಭವಿಗಳು ಸರ್ಕಾರದಿಂದ ಪಡೆಯುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ನಗರದ ಗೃಹ ಕಚೇರಿಯ ಆವರಣದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅರ್ಹ 15 ಫಲಾನುಭವಿಗಳಿಗೆ ತ್ರಿ ಚಕ್ರ ವಾಹನಗಳನ್ನು ವಿತರಿಸಿ ಅರಿವು ಮೂಡಿಸಿದರು.
2012 ಹಾಗೂ 13 ನೇ ಸಾಲಿನಿಂದ ವಿಕಲಚೇತನರಿಗೆ ತ್ರಿಚಕ್ರ ವಿತರಣೆಯ ಯೋಜನೆಯನ್ನು ರೂಪಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿ ಇದುವರೆಗೂ 5436 ಫಲಾನುಭವಿಗಳಿಗೆ ತ್ರಿ ಚಕ್ರ ವಾಹನಗಳನ್ನು ನೀಡಲಾಗಿದೆ.
2023-24 ನೇ ಸಾಲಿನಲ್ಲಿ ಜಿಲ್ಲೆಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ರೂ.4 ಕೋಟಿ 25 ಲಕ್ಷದ 10 ಸಾವಿರ ಅನುದಾನ ಬಂದಿದ್ದು 2024-25 ನೇ 286 ಅರ್ಜಿಗಳ ಪೈಕಿ 86 ತ್ರಿ ಚಕ್ರ ವಾಹನಗಳನ್ನು ವಿತರಿಸಿದ್ದು ಇನ್ನುಳಿದವುಗಳನ್ನು ಹಂತ ಹಂತವಾಗಿ ವಿತರಣೆ ಆಗಲಿವೆ ಎಂದರು.
ಸರ್ಕಾರದಿಂದ ನೀಡುವ ಯಾವುದೇ ಯೋಜನೆಯನ್ನು ಫಲಾನುಭವಿಗಳು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಸಚಿವರು ಕರೆ ನೀಡಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರ ಇಲಾಖೆಯ ಉಪ ನಿರ್ದೇಶಕ ಡಾ.ಕೆ.ಕೆ ಪ್ರಕಾಶ್, ಕಾಂಗ್ರೆಸ್ ಪಕ್ಷದ ಮುಖಂಡರುಗಳು ಇತರರು ಉಪಸ್ಥಿತರಿದ್ದರು.
Read also : ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ : ತೀರ್ಪುಗಾರರಾಗಿ ಡಾ.ಎಲ್.ರಾಕೇಶ್