ಜಗಳೂರು : ಪೌತಿ ಖಾತೆ ಮಾಡಿಕೊಳ್ಳಲು ರೈತರು ನಿರಾಸಕ್ತಿ ವಹಿಸುತ್ತಿರುವುದರಿಂದ ರೈತರ ಮನೆ ಬಾಗಿಲಿಗೆ ತೆರಳಿ ಜಾಗೃತಿ ಮೂಡಿಸುತ್ತಿರುವ ತಹಶೀಲ್ದಾರ್ ಸೈಯ್ಯದ್ ಕಲೀಮುಲ್ಲಾ.
ಮಾರ್ಚ್ 15ರೊಳಗೆ ಪೌತಿ ಖಾತೆ ಮಾಡಿಸಿಕೊಳ್ಳದಿದ್ದರೆ ರೈತರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳಿಂದ ವಂಚಿತರಾಗಲಿದ್ದೀರಿ ಎಂದು ತಹಸಿಲ್ದಾರ್ ಸೈಯದ್ ಖಾಲಿ ಮುಲ್ಲಾ ಹೇಳಿದರು.
ಪೌತಿ ಖಾತೆ ಆಂದೋಲನ : ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪೌತಿ ಖಾತೆದಾರ ರೈತರ ಮನೆ ಬಾಗಿಲಿಗೆತೆರಳಿ ಜಾಗೃತಿ ಮೂಡಿಸಲಾಗುತ್ತಿದೆ . ಸಾವಿರಾರು ರೂಗಳನ್ನು ವೆಚ್ಚ ಮಾಡಿ ಇಲಾಖೆಗೆ ಅಲೆದಾಟವನ್ನು ತಪ್ಪಿಸುವ ಸಲುವಾಗಿ ಕಂದಾಯ ಇಲಾಖೆ ವತಿಯಿಂದ ಉಚಿತವಾಗಿ ಪೌತಿ ಖಾತಿ ಆಂದೋಲನ ಕಾರ್ಯಕ್ರಮವನ್ನು ಮಾನ್ಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಆದೇಶದಂತೆ ಪೌತಿಖಾತೆ ಆಂದೋಲನವನ್ನು ತಾಲೂಕಿನಲ್ಲಿ ಮಾಡಲಾಗುತ್ತಿದೆ ಆದರೆ ರೈತರ ನಿರಶಕ್ತಿಯಿಂದಾಗಿ ಪೌತಿಖಾತೆ ಆಂದೋಲನ ದಲ್ಲಿ ನಿಗಧಿತ ಗುರಿ ಸಾಧಿಸುವಲ್ಲಿ ಹಿನ್ನಡೆಯಗುತ್ತಿದೆ.
ವಂಶವೃಕ್ಷ, ಆಧಾರ್ ಓಟಿಪಿ ಹೇಳಿದರೆ, ಕ್ಷಣದಲ್ಲಿ ಪೌತಿಖಾತೆ: ಮನೆ ಬಾಗಿಲಿಗೆ ಬಂದಂತಹ ಗ್ರಾಮ ಆಡಳಿತ ಅಧಿಕಾರಿಗಳಿಗೆ ವಾರಸುದಾರರ ಆಧಾರ್ ಕಾರ್ಡ್ ವಂಶವೃಕ್ಷ ಮತ್ತು ಆದರ್ಗೆ ಬರುವ ಓಟಿಪಿಯನ್ನು ಹೇಳಿದರೆ ಸ್ಥಳದಲ್ಲಿಯೇ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ.
ಮನೆ ಬಾಗಿಲಿಗೆ ತಹಶೀಲ್ದಾರ್ : ಪೌತಿ ಖಾತೆ ಆಂದೋಲನ ಯಶಸ್ವಿಗೊಳಿಸಬೇಕು ಎಂಬ ಉದ್ದೇಶದಿಂದ ಖುದ್ದು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ರೈತರ ಮನೆಬಾಗಿಲಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ರೈತರು ಪೌತಿ ಖಾತೆ ಮಾಡಿಸಿಕೊಳ್ಳುವುದರಿಂದ ಸರ್ಕಾರದಿಂದ ಬರುವಂತಹ ಸಹಾಯಧನ ಬರ ಪರಿಹಾರ ಪಿಎಂ ಕಿಸನ್ ಸೇರಿದಂತೆ ಹಲವಾರು ಯೋಜನೆಗಳು ರೈತರಿಗೆ ದೊರೆಯಲು ಸಹಾಯಕವಾಗಲಿ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ವಾರಸುದಾರರ
ನಿರಾಸಕ್ತಿ: ತಂದೆ ಸತ್ತ ಮೇಲೆ ಮಕ್ಕಳು ಪೌತಿ ಖಾತೆಯನ್ನು ಮಾಡಿಸಿಕೊಳ್ಳಬೇಕು ಆದರೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ನೀಡಬೇಕು ಎಂಬ ಉದ್ದೇಶದಿಂದ ಮತ್ತು ಸಹೋದರರ ಕಲಹಗಳಿಂದಾಗಿ ಪೌತಿ ಖಾತೆಯನ್ನು ಮಾಡಿಸಿಕೊಳ್ಳದೆ ವಿಳಂಬ ಧೊರಣೆ ಅನುಸರಿಸುತ್ತಿದ್ದಾರೆ.
Read also : ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ : ಪರೀಕ್ಷೆಗೆ ಮಕ್ಕಳನ್ನು ಸನ್ನದ್ದಗೊಳಿಸುವ ಕಾರ್ಯ ಭರದಿಂದ ಸಾಗಿದೆ
ಮಾರ್ಚ್ 15ಕ್ಕೆಗಡುವು: 2025 ಜುಲೈನಿಂದಲೇ ಪ್ರಾರಂಭವಾದ ಪೌತಿಖಾತೆ ಆಂದೋಲನಕ್ಕೆ ಸೆಪ್ಟೆಂಬರ್ ಮಾಹೆಯಲ್ಲಿ ಮೊಬೈಲ್ ನಲ್ಲಿ ಹೊಸ ತಂತ್ರಾಂಶವನ್ನು ಸೃಷ್ಟಿಸಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ನೀಡಲಾಯಿತು.
ವಿವಾದಾಸ್ಪದ ಪ್ರಕರಣವೆಂದು ಪರಿಗಣಿಸಲು ಸರ್ಕಾರದ ಆದೇಶ: ತಾಲೂಕಿನಲ್ಲಿ 19,000 ಪೌತಿ ಖಾತೆ ಪ್ರಕರಣಗಳಿದ್ದು ಇದರಲ್ಲಿ 7,000 ಪ್ರಕರಣಗಳು ಬಾಕಿ ಇದ್ದು ಮಾರ್ಚ್ 15ರೊಳಗೆ ರೈತರು ಪೌತಿ ಖಾತೆ ಮಾಡಿಸಿಕೊಳ್ಳದಿದ್ದರೆ ಇದು ವಿವಾದ ಪಾದ ಪ್ರಕರಣವೆಂದು ಪರಿಗಣಿಸಿ ಆರ್ ಟಿ ಸಿ ಯ ಕಲಂ ನಂಬರ್ 11 ರಲ್ಲಿ ಉತ್ತರ ಅಧಿಕಾರಿಗಳಲ್ಲಿ ತಕರಾರು ಇದ್ದು ಎಂದು ನಮೂದಿಸಲಾಗುವುದು ಇದರಿಂದ ರೈತರಿಗೆ ತೊಂದರೆಯಾಗಲಿದೆ.
ಪೌತಿ ಖಾತೆ ಮಾಡಿಸಿಕೊಳ್ಳದಿದ್ದರೆ ರೈತರಿಗೆ ತೊಂದರೆ ಕಟ್ಟಿಟ್ಟ ಬುತ್ತಿ: ಪೌತಿ ಖಾತೆ ಆಂದೋಲನದಲ್ಲಿ ರೈತರು ಭೌತಿ ಖಾತೆ ಮಾಡಿಸಿಕೊಳ್ಳದಿದ್ದರೆ ವಂಶವೃಕ್ಷ, ಬರ ಪರಿಹಾರ, ಅತಿವೃಷ್ಟಿ, ವ್ಯವಸಾಯಗಾರರ ಕುಟುಂಬ ಪ್ರಮಾಣ ಪತ್ರ, ಸಣ್ಣ ರೈತರ ಪ್ರಮಾಣ ಪತ್ರ, ಪಿಎಂ ಕಿಸಾನ್ ಯೋಜನೆ ಸೇರಿದಂತೆ ಇನ್ನು ಹಲವಾರು ಯೋಜನೆಗಳಿಂದ ವಂಚಿತರಾಗುವುದು ನಿಶ್ಚಿತ.
ರೈತರಿಗಾಗಿ ಸರ್ಕಾರ ಜಾರಿಗೆ ತಂದಿರುವ ಮಹಾಂತ ಮಹತ್ವಕಾಂಕ್ಷಿ ಯೋಜನೆಯಾಗಿದ್ದು ರೈತರು ಈ ಸೌಲಭ್ಯವನ್ನು ಸದ್ವಿನಿಯೋಗ ಮಾಡಿದಾಗ ಕೊಂಡಾಗ ಮಾತ್ರ ಜಾಣರಾಗಲಿದ್ದಾರೆ .
ಸೈಯದ್ ಕಲಿಂ ಉಲ್ಲಾ , ತಹಶೀಲ್ದಾರ್
ಪೌತಿ ಖಾತೆಯನ್ನು ರೈತರ ತಪ್ಪದೇ ಮಾಡಿಸಿಕೊಳ್ಳಬೇಕು ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂಬುದನ್ನು ತಿಳಿಯಬೇಕು.
ಚಿಕ್ಕ ಮಲ್ಲನಹೊಳೆ ಚಿರಂಜೀವಿ
ರೈತ ಸಂಘ ಮತ್ತು ಹಸಿರು ಸೇನೆಯ ( ಹುಚ್ಚವ್ವನ ಹಳ್ಳಿ ಮಂಜುನಾಥ )ಬಣ
ತಾಲೂಕು ಅಧ್ಯಕ್ಷ
