Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸೊಂಡೂರಿನ ಕಗ್ಗತ್ತಲೆಯ ಕಥನಗಳು -8 ನೀಲ ಕುರುಂಜಿ ಹೂಗಳ ಮೌನ!
ತಾಜಾ ಸುದ್ದಿ

ಸೊಂಡೂರಿನ ಕಗ್ಗತ್ತಲೆಯ ಕಥನಗಳು -8 ನೀಲ ಕುರುಂಜಿ ಹೂಗಳ ಮೌನ!

Dinamaana Kannada News
Last updated: April 29, 2024 4:27 am
Dinamaana Kannada News
Share
sanduru bellrey
ನೀಲ ಕುರುಂಜಿ!
SHARE

ನೀಲ ಕುರುಂಜಿ!

ಸ್ಟ್ರಾಬಿಲೆಂತಸ್ ಕುಂಥಿಯಾನಾ  ಎಂಬ ವೈಜ್ಞಾನಿಕ ಹೆಸರಿನ ಇದೊಂದು ಹೂವ್ವೆ ಮೈವೆತ್ತ ಸಸ್ಯ. ದೀರ್ಘ ಕಾಲಕ್ಕೊಮ್ಮೆ ಅರಳುವ  ಈ ಹೂವು, ಪ್ರತಿ ಹನ್ನೆರೆಡು ವರುಷಗಳಿಗೊಮ್ಮೆ ನೀಲಿ ನೇರಳೆ ಬಣ್ಣ ಮಿಶ್ರಿತ ಅರಳಿ ಹೂಗಳ ಮಹಾದರ್ಶನವನ್ನೆ ಮಾಡಿಸುತ್ತದೆ.  ಪರ್ವತಶ್ರೇಣಿಗಳುದ್ದಕ್ಕೂ ಏಕಕಾಲಕ್ಕೆ ಅರಳಿ ಹೂ ಹಬ್ಬವೆ ಜರುಗುತ್ತದೆ.

ಇಲ್ಲಿನ ಷಣ್ಮುಖ ಸ್ವಾಮಿ ಸ್ಥಳೀಯ ಹುಡುಗಿಯನ್ನು ಲಗ್ನವಾಗಲು ಇದೇ ನೀಲಕುರುಂಜಿ ಹೂ ಮಾಲೆ ಧರಿಸಿ ಹೊರಡುತ್ತಾನೆ ಎಂಬ ಪ್ರತೀತಿಯೂ ಇದೆ. ಆ ಸಮಯದಲ್ಲಿ ಇಲ್ಲಿನ ಗಂಡಿ ನರಸಿಂಹನಿಗೂ, ಷಣ್ಮುಖ, ಪಾರ್ವತಿಯ ಪೂಜೆಗಳಿಗೆಲ್ಲ ಈ ಹೂವನ್ನೆ ಬಳಸಲಾಗುತ್ತದೆ.

ಹೂ ಸಸ್ಯಗಳ ಮಾರಣ ಹೋಮವೆ ನಡೆದಿತ್ತು

ಸೊಂಡೂರಿನ ಪರ್ವತ ಶ್ರೇಣಿಯಲ್ಲಿ ಅಪರೂಪಕ್ಕೆ ಅರಳುವ ಈ ಹೂ ಸಾಮ್ರಾಜ್ಯ ನೋಡಲು ಕಣ್ಣೆರೆಡು ಸಾಲದಾಗುತ್ತಿದ್ದವು. ೨೦೧೭ರಲ್ಲಿ ಹೂ ಗಳ ಮಹಾದರ್ಶನದಷ್ಟೊತ್ತಿಗೆ ಹೂ ಸಸ್ಯಗಳ ಮಾರಣಹೋಮವೆ ನಡೆದಿತ್ತು.  ಹೂವು, ಜೇನ್ನೊಣ, ದುಂಬಿಗಳ ಆಕರ್ಷಿಸಿ ಪರಾಗಸ್ಪರ್ಶಗೊಂಡು  ಮನುಷ್ಯರ ಮನ ಅರಳಿತೆಂದು ಭಾವಿಸಿದ ನಂತರವೇ ಬಾಡಿ ನೆಲಕ್ಕುರುಳುವುದು.

ಅರಳುವುದು ಹನ್ನೆರೆಡು ವರುಷಗಳ ನಂತರವೆ

ಮುವ್ವತ್ತು ಸೆಂಟಿಮೀಟರನಿಂದ ಮರ ಗಿಡಗಳ ಸಪೊರ್ಟ್ ಸಿಕ್ಕರೆ ನೂರು ನೂರೈವತ್ತು ಸೆಂಟಿಮೀಟರುಗಳಷ್ಟು ಎತ್ತರ ಬೆಳೆಯಬಲ್ಲ  ಸಸ್ಯ, ಒಮ್ಮೆ ಅರಳಿದರೆ ಮತ್ತೆ ಅರಳುವುದು ಹನ್ನೆರೆಡು ವರುಷಗಳ ನಂತರವೆ.  ಹನ್ನೆರೆಡು ವರುಷಗಳವರೆಗೆ ಬದುಕಿರುವುದಾದರೂ ಹೇಗೆ?  ಎಂದು ಯೋಚಿಸಿದ್ದೇ ತಡ, “ನಾವು ಬದುಕಿಲ್ಲೇನು?”ಎಂಬಂಥ   ಉತ್ತರ , ಬದುಕಿಯೂ ಸತ್ತಂತಿರುವ ಜನರಿಂದ ಥಟ್ಟಂತ ಬಂದು ಬಿಡುತ್ತೆ. ಅಕಾಲಿಕ ಮರಣಕ್ಕೆ ತುತ್ತಾದ ಮಕ್ಕಳು, ಅಸ್ತಮಾ, ಟೀಬಿಗೆ ಬಲಿಯಾದ ಜೀವಗಳ ನೆನಪಿಗೆ, ಶ್ರದ್ಧಾಂಜಲಿ ಸಲ್ಲಿಸಲೋ ಎಂಬಂತೆ ಬರುವ,  ಪ್ರತಿ ಹನ್ನೆರೆಡು ವರುಷಕ್ಕೊಮ್ಮೆ ಸರಿಯಾಗಿ ಬದುಕಿ ಉಳಿದ ಮನುಷ್ಯ ಸಂಕುಲಗಳನ್ನು ಮಾತನಾಡಿಸಿ  ಸಂತೈಸಲೆಂಬಂತೆ ಹೂ ಅರಳುತ್ತದೆ.

ಕಲ್ಲು ಮಣ್ಣುಗಳ ನಡುವೆ ಮನುಷ್ಯ ಸಮುದಾಯದ ಹತಾಶೆ, ದಿಗ್ಭಮೆ, ಹಗೆತನ, ನೋವುಗಳ ಹತ್ತಿಕ್ಕಲು ಇಂತಹ ಹೂವುಗಳ ಅರಳುವಿಕೆಯಿಂದ ಕೆಲ ಸಮಯದವರೆಗಾದರೂ ನಿರಾಳತೆಯನ್ನು ಅನುಭವಿಸಬಹುದು.  ಆಧುನಿಕ ವಿಜ್ಞಾನ ಸೃಷ್ಟಿಸಿದ ಗಣಿಗಾರಿಕೆಯಿಂದಾಗಿ ಭಸ್ಮಾಸುರನಂತೆ ನಾಶವಾಗುವ ಮುನ್ನ ತುಸು ಸಮಯವಾದರೂ ನಿರಾಳತೆ ಯನ್ನು ಅನುಭವಿಸುವ ಅವಕಾಶವನ್ನು ಪ್ರಕೃತಿ ನೀಡಿದೆ.

ನೀಲಕುರುಂಜಿ ಹೂಗಳು ಕೂಡ ಈಗ ಮೌನ

ಘೋರ್ಪಡೆಯಂತಹ ಅರಮನೆಯ ಮನುಷ್ಯ ಕಂ ಬಿಜಿ ರಾಜಕಾರಣಿ ಬಹಳಷ್ಟು ಸಮಯವನ್ನು ಯಾಕೆ ಪ್ರಕೃತಿಯೊಂದಿಗೆ, ಪ್ರಾಣಿ ಪಕ್ಷಿಗಳೊಂದಿಗೆ ಸಂವಾದಿಸುತ್ತ ಕಾಲ ಕಳೆಯುತ್ತಿದ್ದರು? ಎಂಬುದಕ್ಕೆ ಉತ್ತರಿಸಲು ನೀಲಕುರುಂಜಿ ಹೂಗಳು ಕೂಡ ಈಗ ಮೌನವಾಗಿವೆ.

ಇನ್ನೂ ಎಂಟು ವರ್ಷ ಕಾಯಬೇಕು

ನೀಲಕುರುಂಜಿ ಮಹಾದರ್ಶನಕ್ಕೆ ಇನ್ನೂ ಎಂಟು ವರ್ಷ ಕಾಯಬೇಕು. ಅಲ್ಲಿಯವರೆಗೂ ಅವುಗಳ ನಿಶಬ್ದ ರೋದನ ನಮ್ಮನ್ನು ಸುತ್ತುತ್ತಿರುತ್ತದೆ. ಅಲ್ಲಿಯವರೆಗೆ ಷಣ್ಮುಖಸ್ವಾಮಿ ಸಹ ಹುಡುಗಿಯ ಹಿಂದೆ ಬೀಳುವಂತಿಲ್ಲ.!

        ಮತ್ತೆ …ನೀಲಕುರುಂಜಿ ಅರಳಲಿ.ಮನುಷ್ಯರ ಮೊಗವೂ ಅರಳಲಿ.

                      ಬಿ.ಶ್ರೀನಿವಾಸ

 

TAGGED:dinamaana.comKannada NewsSanduru stories.ಕನ್ನಡ ಸುದ್ದಿದಿನಮಾನ.ಕಾಂಸಂಡೂರಿನ ಕಥನಗಳು.
Share This Article
Twitter Email Copy Link Print
Previous Article Madiga community davanagere ಮಾದಿಗ ಸಮುದಾಯದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ: ಮಾಜಿ ಸಚಿವ ಎಚ್. ಆಂಜನೇಯ
Next Article davangere ಚೆಕ್ ಬೌನ್ಸ್ ಪ್ರಕರಣ: ಶಿಕ್ಷಕಿಗೆ ಕಾರಗೃಹ ಶಿಕ್ಷೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere Judgement news | ತಂದೆಯ ಸಹೋದರನ್ನು ಕೊಲೆ ಮಾಡಿದ್ದ ಯುವಕನಿಗೆ ಜೀವಾವಧಿ ಶಿಕ್ಷೆ

ದಾವಣಗೆರೆ.ಸೆ.17 (Davanagere): ಜಮೀನು ವಿವಾದದಿಂದ ಕೋಪಗೊಂಡು ತನ್ನ ತಂದೆಯ ಸಹೋದರನ್ನು ಕೊಲೆ ಮಾಡಿದ್ದ ಯುವಕನಿಗೆ ಜೀವಾವಧಿ ಶಿಕ್ಷೆ ಮತ್ತು 20…

By Dinamaana Kannada News

ಪ್ರೊ.ಬಿ.ಕೃಷ್ಣಪ್ಪ ಅವರು ದಲಿತರಲ್ಲಿ ಜಾಗೃತಿಯ ದೀಪ ಹಚ್ಚಿದರು : ನಾಗರಾಜ್

ಹರಿಹರ  (Harihara) : ರಾಜ್ಯದ ದಲಿತ ಸಮುದಾಯಗಳಲ್ಲಿ ಜಾಗೃತಿಯ ದೀಪ ಹಚ್ಚಿದ ಕೀರ್ತಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕ…

By Dinamaana Kannada News

LG Havanur | ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಎಲ್.ಜಿ.ಹಾವನೂರು

ಸಂವಿಧಾನದ 16 (4) ನೇ ವಿಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನಿಗದಿಪಡಿಸುವ ಅವಕಾಶವನ್ನು ಪ್ರಭುತ್ವಕ್ಕೆ ನೀಡಲಾಗಿದೆ.ಇದನ್ನು ಬಳಸಿಕೊಂಡು  ಮುಖ್ಯಮಂತ್ರಿ ದೇವರಾಜ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Davanagere
ತಾಜಾ ಸುದ್ದಿ

ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಎಸ್ಸೆಸ್ ಚಾಲನೆ

By Dinamaana Kannada News
Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?