Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು-26 ಸಾಲಿ ಬಿಟ್ಟ ಮಕ್ಕಳು….
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು-26 ಸಾಲಿ ಬಿಟ್ಟ ಮಕ್ಕಳು….

Dinamaana Kannada News
Last updated: May 17, 2024 4:52 am
Dinamaana Kannada News
Share
sanduru
ಸಂಡೂರಿನ ಕಥನಗಳು
SHARE

ಬಳ್ಳಾರಿ ಜಿಲ್ಲೆಯ ತಲಾ ವರಮಾನವು ರೂ.47607/ ಇದ್ದು,ಆಗ ಕರ್ನಾಟಕ ರಾಜ್ಯದ ತಲಾ ವರಮಾನವು ರೂಂ.41902/ ಆಗಿತ್ತು. ಅಂದರೆ ಬಳ್ಳಾರಿ ಜಿಲ್ಲೆ ವರಮಾನದ ದೃಷ್ಟಿಯಿಂದ ಶ್ರೀಮಂತವಾಗಿತ್ತು!

ಜಿಲ್ಲೆಯು ಇಂದಿಗೂ ಸಹ ಅತ್ಯಂತ ದುಸ್ಥಿತಿ

ಸಾಕ್ಷರತೆ ಪ್ರಮಾಣ, ಶಿಕ್ಷಣ, ಆರೋಗ್ಯ, ಆಹಾರ ಭದ್ರತೆಯಂತಹ ಮೂಲಭೂತ ಸಂಗತಿಗಳಲ್ಲಿ ಜಿಲ್ಲೆಯು ಇಂದಿಗೂ ಸಹ ಅತ್ಯಂತ ದುಸ್ಥಿತಿಯಲ್ಲಿದೆ. ಜಿಲ್ಲೆಯಲ್ಲಿನ ಜನಪ್ರತಿನಿಧಿಗಳು ಕಮ್ ಗಣಿಧಣಿಗಳ ಓಡಾಟಗಳಿಗೆ, ಐಲುಗಳಿಗೆ ವಿಮಾನ ನಿಲ್ದಾಣವೇ ಆದ್ಯತೆಯಾಗಿ ಬಿಡುತ್ತದೆ.

ತಮ್ಮದೇ ಊರಿನಲ್ಲಿ ಭಿಕ್ಷುಕ

ಒಂದೊತ್ತಿನ ಊಟಕ್ಕೂ ಗತಿಯಿಲ್ಲದೆ ನಿರ್ಗತಿಕರಾದ ಹಳ್ಳಿ ಮತ್ತು ನಗರದ ಜನರು ತಮ್ಮದೇ ಊರಿನಲ್ಲಿ ತಮ್ಮದೇ ಜಾಗಗಳಲ್ಲಿ ತಲೆ ಎತ್ತಿ ನಿಂತಿರುವ ರೆಸಾರ್ಟುಗಳು , ಹೋಟೆಲುಗಳು ಮುಂದೆ ಭಿಕ್ಷುಕರಾಗಿ ಓಡಾಡುವುದನ್ನು ಕಾಣಬಹುದು.

ಹೊಸಪೇಟೆ ಲೋಲುಪತನಕ್ಕೆ ಸಾಕ್ಷಿ

ಸೊಂಡೂರು ಗಣಿಗಾರಿಕೆಯ ಕರ್ಮಭೂಮಿಯಾದರೆ, ಪಕ್ಕದ ಹೊಸಪೇಟೆ ಎಂಬ ನಗರ ಲೋಲುಪತನಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಒಂದು ಪ್ರತಿಷ್ಟಿತ ಹೋಟೆಲೊಂದರ ಬೆಲೆ ದಿನದ ಕೇವಲ ಹನ್ನೆರೆಡು ತಾಸುಗಳ ವಾಸ್ತವ್ಯಕ್ಕೆ ರೂ.70000 ಗಳಿಂದ ಒಂದು ಲಕ್ಷದವರೆಗೂ ಇದೆ. ಅದ್ದೂರಿ ಮದುವೆಗಳನ್ನು ರೆಸಾರ್ಟುಗಳಲ್ಲಿ ನಡೆಸಲಾಗುತ್ತಿದೆ. ಬಡವ ಬಲ್ಲಿದರ ಅಂತರ ದಿನೇ ದಿನೇ ಹೆಚ್ಚುತ್ತಲೇ ಹೋಯಿತು.ಇಲ್ಲಿನ ಮೂಲನಿವಾಸಿಗಳೇ ಎಲ್ಲಿಂದಲೋ ಬಂದವರಂತೆ ಅಪರಿಚಿತರಾಗಿಬಿಟ್ಟಿದ್ದು ಚರಿತ್ರೆಯ ವ್ಯಂಗ್ಯವೂ ಹೌದು.

ಪುಟ್ಟಿ ಮೈನಿಂಗ್ ಕಲ್ಲಿಗೆ ಮುನ್ನೂರು ರೂಪಾಯಿ

ಶಾಲೆಗೆ ಹೋಗಬೇಕಾಗಿದ್ದ ಎಷ್ಟೊಂದು ಮಕ್ಕಳು ಮೈನಿಂಗ್ ಕೆಲಸಕ್ಕೆ ಹೋಗಿಬಿಟ್ಟರೆಂದರೆ ಊರಶಾಲೆಗಳೆಲ್ಲ ಬಿಕೋ ಎನ್ನತೊಡಗಿದವು.ಒಂದೋ ಎರಡೋ ಪುಟ್ಟಿ ಮೈನಿಂಗ್ ಕಲ್ಲು ಆರಿಸಿದರೆ ಇನ್ನೂರು ಮುನ್ನೂರು ರೂಪಾಯಿ ದೊರೆಯುವಾಗ ಮಕ್ಕಳು ಸಾಲಿಗೆ ಹೋಗುವುದನ್ನೆ ಬಿಟ್ಟುಬಿಟ್ಟರು.

ಕಡ್ಡಾಯ ಶಿಕ್ಷಣದ ಯೋಜನೆಗಳ ಸರ್ವೆಗಳೂ ಸಹ ಸುಳ್ಳು ವರದಿ

ಮಧ್ಯಾಹ್ನದ ಉರಿಬಿಸಿಲಲ್ಲಿ ಕಟ್ಟಿಕೊಂಡು ಬಂದ ಬಿಳಿ ಅನ್ನದಲ್ಲೂ ಕೆಂಪು ಮಣ್ಣು ಸೇರುತ್ತಿತ್ತು. ಹದಿನಾಲ್ಕು ವರುಷದವರೆಗಿನ ಕಡ್ಡಾಯ ಶಿಕ್ಷಣದ ಯೋಜನೆಗಳು ಸರ್ವೆ ಗಳೂ ಸಹ ಸುಳ್ಳು ವರದಿ ನೀಡಿದವು.   ಇಂತದ್ದೇ ದಾಳಿಗೆ ತುತ್ತಾದ ಹಳ್ಳಿಯೊಂದರ ಸಾಲಿಯ ಚಿತ್ರಣವಿದು.

ನಾಕೊಂದ್ಲ ನಾಕು ನಾಕೆರೆಡ್ಲ …..?  ಹೇಳಲಿಕ್ಕಾಗದೆ ಉತ್ತರ ಬರಲಿಯೆಂದು ಕಣ್ಣುಮುಚ್ಚಿ ಕಾಣದ ರಾಘವೇಂದ್ರಸ್ವಾಮಿ ಯನ್ನೋ, ಗಂಡಿ ನರಸಿಂಹನನ್ನೋ  ಧ್ಯಾನಿಸುತ್ತಿರುವಾಗ, ದೇವರು ವರ ಕೊಡದೆ ಲೆಕ್ಕದ ಮೇಷ್ಟರ ಬೆತ್ತದ ರುಚಿ ಮತ್ತು ಪಿ.ಯು.ಟಿ. (Put) ಪುಟ್ ಅಂತೇಳಿ ಸಿ.ಯು.ಟಿ.( cut)ಕುಟ್ ಎಂದು ಹೇಳಿದರೆಂದು ಎಲ್ಲರೂ ಎದುರೇ ಕ್ಲಾಸ್ ಲೀಡರ್ ಹನುಮಂತಮ್ಮ ಎಂಬ ಹುಡುಗಿಯ ಕೈಯಿಂದ ಮೂಗಿಡಿದು ಕಪಾಳಕ್ಕೆ ಬಾರಿಸಿಕೊಳ್ಳುವುದಕ್ಕಿಂತ ಸುಖಾಸುಮ್ಮನೆ ಆಡುತ್ತಾ ಕಲ್ಲು ಮಣ್ಣು ಆರಿಸಿ, ಪುಟ್ಟಿಗಟ್ಟಳೆ ತುಂಬಿ ತುಂಬಿ ಇಟ್ಟರೆ ಸಾಕಿತ್ತು ಎಂದು ಸಾಲಿ ಬಿಟ್ಟವರೆ ಬಹಳ.

ಹೀಗೆ ಅವ್ವಂದಿರ ಹಿಂದೆ ಹೋದರೆ ದಿನವೊಂದಕ್ಕೆ ಇನ್ನೂರೋ ಮುನ್ನೂರೋ ಕೊಡುತ್ತಿದ್ದರು. ಎಳೆ ಕೈಗಳಿಗೆಲ್ಲ ಕೆಂಪು ಕೆಂಪು ಮಣ್ಣು ಮೆತ್ತಿಕೊಳ್ಳುತ್ತಿತ್ತು ಉಸಿರಾಡೋ ಗಾಳಿ ಕೆಂಪು. ದುಡಿದು ತಂದ ನೋಟುಗಳ ಗಾಂಧೀ ತಾತನೂ ಕೆಂಪು. ಲಾರಿಗಳ ಢರ್ ಭರ್ ಸದ್ದು. ಟಿಪ್ಪರುಗಳ  ಸಹಿಸಲಸಾಧ್ಯ ಸದ್ದು….ಆಹಾ! ಎಂತಹ ದಿನಗಳು! ಆದರೆ… ಈಗ ಗಣಿ ಸದ್ದು ಅಡಗಿಹೋಗಿದೆ.

‘ಅಯ್ಯೋ ಸಿವನೆ, ಕೂಲಿ ನಾಲಿ ಕೆಲ್ಸದಾಗೆ ನನ್ ಕಂದನನ್ನು ನೋಡ್ಕಳಕೇ  ಆಗಲಿಲ್ಲ ‘ ಎಂದು ಮಗುವಿನೆಡೆಗೆ  ನೋಡುವ ತಾಯಿಯಂತೆ , ಎಲ್ಲರೂ ತಾವು ಕೂಡಿ ಆಡಿ ಬೆಳೆದ ಊರನ್ನು ಹೊಸದಾಗಿ ಎಂಬಂತೆ ನೋಡುತ್ತಿದ್ದಾರೆ.

ಊರಿಗೆ ಊರನ್ನೇ ಯಾರೋ ದೋಚಿದ್ದಾರೆ. ಹಚ್ಚಹಸಿರಿನ ಗಿಡ ಮರಗಳು ಬೆಟ್ಟದಾ ನೆರಳಲ್ಲಿರೋ ಶಾಲೆ… ಅನಾಥ ಮಗುವಿನಂತೆ ಕಾಣುತ್ತಿದೆ. ತನ್ನ ಮಾತಿಗೆ ಕೇರೇ ಮಾಡದ ಹಳ್ಳಿಯನ್ನು ಕಂಡು ದುಃಖಿತನಾಗಿ, ಕರಗಿ ಹೋದ ಬೆಟ್ಟಗಳನ್ನು ಅಜ್ಜನೊಬ್ಬ ನೋಡುತ್ತಾ ನಿಂತಿದ್ದಾನೆ.

ನಾಕೊಂದ್ಲ ನಾಕು ನಾಕೆರಡ್ಲ……….?

ಉತ್ತರ ಸಿಗದೆ ಲೆಕ್ಕದ ಏಟು ನೆನಪಾಗಿ, ಪಿಯುಟಿ ಪುಟ್ ಅಂತೇಳಿ ಸಿಯುಟಿ ಕುಟ್ ಅಂತೇಳಿ ಕಪಾಳಕ್ಕೆ ಬಾರಿಸಿಕೊಂಡು ಬಂದ ಶಾಲೆ ಒಂಟಿಯಾಗಿ ನಿಂತುಬಿಟ್ಟಿದೆ. ಎಲ್ಲೋ ಅಲ್ಲೊಂದು ಇಲ್ಲೊಂದು     ಟಿಪ್ಪರುಗಳಿನ್ನೂ ಓಡಾಡುತ್ತಿವೆ.

ಅಕ್ಷರಗಳನ್ನು,ಪುಟ್ಟಿಗಳಲ್ಲಿ ಲಾರಿಗಳಲ್ಲಿ ಹೊತ್ತೊಯ್ದವರ ನೆನಪಿಸಿಕೊಳ್ಳುತ್ತ ಆ ಸಾಲಿ ಬಿಟ್ಟ ಹುಡುಗ, ಇನ್ನೂ ಅಲ್ಲಿಯೇ ನಿಂತಿದ್ದಾನೆ. ಮಣ್ಣು ತುಂಬುವ ಬದಲು,ಅಕ್ಷರಗಳನ್ನಾದರೂ ಕಲಿತಿದ್ದರೆ…. ಈ ಪರಿಸ್ಥಿತಿ ಬರುತ್ತಿರಲಿಲ್ಲ….ನಾವು ಮೋಸ ಹೋದೆವೆಂದು ದೈನ್ಯದಿಂದ ನೋಡುತ್ತಾರೆ. ಆ ದೈನೇಸಿ  ನೋಟಗಳಿಗೆ ಉತ್ತರಿಸುವರಾರು?

           ಬಿ.ಶ್ರೀನಿವಾಸ

 

TAGGED:dinamaana.comLatest Kannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article davanagere ಮೇ 16 ರಂದು ರಾಷ್ಟ್ರೀಯ ಡೆಂಗ್ಯು ದಿನ
Next Article harihara ಪುನರ್ಬಲನ ತರಗತಿಗಳನ್ನು ಮೇ 15ರ ಬದಲು ಮೇ 29 ರಿಂದ ಆರಂಭಿಸುವಂತೆ ಒತ್ತಾಯ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

Davanagere | ನ.4-6 ಜನಜಾಗೃತಿ ಧರ್ಮ ಸಮ್ಮೇಳನ ಕಾರ್ಯಕ್ರಮ

ದಾವಣಗೆರೆ (Davanagere):  ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ 38ನೇ ವರ್ಷದ ಸ್ಮರಣೋತ್ಸವ ಮತ್ತು ಲಿಂ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ…

By Dinamaana Kannada News

ನೀರು ಸರಬರಾಜು ಕೇಂದ್ರಕ್ಕೆ ಡಿಸಿ ಭೇಟಿ, ಪರಿಶೀಲನೆ

ದಾವಣಗೆರೆ :  ದಾವಣಗೆರೆ -ಹರಿಹರ ಜನರಿಗೆ ನೀರು ಸರಬರಾಜರಾಗುವ ಹರಿಹರ ಸಮೀಪದ ಜಾಕ್‌ವೆಲ್‌ಗೆ ಬುಧವಾರ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ…

By Dinamaana Kannada News

Davanagere | ಕಂಪನಿ ನಾಟಕಗಳ ಕಲಾವಿದರಿಗೆ ಶಿಸ್ತಿನ ತರಬೇತಿ ಅಗತ್ಯವಿದೆ : ಪ್ರೊ.ಎಸ್.ಹಾಲಪ್ಪ

ದಾವಣಗೆರೆ (Davanagere): ವೃತ್ತಿರಂಗಭೂಮಿಯು ಪುನರುತ್ಥಾನಗೊಳ್ಳಬೇಕಿದೆ ಎಂದು ಪ್ರತಿಮಾ ಸಭಾದ ಗೌರವಾಧ್ಯಕ್ಷ ಪ್ರೊ.ಎಸ್.ಹಾಲಪ್ಪ ಸಲಹೆ ನೀಡಿದರು. ವೃತ್ತಿ ರಂಗಭೂಮಿ ರಂಗಾಯಣವು ರಾಷ್ಟ್ರೀಯ…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?