Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 36: ಕಾಲವೊಮ್ಮೆ ಹಿಂದಕ್ಕೆ ಹೋಗುವ ಹಾಗಿದ್ದರೆ….
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 36: ಕಾಲವೊಮ್ಮೆ ಹಿಂದಕ್ಕೆ ಹೋಗುವ ಹಾಗಿದ್ದರೆ….

Dinamaana Kannada News
Last updated: May 27, 2024 3:55 am
Dinamaana Kannada News
Share
Sanduru sotries
ಸಂಡೂರಿನ ಕಥನಗಳು
SHARE

Kannada News | Sanduru Stories | Dinamaana.com | 27-05-2024

ಮೌನ ಕೂಡ ಮಾತಾಡುತ್ತಿದೆ (Sanduru Stories)

ಸೊಂಡೂರು ಸುತ್ತಮುತ್ತಲಿನ ಹಳ್ಳಿಗಳ ಪಾಲಿಗೆ ಬದುಕು ಅದೆಷ್ಟು ಕ್ರೂರಿ ಎಂದರೆ… ಮೌನ ಕೂಡ ಮಾತಾಡುತ್ತಿದೆ ಕೊಲೆಗಡುಕರ ಹಾಗೆ!

ಅವ್ವನ ಪೀಡಿಸುವ ಮಕ್ಕಳ ಸದ್ದಿಲ್ಲ (Sanduru Stories)

ಗಣಿ ಉದ್ಯಮಿ ಸ್ಥಗಿತಗೊಂಡು ಎಷ್ಟೋ ವರ್ಷಗಳಾದರೂ ಹಲವಾರು ಪ್ರಶ್ನೆಗಳು ಅವರ ಮನಸ್ಸನ್ನು ಹೃದಯವನ್ನು ಕಾಡುತ್ತಲೇ ಇರುತ್ತವೆ. ಮೂರು ವರುಷಕ್ಕೊಮ್ಮೆ ಜರುಗುವ ಕುಮಾರಸ್ವಾಮಿ ಜಾತ್ರೆಯಲ್ಲಿ ಪೀಂಯ್ ..ಪೀಂಯ್ ಎನ್ನುವ ಪೀಪಿ ಕೊಡಿಸೆಂದು ಅವ್ವನ ಪೀಡಿಸುವ ಮಕ್ಕಳ ಸದ್ದಿಲ್ಲ.ಚಿಪ್ಪು,ಕಸಬರಿಗೆ ಕಟ್ಟಿಕೊಂಡು ಮೆರವಣಿಗೆ ಹೊಂಟ ಆಕಳು ಹಾಕಿದ ಗಂಜಲದ ನೆಲವೂ ಕಾಣಿಸುತ್ತಿಲ್ಲ.

ಜಾತ್ರೆಗೆಂದು ನಾಟಕದ ಮೇಷ್ಟ್ರು ಹೇಳಿಕೊಟ್ಟ ಡೈಲಾಗುಗಳು,ಹಾರ್ಮೋನಿಯಮ್ ಸವುಂಡು,ಮಾಸ್ತರರ ಗದರಿಕೆಯ ಸದ್ದೂ ಇಲ್ಲ. ಹಸಿರು ಬಳೆಗಳ ಮದುವಣಗಿತ್ತಿ ಮೊಟ್ಟಮೊದಲ ಬಾರಿಗೆ ಊರಿಗೆ ಬಂದಾಗಿನ ಕ್ಷಣಕ್ಕೆ ಕಣ್ಣು ತುಂಬಿಕೊಂಡು ನಿಂತ ಮರಗಿಡವೂ ಇಲ್ಲ.

ಬಣ್ಣ ಮಾಸಿದ ರಿಬ್ಬನ್ನು,ಸವೆದುಹೋದ  ಹೇರ್ ಪಿನ್ನು ನೋಡುತ್ತಾ ಜಾತ್ರೆಗಳ ನೆನಪಿನಲ್ಲಿ ನಿಂತ ಹುಡುಗಿ, ಗಿಜಿಗಿಡುತ್ತಿದ್ದ ಕೈಯಿಂದ ಕೈಯ್ಯಿಗೆ ವಿನಿಮಯಗೊಳ್ಳುತ್ತಿದ್ದ ನೂರು, ಐನೂರು, ಸಾವಿರದ ನೋಟಿನೊಳಗಿನ ನಗುವ ಗಾಂಧಿ, ಕೈಯೊಳಗಿನ ಸಿಗರೇಟು, ವಿದೇಶಿ ಮದ್ಯದ ಬಾಟಲಿಗಳು ಇತ್ಯಾದಿ…..ಒಂದೂ ಕಾಣಿಸುತ್ತಿಲ್ಲ.

ನಿಂತು ಹೋದ ಸಿನಿಮಾದ ಚಿತ್ರದಂತೆ ಸ್ತಬ್ದ (Sanduru Stories)

ಸೊಂಡೂರಿನ ಬೀದಿಯಲ್ಲೀಗ ಕರೆಂಟು ಹೋಯಿತೆಂದು ನಿಂತು ಹೋದ ಸಿನಿಮಾದ ಚಿತ್ರದಂತೆ ಸ್ತಬ್ದ.ಅದುವರೆಗೂ ಬಣ್ಣ ಬಣ್ಣದ ಚಿತ್ರಗಳ ತೋರಿಸಿ ಸಿನಿಮಾ ಮುಗಿದು ಹೋಯಿತೆಂದು ಪ್ರೊಜೆಕ್ಟರ್ ರೂಮಿನಿಂದ ಹೊರಬರುವ ಆತನ ಮ್ಲಾನವದನದಂತೆ ತೋರುತ್ತಿದೆ.

sanduru
sanduru

 

ಅಲ್ಲಲ್ಲಿ ಬುಲ್ಡೋಜರುಗಳುಂಟು ಮಾಡಿದ ರಣಗಾಯ.

ಒಸರುವ ಕೀವು

ಕೂಗಿದರೂ ಕೇಳಿಸದ ನೋವು.  

ಕ್ಷಮಿಸಿ ಸತ್ತ ಅಪ್ಪ ಅವ್ವನ.  

ಮಣ್ಣು ಮಾಡಿ, ಅಳುತ ಕುಂತ ಅನಾಥ ಹುಡುಗನ ಬೋಳುತಲೆ

ಪ್ರತಿಫಲಿಸುತಿದೆ ಪಳಪಳನೆ

ಊರಮಸಣಕೊಂದು ಭದ್ರಕೋಟೆ

ಮೇಲೆ ಹೆಸರು ಕೆತ್ತಿಸಿದ ಭೂಪರು

ಮಣ್ಣು ಕದ್ದ ಅವರು

ಸರಳು ಹಿಂದೆ ಸರಳ ನಿಂತರು

ಚಿಂದಿಯಾದ ನನ್ನ ಜನರು

ಅರ್ಧ ಮಸಣ ಸೇರಿ

ಇನ್ನರ್ಧ ಬದುಕನರಿಸಿ ಎಲ್ಲಿಗೋ ಹೋದರು.

         ಬಿ.ಶ್ರೀನಿವಾಸ

TAGGED:Davanagere Newsdinamaana.comKannada NewsSanduru sotriesಕನ್ನಡ ಸುದ್ದಿ ದಿನಮಾನ.ಕಾಂದಿನಮಾನ.ಕಾಂಸಂಡೂರಿನ ಕಥನಗಳು.
Share This Article
Twitter Email Copy Link Print
Previous Article Sanduru Stories Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 35: ಇಲ್ಲಿ ಹೆದರಿಸುವವರಾರೂ ಇಲ್ಲ !
Next Article harihara ಕೆಎಚ್‍ಬಿ ಕಾಲೊನಿಗೆ ಸೌಲಭ್ಯ ಕಲ್ಪಿಸಲು ನಿವಾಸಿಗಳ ಆಗ್ರಹ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಕಳೆದುಹೋದದ್ದು: ಪುಲ್ವಾಮಾ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ನಡೆದ ಘಟನೆ ಸುತ್ತ

ನಾನು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿದ್ದಾಗ ನಡೆದ ಘಟನೆಯಿದು. ಆಗ ದೇಶದ ತುಂಬಾ ದೇಶಪ್ರೇಮ ಉಕ್ಕಿ ಹರಿಯುತ್ತಿದ್ದ ಕಾಲ. ಪುಲ್ವಾಮಾ ದಾಳಿಯಲ್ಲಿ…

By Dinamaana Kannada News

Recruitment rally | ನೇಮಕಾತಿ ರ‍್ಯಾಲಿ

ದಾವಣಗೆರೆ ಜ.21 (Davanagere): ಭಾರತೀಯ ವಾಯುಪಡೆಯಲ್ಲಿನ ಏರ್‍ಮ್ಯಾನ್ ಗ್ರೂಪ್ ವೈ ತಾಂತ್ರಿಕವಲ್ಲದ ಹಾಗೂ ವೈದ್ಯಕೀಯ ಸಹಾಯಕ ವೃತ್ತಿಗೆ ನೇಮಕಾತಿ ರ‍್ಯಾಲಿಯನ್ನು…

By Dinamaana Kannada News

ಕಠಿಣ ಪರಿಶ್ರಮದಿಂದ ಜೀವನದಲ್ಲಿ ಸಾಧನೆ ಸಾಧ್ಯ : ವಿನಯ್‍ಕುಮಾರ್

ಹರಿಹರ (Harihara): ಸ್ಥಿರ ಮತ್ತು ಕಠಿಣ ಪರಿಶ್ರಮದ ವ್ಯಕ್ತಿತ್ವ ರೂಢಿಸಿಕೊಳ್ಳುವ ವಿದ್ಯಾರ್ಥಿಗಳು ಬದುಕಿನಲ್ಲಿ ಉನ್ನತ ಸಾಧನೆ ಸಾಧಿಸಲು ಸಾಧ್ಯ ಎಂದು…

By Dinamaana Kannada News

You Might Also Like

MP visits STPI Bengaluru
ತಾಜಾ ಸುದ್ದಿ

ದಾವಣಗೆರೆ | ಸಂಸದರಿಂದ ಎಸ್‌ಟಿಪಿಐ ಬೆಂಗಳೂರು ಭೇಟಿ : ಐಟಿವಲಯಕ್ಕೆ ಹೊಸ ಉತ್ತೇಜನ

By Dinamaana Kannada News
ದಾವಣಗೆರೆ
ತಾಜಾ ಸುದ್ದಿ

ದಾವಣಗೆರೆ | ಆತ್ಮಹತ್ಯೆಗೆ ಯತ್ನ : ತಾಯಿ ಮತ್ತು  ಮಗು ರಕ್ಷಿಸಿದ 112 ಹೊಯ್ಸಳ ಸಿಬ್ಬಂದಿ

By Dinamaana Kannada News
District Jawahar Bal Manch
ತಾಜಾ ಸುದ್ದಿ

ದಾವಣಗೆರೆ | ಮಾದಕ ವಸ್ತುಗಳಿಂದ ಭವಿಷ್ಯ ಸರ್ವನಾಶ : ದಿನೇಶ್ ಕೆ. ಶೆಟ್ಟಿ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ಮಾನವ ಅಭಿವೃದ್ದಿ ವರದಿ ತಯಾರಿಕೆಗೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?