Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davangere Viraktamatha |ಇಷ್ಟಲಿಂಗ ಪೂಜೆಯಿಂದ ಮನೋವಿಕಾರ ದೂರ : ಬಸವಪ್ರಭು ಸ್ವಾಮೀಜಿ
ತಾಜಾ ಸುದ್ದಿ

Davangere Viraktamatha |ಇಷ್ಟಲಿಂಗ ಪೂಜೆಯಿಂದ ಮನೋವಿಕಾರ ದೂರ : ಬಸವಪ್ರಭು ಸ್ವಾಮೀಜಿ

Dinamaana Kannada News
Last updated: September 1, 2024 8:02 am
Dinamaana Kannada News
Share
Davangere
Davangere Viraktamatha
SHARE

ದಾವಣಗೆರೆ (Davangere) : ಮಾನವನ ಅಂತರಂಗದಲ್ಲಿಯೇ  ದೇವರು ಇದ್ದಾನೆ. ನಮ್ಮೊಳಗಿರುವ ದೇವರನ್ನು ವಿಶ್ವಗುರು ಬಸವಣ್ಣನವರು  ಇಷ್ಟಲಿಂಗದ  ಮೂಲಕ ನೀಡಿದ್ದಾರೆ ಎಂದು ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ದಾವಣಗೆರೆಯ ವಿರಕ್ತಮಠ (Viraktamatha) ದಲ್ಲಿ  ನಡೆದ ಸಾಮೂಹಿಕ ಇಷ್ಟಲಿಂಗ ಪೂಜಾ ಮತ್ತು ಇಷ್ಟಲಿಂಗ ದೀಕ್ಷಾ ಸಮಾರಂಭದ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು

ಇಷ್ಟಲಿಂಗವನ್ನು ನಾವು ಧರಿಸಿ ಪ್ರತಿದಿನವೂ ಶಿವಯೋಗವನ್ನು ಮಾಡುತ್ತಾ ಬಂದಾಗ  ಮೊದಲು ನಮ್ಮ ತನುವನ್ನು  ಶುದ್ಧೀಕರಣ ಮಾಡುತ್ತದೆ. ಈ ಶರೀರದೊಳಗಿರುವ ದುಶ್ಚಟ , ದುರ್ಗುಣಗಳನ್ನು ತೊಡೆದುಹಾಕುತ್ತದೆ.  ಮನಸ್ಸಿನಲ್ಲಿರುವ ವಿಕಾರಗಳನ್ನು ಕಿತ್ತುಹಾಕುತ್ತದೆ. ಭಾವದೊಳಗಿರುವ ಅರಿಷಡ್ವರ್ಗಗಳನ್ನು ಸುಟ್ಟುಹಾಕುತ್ತದೆ . ತನು ಮನ ಭಾವಗಳಲ್ಲಿರುವ ವಿಷಯ ವಾಸನೆಗಳು ನಿವಾರಣೆಯಾಗಿ ಭಕ್ತನ ಶರೀರವು ಬಸವಣ್ಣನವರು ಹೇಳಿದಂತೆ ದೇಹವು ದೇಗುಲವಾಗುತ್ತದೆ ಎಂದರು.

Read also : Davanagere Municipal Corporation| ಅರ್ಬನ್ ಲರ್ನಿಂಗ್ ಇಂಟರ್ ಶಿಪ್ ಪ್ರೋಗ್ರಾಂಗೆ ಅರ್ಜಿ ಆಹ್ವಾನ

ವಿಶೇಷ ತತ್ವಗಳನ್ನು ಬಸವಣ್ಣನವರು ಲಿಂಗಾಯತ ಧರ್ಮದಲ್ಲಿ ನೀಡಿದ್ದಾರೆ . ಈಗ ಎಲ್ಲರ ಬಳಿಯೂ ಮೊಬೈಲ್‌ ಫೋನ್ ಇದೆ . ಇದು ಜನ ಸಂಪರ್ಕ ಮಾಡಲು ಸುಲಭವಾಗಿದೆ.  ಹಾಗೆಯೇ ದೇವರನ್ನು ಸಂಪರ್ಕ ಮಾಡಲು ಬಸವಣ್ಣನವರು ಈ ಇಷ್ಟಲಿಂಗವೆಂಬ ಮೊಬೈಲ್ ನೀಡಿದ್ದಾರೆ . ಇದನ್ನು ಪೂಜಿಸುತ್ತಾ ಎಷ್ಟು ಬೇಕಾದರೂ ನಾವು ದೇವರೊಂದಿಗೆ ಮಾತನಾಡುವ ಅವಕಾಶವನ್ನು ನೀಡಿದ್ದಾರೆ . ಮೊಬೈಲ್‌ ನ್ನು ಪ್ರತಿದಿನವೂ ಚಾರ್ಜ್ ಮಾಡುವಂತೆ ಅದೇ ರೀತಿ ಮನಸ್ಸನ್ನು ಇಷ್ಟಲಿಂಗ ಧ್ಯಾನದ ಮೂಲಕ ಚಾರ್ಜ್ ಮಾಡಿದರೆ ನಮ್ಮ ಮನಸ್ಸಿನಲ್ಲಿ ಯಾವುದೇ ಮನೋವಿಕಾರಗಳು , ದ್ವೇಷ ಭಾವನೆಗಳು ಬರುವುದಿಲ್ಲ ಹಾಗಾಗಿ ಪ್ರತಿದಿನವೂ ನಾವು ಶಿವಯೋಗ ಮಾಡಬೇಕು ಎಂದು ಹೇಳಿದರು.

ಮೈಸೂರಿನ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ , ವಿರಕ್ತಮಠದ ಕಮಿಟಿಯವರಾದ ಹಾಭಾವಿ ಕರಿಬಸಪ್ಪ , ಕಣಕುಪ್ಪಿ ಮುರುಗೇಶಪ್ಪ , ಲಂಬಿ ಮುರುಗೇಶಪ್ಪ , ಟಿ.ಎಂ.ವೀರೇಂದ್ರ , ಎಸ್.ಜಿ.ಸಂಗಪ್ಪ , ಮಹದೇವಮ್ಮ  ಇತರರು ಇದ್ದರು

TAGGED:Davangere District.dinamaana.comLatest Kannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article DAVANAGERE Davanagere Municipal Corporation| ಅರ್ಬನ್ ಲರ್ನಿಂಗ್ ಇಂಟರ್ ಶಿಪ್ ಪ್ರೋಗ್ರಾಂಗೆ ಅರ್ಜಿ ಆಹ್ವಾನ
Next Article Davangere Davanagere news | ಪಾದಯಾತ್ರೆ ಕೂಡಾ ಯೋಗದ ಒಂದು ಭಾಗ: ಬಸವಪ್ರಭು ಶ್ರೀ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

New serial | ಡಿ. 23 ರಿಂದ ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ‘ನೂರು ಜನ್ಮಕೂ’ಆರಂಭ

ದಾವಣಗೆರೆ  (Davanagere):  ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಹೊಸ ದೈನಿಕ ಧಾರಾವಾಹಿ ಆರಂಭಿಸುತ್ತಿದೆ. ಡಿ. 23ರಿಂದ ಪ್ರತಿ ರಾತ್ರಿ 8:30ಕ್ಕೆ…

By Dinamaana Kannada News

ಅಸ್ತವ್ಯಸ್ತಗೊಂಡ ಭಾರತದ ಸಾಂಸ್ಕೃತಿಕ ರಾಯಭಾರಿ ಮೀರ್ ಮುಕ್ತಿಯಾರ್ ಅಲಿ

ಹದಿನಾಲ್ಕು ದೇಶಗಳಲ್ಲಿ ಭಾರತದ ಕಬೀರನನ್ನ, ಮೀರಾಳನ್ನು, ತುಳಸೀದಾಸ, ಪರಮಾನಂದರನ್ನು ತನ್ನ ಹಾಡಿನಿಂದ ಪರಿಚಯಿಸಿದ, ಸಮ್ಮೋಹಕಗೊಳಿಸಿದ ವಿಶಿಷ್ಟ ಹಾಡುಗಾರ ಮೀರ್ ಮುಕ್ತಿಯಾರ್…

By Dinamaana Kannada News

Davanagere | ಕರ್ತವ್ಯ ಲೋಪ : ಮೂವರು ಪೊಲೀಸರ ಅಮಾನತು

ದಾವಣಗೆರೆ (Davanagere): ನಗರದ ಬಂಗಾರದ ಅಂಗಡಿಯಲ್ಲಿ ನಡೆದಿದ್ದ 18 ಲಕ್ಷ ಮೌಲ್ಯದ ಬೆಳ್ಳಿ ಬಂಗಾರ ಕಳ್ಳತನ ಪ್ರಕರಣದಲ್ಲಿ ಕರ್ತವ್ಯ ಲೋಪ…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?