Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸಾಮಾಜಿಕ ನ್ಯಾಯದ ಸಾಕ್ಷಿ ಪ್ರಜ್ಞೆ ಎಲ್.ಜಿ.ಹಾವನೂರು
Blog

ಸಾಮಾಜಿಕ ನ್ಯಾಯದ ಸಾಕ್ಷಿ ಪ್ರಜ್ಞೆ ಎಲ್.ಜಿ.ಹಾವನೂರು

Dinamaana Kannada News
Last updated: September 22, 2024 5:03 am
Dinamaana Kannada News
Share
Davanagere
ಎಲ್.ಜಿ.ಹಾವನೂರು
SHARE

Kannada News |  Dinamaana.com | 22-09-2024

ಉಳಿದ ಮಾತು ……(LG Havanur)

ಭಾರತೀಯ ಅಧಿಕಾರಶಾಹಿಯು ಮೇಲ್ಜಾತಿಗಳ ಹಿಡಿತದಲ್ಲಿ ದೃಢವಾಗಿದೆ, ಅಷ್ಟೇ ಅಲ್ಲದೆ, ಮೇಲ್ಜಾತಿಗಳು ಮತ್ತು ಕೆಳಜಾತಿಗಳ ನಡುವಿನ ಅಂತರವೂ ದಿನೇ ದಿನೇ ವಿಸ್ತಾರಗೊಳ್ಳುತ್ತಿದೆ. ಹಿಂದುಳಿದ ಜಾತಿಗಳ ಮೀಸಲಾತಿ ಜಾರಿ ಕೂಡ ನಲವತ್ತು ವರುಷಗಳ ಕಾಲ ವಿಳಂಬವಾಯಿತು. ಈಗ ಕಾಲ ಬದಲಾಗಿದೆ. ಅಸ್ಪೃಶ್ಯರು, ಹಿಂದುಳಿದವರು, ಅಲ್ಪಸಂಖ್ಯಾತರು ಮುಂತಾದ ಕಾಯಕ ಜೀವಿಗಳ ಬದುಕು ಅಸಹನೀಯವಾಗುವತ್ತ ಸಾಗುತ್ತಿದೆ. ಇದು ಭಾರತದ ವೈಫಲ್ಯ.

ಹೀಗೆ ದೇಶದ ಮುಕ್ಕಾಲು ಭಾಗಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಸಮುದಾಯಗಳು ಅಲ್ಪಮಟ್ಟಿಗಾದರೂ ತಮ್ಮ ಬದುಕನ್ನು ಘನತೆಯಿಂದ, ಗೌರವಗಳಿಂದ, ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲು ಕಾರಣವಾದವರು ಎಲ್.ಜಿ.ಹಾವನೂರು ಎಂಬ ಒಬ್ಬ ಸಾಮಾನ್ಯ ಗ್ರಾಮೀಣ ಪ್ರತಿಭೆ.

ಹಾವನೂರು ವರದಿ ಸಾಮಾಜಿಕ ನ್ಯಾಯದ ಕನ್ನಡಿ..(LG Havanur)

ಇಡೀ ದೇಶಕ್ಕೇ ಮಾದರಿಯಾದಂತಹ ಹಿಂದುಳಿದ ವರ್ಗಗಳ ಬೈಬಲ್ ಎಂದೇ ಪ್ರಖ್ಯಾತಿ ಪಡೆದ ಹಾವನೂರು ವರದಿಯು ತನ್ನ ತಲಸ್ಪರ್ಶಿ, ವೈಜ್ಞಾನಿಕವಾದ ಅಧ್ಯಯನಗಳಿಂದ ಸಾಮಾಜಿಕ ನ್ಯಾಯದ ಕನ್ನಡಿಯಂತಿದೆ.

ಸಂವಿಧಾನದ ಶ್ರಮವನ್ನು ನೆನಪಿಸುವ ರೀತಿಯಲ್ಲಿ  ಬದುಕಿದರು..(LG Havanur)

“ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವಂತಹ ಅವಕಾಶ ಸಂವಿಧಾನದಲ್ಲಿ ಇಲ್ಲ.ಒಂದು ವೇಳೆ, ಈ ವ್ಯವಸ್ಥೆಯನ್ನೇನಾದರೂ ನಿರ್ಮೂಲನೆ ಮಾಡಿದ್ದಿದ್ದರೆ ನಮ್ಮ ಸಂವಿಧಾನದ ಪರಿವಿಡಿ ಹಾಗೂ ಇತರೆ ಕಾನೂನುಗಳು ಈಗ ಇರುವುದಕ್ಕಿಂತ ಅರ್ಧದಷ್ಟು ಕಡಿಮೆಯಾಗಿರುತ್ತಿತ್ತು.”ಹೀಗೆ ಬಾಬಾಸಾಹೇಬ ಅಂಬೇಡ್ಕರ್ ರ ಸಂವಿಧಾನದ ಶ್ರಮವನ್ನು ನೆನಪಿಸುವ ರೀತಿಯಲ್ಲಿ ಲಕ್ಷ್ಮಣ ಗೂಳಪ್ಪ ಹಾವನೂರು ಬದುಕಿದರು.

ಇಂದಿನ ಭಾರತ, ತನ್ನ ಗರ್ಭದಲ್ಲಿರಿಸಿಕೊಂಡಿರುವ ಜಾತಿ ತಾರತಮ್ಯಗಳನ್ನು ಕೊನೆಗೊಳಿಸಲು ತೀವ್ರವಾಗಿ ಶ್ರಮಿಸುತ್ತಿದೆ ಎಂಬಂತಹ ವಾತಾವರಣ ದೇಶದ ಯಾವ ಮೂಲೆಯಲ್ಲೂ ಕಂಡುಬರುತ್ತಿಲ್ಲ.ಜಾತಿರಹಿತ ಸಮಾಜ ಕಟ್ಟುವ ಈ ವಿಷಯದಲ್ಲಂತೂ ಇನ್ನೂ ಆರಂಭವೇ ಆಗಿಲ್ಲ ಎನ್ನುವಷ್ಟರ ಮಟ್ಟಿಗೆ ಇದೆ.  ಸುಮಾರು 250  ಮಿಲಿಯನ್ನಿಗೂ ಹೆಚ್ಚಿರುವ ಅಸ್ಪೃಶ್ಯ ಜನರು, ಅಸ್ಪೃಶ್ಯತೆಯ ಬೇಗೆಯಲ್ಲಿ ಬೇಯುತ್ತಿದ್ದಾರೆ.

ಭಾರತದ ಸಂವಿಧಾನ ಕೂಡ ಅಪಾಯದಲ್ಲಿ …

ಜಾಗತೀಕರಣ,ಉದಾರೀಕರಣ ಮತ್ತೆ ಈಗಿನ ಕೋಮುವಾದೀಕರಣಗಳ ಬಿರುಗಾಳಿಯ ದಾಳಿಗಳಿಗೆ ಸಿಕ್ಕು,ಅತ್ತ, ಕೈಯ್ಯಲ್ಲಿ ಕಸುಬೂ ಇಲ್ಲದೆ,ವಿಶಾಲ ಭಾರತದಲ್ಲಿ ಜಾಗವೂ ಇಲ್ಲದೆ ಅಭದ್ರತೆಯ ಭಾವದಲ್ಲಿ ಬದುಕುತ್ತಿರುವ ,ಅಂಚಿನ ಸಮುದಾಯಗಳು,ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಏಕೈಕ  ರಕ್ಷಕನಂತಿರುವ ಭಾರತದ ಸಂವಿಧಾನ ಕೂಡ ಅಪಾಯದಲ್ಲಿ ಇರುವಂತೆ ತೋರುತ್ತಿದೆ.

Read also  : ದಿನಮಾನ ಹೆಮ್ಮೆ : ನೆಲದ ಮೈಯ್ಯಿಗೆ ದುಡಿವ ಹೆಜ್ಜೆಗಳ ಕಾವ್ಯ ಬರೆವ -ಪಿ.ಆರ್.ವೆಂಕಟೇಶ್

ಇಂಥಾ ಹೊತ್ತಿನಲ್ಲಿ ಮತ್ತೆ ಮತ್ತೆ ಹಾವನೂರು ನೆನಪಾಗುತ್ತಾರೆ. ಇಂತಹ ಒಬ್ಬ ವ್ಯಕ್ತಿ ಕರ್ನಾಟಕದಲ್ಲಿ ಜೀವಿಸಿದ್ದರು ಎಂಬುದು ಕೂಡ ಇಂದಿನ ಯುವ ತಲೆಮಾರಿಗೆ ತಿಳಿದಂತೆ ಕಾಣಿಸುತ್ತಿಲ್ಲ.ಆದುದರಿಂದ ವಿದ್ಯಾರ್ಥಿಗಳನ್ನು, ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಿರು ಪುಸ್ತಕವನ್ನು ರಚಿಸಲಾಗಿದೆ.  ಇಲ್ಲಿರುವ ಹಾವನೂರು ಕುರಿತ ಮಾಹಿತಿಗಳು ಆರೋಗ್ಯವಂತ ಸಮ ಸಮಾಜ ನಿರ್ಮಾಣ ಕಾರ್ಯಕ್ಕೆ ಕೇವಲ ಪ್ರವೇಶಿಕೆ ಮಾತ್ರವೇ ಆಗಿವೆ ಎಂಬುದನ್ನು ಮರೆಯುವಂತಿಲ್ಲ.        

ಬಿ.ಶ್ರೀನಿವಾಸ

TAGGED:dinamaana.comLatest Kannada NewsLG Havanurಎಲ್.ಜಿ.ಹಾವನೂರುಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article davanagere Davanagere | ಎಸ್ ಎಸ್ ಎಂ ಜನ್ಮದಿನ ; ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಚಾಲನೆ
Next Article DAVANAGERE Davanagere | ಲಕ್ಷ್ಮಣ್  ಬಿ. ಹೆಚ್. ಅವರಿಗೆ ಡಾಕ್ಟರೇಟ್ ಪದವಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

davanagere : ಜಿಲ್ಲಾ ಮಲ್ಟಿ ಪರ್ಪಸ್ ಅಸೋಸಿಯೇಷನ್ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

ಹರಿಹರ (davanagere)  : ನಗರದ ಸಿಎಂಸಿ ಕಾಂಪ್ಲೆಕ್ಸ್ ನಲ್ಲಿ ದಾವಣಗೆರೆ ಜಿಲ್ಲಾ ಮಲ್ಟಿ ಪರ್ಪಸ್ ಅಸೋಸಿಯೇಷನ್ ಸಂಘದ ವತಿಯಿಂದ 78ನೇ…

By Dinamaana Kannada News

Davanagere | ಅಕ್ರಮ ಗಾಂಜಾ ಗಿಡ ಬೆಳೆದ ಆರೋಪಿಗೆ ಕಾರಾಗೃಹ ಶಿಕ್ಷೆ

ದಾವಣಗೆರೆ  (Davanagere): ಅಕ್ರಮ ಗಾಂಜಾ ಗಿಡ ಬೆಳೆದ ಆರೋಪಿಗೆ  04 ತಿಂಗಳು 13 ದಿನ ಸಾದಾ ಕಾರಾಗೃಹ ಶಿಕ್ಷೆ ಹಾಗೂ…

By Dinamaana Kannada News

Davanagere | ಹಿರಿಯ ನಾಗರಿಕರ ಬಗ್ಗೆ ನಿರ್ಲಕ್ಷ್ಯ ಬೇಡ : ಕೆ.ಎಸ್.ಬಸವಂತಪ್ಪ

ದಾವಣಗೆರೆ: ಆ.01 (Davanagere)  : ಪ್ರಸ್ತುತ ದಿನಗಳಲ್ಲಿ ವಿದ್ಯಾವಂತರಿಂದಲೇ ಹಿರಿಯ ನಾಗರಿಕರು ಹೆಚ್ಚಿನ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದರಿಂದ ಅವರಿಗೆ ಆರ್ಥಿಕ ಭದ್ರತೆ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ ವಿಶ್ವವಿದ್ಯಾನಿಲಯ – ಎಂಎಸ್‌ಸಿ ವಿದ್ಯಾರ್ಥಿಗಳ ಪರೀಕ್ಷೆ ಮುಂದೂಡಿಕೆ

By Dinamaana Kannada News
MP Dr. Prabha
ತಾಜಾ ಸುದ್ದಿ

ಇಸ್ರೋ ತರಬೇತಿ ಕಾರ್ಯಕ್ರಮಗಳ ವಿವರ: ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ಸಂಸದೆ ಡಾ.ಪ್ರಭಾ

By Dinamaana Kannada News
National Karate Championship
Blog

ಕ್ರೀಡಾ ಮನೋಭಾವದಿಂದ  ಪಂದ್ಯಗಳಲ್ಲಿ ಪಾಲ್ಗೊಳ್ಳಿ : ಸೇವಾಲಾಲ್ ಶ್ರೀ

By Dinamaana Kannada News
Dvg vv
ತಾಜಾ ಸುದ್ದಿ

ದಾವಣಗೆರೆ|ಪ್ರಾಮಾಣಿಕ ಸೇವೆಯಿಂದ ಯಶಸ್ಸು: ಪ್ರೊ.ಸುಚಿತ್ರಾ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?