Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > LG Havanur | ಹಾವನೂರು-ಚಿಂತನಾಕ್ರಮ ಯಾಕೆ ಬೇಕು?  
Blog

LG Havanur | ಹಾವನೂರು-ಚಿಂತನಾಕ್ರಮ ಯಾಕೆ ಬೇಕು?  

Dinamaana Kannada News
Last updated: September 24, 2024 3:31 am
Dinamaana Kannada News
Share
Davanagere
ಎಲ್.ಜಿ.ಹಾವನೂರು
SHARE

Kannada News | Dinamaana.com | 24-08-2024

ಧರ್ಮಾಧಾರಿತ ರಾಜಕಾರಣದ ಒಳಸುಳಿಗಳಿಗೆ ಸಿಕ್ಕ ಭಾರತೀಯ ರಾಜಕಾರಣಕ್ಕೀಗ ಸಂಕಷ್ಟದ ಕಾಲ.ಗಾಂಧಿ,ಅಂಬೇಡ್ಕರ್,ಮಾರ್ಕ್ಸ್ ಮತ್ತು ಲೋಹಿಯಾರಂಥವರ ನೆನಪುಗಳೂ  ಇಲ್ಲದ ಅಪಾಯಕಾರಿ ರಾಜಕಾರಣದತ್ತ  ಇಂದು ಭಾರತ ಸಾಗುತ್ತಿದೆ.  ಎಲ್ಲೋ ಅಲ್ಲೊಂದು ಇಲ್ಲೊಂದು ಗಾಂಧಿವಾಧಿ, ಲೋಹಿಯಾ ವಾದಿ,ಅಂಬೇಡ್ಕರ್ ವಾದಿಗಳ, ಮಾರ್ಕ್ಸ್ ವಾದಿಗಳ  ಕ್ಷೀಣ ದನಿಗಳು ಕೇಳಿಸುತ್ತಿವೆಯಾದರೂ, ವಿರಳ ಸಂಖ್ಯೆಯ  ಪ್ರಾಮಾಣಿಕ ರಾಜಕಾರಣಿಗಳು ವಿನಾಶದ ಅಂಚಿನಲ್ಲಿರುವಂತೆ ಕಾಣಿಸುತ್ತಿದ್ದಾರೆ.

ನಮ್ಮ ರಾಜ್ಯಕ್ಕಷ್ಟೇ ಅಲ್ಲ,ಇಡೀ ಭಾರತ ದೇಶಕ್ಕೆ ‘ಸಾಮಾಜಿಕ ನ್ಯಾಯ’ದ ಪರಿಕಲ್ಪನೆಗೆ ಹೊಸ ಭಾಷ್ಯ ಬರೆದವರು- ಲಕ್ಷ್ಮಣ ಜಿ.ಹಾವನೂರು.ಕರ್ನಾಟಕದ ಹಿಂದುಳಿದ ವರ್ಗಗಳ ಕುರಿತಾದ ವೈಜ್ಞಾನಿಕ ವರದಿಯಿಂದ ಭಾರತದ ಕೋಟ್ಯಂತರ ಜನರ ಅಸ್ತಿತ್ವಗಳಿಗೆ ಐಡೆಂಟಿಟಿಯನ್ನು ನೀಡಿದಂತಾಯಿತು.ಶೇ ೬೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳ ಬೈಬಲ್ ಎನ್ನಿಸಿಕೊಂಡಿರುವ ಮಂಡಲ್ ವರದಿಗೆ ಮೂಲ ಪ್ರೇರಣೆಯಾಗಿದ್ದು,ಇದೇ ಎಲ್.ಜಿ.ಹಾವನೂರು ವರದಿ.

ಕಾಲ ಬದಲಾಗಿದೆ. ಜನರೂ ಸಹ ವಿಷಯಗಳನ್ನು ಸ್ವೀಕರಿಸುವ ವೇಗವೂ ಸಹ ಬದಲಾಗಿದೆ.ಇಂತಹ ವೇಗದ ಬದುಕಿನಲ್ಲಿ ಸೋಷಿಯಲ್ ಮೀಡಿಯಾ,ಟಿ.ವಿ.ಚಾನೆಲ್ ಗಳ ಗದ್ದಲದಂತಿರುವ ವಿಶ್ಲೇಷಣೆಗಳು ಮತ್ತಿತರ ಮೀಡಿಯಾಗಳಿಂದಾಗಿ ಜನರ ಶ್ರಮದ ಬೆವರಿಗೆ ಸರಿಯಾದ ಬೆಲೆ ನಿರ್ಧಾರವಾಗುತ್ತಿಲ್ಲ.ಸತ್ಯ-ವಾಸ್ತವಾಂಶಗಳನ್ನು ದೂರವಿರಿಸಿ ಇದು ವಿವರಗಳು ಸೃಷ್ಟಿಸುವ ಮೀಡಿಯಾ ಭಾರತದ ಅವಾಂತರಗಳ ನಡುವೆ, ಅರಸು-ಹಾವನೂರು ವಿಷಯಗಳು ಸುಳಿಯುವುದೇ ಇಲ್ಲ.

ಭಾರತದ ರಾಜಕಾರಣ ಆರೋಗ್ಯಪೂರ್ಣವಾಗಿರಬೇಕಾದರೆ,ದೇಶದ ನ್ಯಾಯಾಂಗ ಮತ್ತು ಮಾಧ್ಯಮಗಳ ಕೈ-ಬಾಯಿಗಳು ಶುದ್ಧವಾಗಿರಬೇಕು.ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸೈದ್ಧಾಂತಿಕ ಬಂಡಾಯದ ಬಾವುಟಗಳು,ಹೋರಾಟದ ಧ್ವಜಗಳು ಹಾಜರಾಗಬೇಕಿತ್ತು. ಆದರೆ,  ಸದ್ಯದ ಭಾರತದ ತುಂಬೆಲ್ಲ ಧರ್ಮದ ಬಾವುಟಗಳು ರಾರಾಜಿಸುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ರಾಜಕೀಯ ಎಂಬುದು ಕಡು ಕಷ್ಟದ, ತನು, ಮನ , ಧನ  ತ್ಯಾಗದ ಕ್ರಿಯೆಯಾಗಬೇಕಿತ್ತು. ಜನತೆಯ ಪ್ರೀತಿ,ಉತ್ಸಾಹ,ಉಕ್ಕಿಸುವ ಸೇವಾ ಮನೋಭಾವದ ಕ್ರಿಯೆಯಾಗಬೇಕಿತ್ತು. ಇದೆಲ್ಲ ಸಾಕಾರಗೊಳ್ಳಲು ಕನಿಷ್ಟ ನಮ್ಮ ಪೂರ್ವಸೂರಿಗಳ ಆಡಳಿತವನ್ನಾದರೂ ಮೆಲುಕು ಹಾಕುವ ಅವಶ್ಯಕತೆಯಿದೆ.“ಅರಸು-ಹಾವನೂರು”ಜೋಡಿಯ ಆಡಳಿತ ರಾಜಕಾರಣದ ‘ಗೋಲ್ಡನ್ ಪಿರಿಯಡ್’ನ್ನು ಅಲ್ಪಮಟ್ಟಿಗಾದರೂ ತಿಳಿಯಬೇಕಿದೆ.

ಇವತ್ತಿನ ಯುವ ತಲೆಮಾರಿನ ಮತದಾರರಿಗೆ ಗಾಂಧಿ,ಅಂಬೇಡ್ಕರ್,ಜೇಪಿ,ಲೋಹಿಯಾ ಗುರುತೇ ಇಲ್ಲವೇನೋ ಎಂಬಂತೆ,ಅವರ ಎದೆಗಳ ತುಂಬಾ ಹುಸಿ ರಾಷ್ಟ್ರೀಯತೆ,ಹಿಂದುತ್ವ ಮುಂತಾದುವುಗಳು ಮುನ್ನೆಲೆಗೆ ಬಂದಿರುವುದು ಅಪಾಯದ ಮುನ್ಸೂಚನೆ ಎಂದೇ ಭಾವಿಸಬೇಕಿದೆ.

ದೇವರಾಜ ಅರಸು ಕುರಿತಂತೆ ಈಗಾಗಲೇ ಹಲವಾರು ಪುಸ್ತಕಗಳು ಇವೆ.ಆದರೆ ಹಿಂದುಳಿದ ವರ್ಗಗಳಿಗೆ ಐಡೆಂಟಿಟಿಯನ್ನು ತಂದುಕೊಟ್ಟ ಲಕ್ಷ್ಮಣ ಗೂಳಪ್ಪ ಹಾವನೂರು ಎಂಬ ಗ್ರಾಮೀಣ ಪ್ರತಿಭೆಯ ಕುರಿತು ಪುಸ್ತಕಗಳು ಇಲ್ಲವೇ ಇಲ್ಲ ಎನ್ನಬಹುದು.

ಜನರ ಓಲೈಕೆಗಳನ್ನೇ ಮಾನದಂಡ ವಾಗಿಸಿದ ಪ್ರಭುತ್ವದಿಂದ ಪ್ರಜೆಗಳು ಹೆಚ್ಚಿನದೇನನ್ನು ತಾನೆ ನಿರೀಕ್ಷಿಸಲು ಸಾಧ್ಯ? ಆದರೆ ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯ ಆ ಕಾಲಘಟ್ಟದಲ್ಲಿ ಅವರ ಜೊತೆ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎಲ್.ಜಿ.ಹಾವನೂರರ ಶ್ರಮ ಅಪಾರವಾಗಿತ್ತು. ಪಕ್ಷ ರಾಜಕಾರಣ, ಧರ್ಮ ರಾಜಕಾರಣಕ್ಕಸ್ಟೇ  ಸೀಮಿತವಾಗಿರುವಂತೆ ತೋರುವ ಈ ಹೊತ್ತಿನ ಹೊಸತಲೆಮಾರಿನ ಯುವಕ ಯುವತಿಯರಿಗೆ ಹಾವನೂರು ಮತ್ತವರ ವರದಿಯನ್ನು ಓದುವ ಜರೂರತ್ತಿದೆ.’Social justice”ಕುರಿತಂತೆ ಕೆಲವು ಸರಳ ನೋಟಗಳನ್ನು ಅರಿಯಲು ಪ್ರಯತ್ನಿಸಬೇಕಾಗಿದೆ.

ಭಾರತ ಕೇವಲ 27  ರಾಜ್ಯಗಳ ಒಕ್ಕೂಟ ಮಾತ್ರವಲ್ಲ.ಇದು ಸುಮಾರು 5000 ಜಾತಿಗಳ ಜನರನ್ನು ಒಳಗೊಂಡ ಸಂಕೀರ್ಣ ದೇಶವಾಗಿದೆ. ಒಂದು ಅಧ್ಯಯನದ ಪ್ರಕಾರ ದೇಶದಲ್ಲಿ 46 53 ಜಾತಿಗಳ ಅಸ್ತಿತ್ವವನ್ನು ದಾಖಲಿಸಲಾಗಿದೆ. ಜಾತಿಗಳು ಸಮಾನಾಂತರ ರೇಖೆಗಳ ರೀತಿಯಲ್ಲಿ ಇರದೇ ಒನ್ ಬೈ ಒನ್ ಕ್ರಮಾನುಗತ ಕ್ರಮಗಳ ಮೇಲೆ ಜೋಡಿಸಲಾಗಿದೆ.ಹೀಗೆ ಶ್ರೇಣೀಕರಿಸಲಾದ ಜಾತಿಗಳು ಮೂಲದ ಆಧಾರದ ಮೇಲೆ ವರ್ಗಗಳಾಗಿವೆ.

ಡಾ.ಬಿ.ಆರ್.ಅಂಬೇಡ್ಕರ್ ಗುರುತಿಸಿದ ಹಾಗೆ ಜಾತಿ ವ್ಯವಸ್ಥೆಯು ಒಂದು ಬಹುಮಹಡಿ ಕಟ್ಟಡವಾಗಿದ್ದ ಹಾಗೆ.ಆದರೆ ಈ ಬಹುಮಹಡಿ ಕಟ್ಟಡಕ್ಕೆ ಮೆಟ್ಟಿಲುಗಳೇ ಇಲ್ಲ ! ಎಂದರು. ಮೇಲಿದ್ದವನು ಕೆಳಗಿಳಿದು ಬರಲು,ಅಥವಾ ಕೆಳಗಿದ್ದವನು ಮೇಲಕ್ಕೆ ಹೋಗಲು ಅವಕಾಶಗಳಿಲ್ಲದ ರೀತಿಯಲ್ಲಿ ಈ ದೇಶದ ಜಾತಿ ವ್ಯವಸ್ಥೆ ರೂಪುಗೊಂಡಿದೆ.ಮೇಲಿನ ಜಾತಿಯವನು ಮೇಲೆಯೇ ಇದ್ದರೆ, ಕೆಳಗಿದ್ದವನು ಕೆಳಗಡೆಯೇ ಇರಬೇಕಾಗುತ್ತದೆ ಎಂದಿದ್ದರು.

ಇಂತಹ ಸಂಕೀರ್ಣ ದೇಶದಲ್ಲಿ ಒಂದು ಜಾತಿ-ಮತ್ತೊಂದಕ್ಕಿಂತ ಆಚಾರ,ವಿಚಾರ,ಉಡುಗೆ-ತೊಡುಗೆಗಳಿಂದಲೂ ಸಹ ಭಿನ್ನವಾಗಿರುವುದು ಕಂಡುಬರುತ್ತದೆ.ಇಲ್ಲಿರುವ ಯಾವ ಜಾತಿಗಳೂ ಸಹ ಒಂದೇ ರೀತಿಯ ಸ್ಥಾನಮಾನಗಳನ್ನು ಹೊಂದಿಲ್ಲ.ಪ್ರತಿಯೊಂದು ಜಾತಿಯೂ ಕೂಡ ತನ್ನದೇ ಆದ ಶ್ರೇಣಿಯ ಒಂದನ್ನು ಹೊಂದಿದೆ.

ಭಾರತದಲ್ಲಿರುವಷ್ಟು ಶ್ರೇಣೀಕೃತ ಜಾತಿ ವ್ಯವಸ್ಥೆ ಪ್ರಪಂಚದ ಮತ್ತು ಇನ್ಯಾವ ದೇಶಗಳಲ್ಲೂ ಕಂಡುಬರುವುದಿಲ್ಲ.ಬ್ರಾಹ್ಮಣರಿಂದ ಹಿಡಿದು ಅಸ್ಪೃಶ್ಯರ ವರೆಗಿನ ಶ್ರೇಣೀಕೃತ ಸಮಾಜದಲ್ಲಿನ ಪ್ರತಿಯೊಂದು ಜಾತಿಯೂ ಸಹ‌ ಸೈದ್ಧಾಂತಿಕವಾಗಿ ಪರಸ್ಪರ ಒಪ್ಪಿಕೊಳ್ಳುವ ಒಂದೇ ಒಂದು ಜಾತಿಯೂ ಭಾರತದಲ್ಲಿಲ್ಲ.ಇಂತಹ ದೇಶದಲ್ಲಿ ಜನರು ಆಗಾಗ ಅಸಮಾನತೆಯ ಬೆಂಕಿಗೆ,ಅಸಹಿಷ್ಣುತೆ,ಅನ್ಯಾಯ ಗಳಿಗೆ ಮತ್ತೆ ಮತ್ತೆ ತುತ್ತಾಗುತ್ತಲೇ ಇರುತ್ತಾರೆ.

ಭಾರತದಲ್ಲಿ ಒಬ್ಬ ಸಾಮಾನ್ಯ ಪ್ರಜೆ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಬಹಳ ಸುಲಭವಾಗಿ ಹೋಗಲು ಅವಕಾಶವಿದೆ.ಹಾಗೆಯೇ ಒಂದು ಭಾಷೆಯಿಂದ ಮತ್ತೊಂದು ಭಾಷೆಯನ್ನು ಮಾತನಾಡಲು ಸ್ವತಂತ್ರ ಕೂಡ ಆಗಿದ್ದಾನೆ.ಆದರೆ,ಒಂದು ಜಾತಿಯಿಂದ ಮತ್ತೊಂದು ಜಾತಿಗೆ ಮತಾಂತರವಾಗುವುದು ಸಾಧ್ಯವಿಲ್ಲ.

ಭಾರತೀಯರಲ್ಲಿ ‘ಜಾತಿ’ ಎಂಬುದರ ಬೇರು ಬಹಳ ಆಳಕ್ಕೆ ಇಳಿದಿದೆ. ಹಾಗಾಗಿ, ಇಲ್ಲಿನ ಹಿಂದೂಗಳು ಜಾತಿಗಳಲ್ಲಿ ಹುಟ್ಟುತ್ತಾರೆ. ಜಾತಿಗಳಲ್ಲಿ ಕೆಲಸ ಮಾಡುತ್ತಾರೆ. ಜಾತಿಗಳಲ್ಲಿ ಮದುವೆಯಾಗುತ್ತಾರೆ. ಜಾತಿಗಳಲ್ಲಿ ಸಾಯುತ್ತಾರೆ ಮತ್ತು ಯಾವಾಗಲೂ ಪ್ರತ್ಯೇಕವಾದ ಜಾತಿಗೆ ಒಂದರಂತೆ ಇರುವ ಸ್ಮಶಾನಗಳಲ್ಲಿ ಹೂಳುತ್ತಾರೆ, ಸುಡುತ್ತಾರೆ. ಇದು ವಾಸ್ತವ.

ಹುಟ್ಟಿನೊಂದಿಗೆ ಅಂಟಿಕೊಂಡು ಬರುವ ಜಾತಿ ಮೂಲವು ಮನುಷ್ಯನನ್ನು ಮನುಷ್ಯನನ್ನಾಗಿ ನೋಡದೆ ಇರುವಂತಹ ಕ್ರೌರ್ಯದತ್ತ ಭಾರತ ಸಾಗುತ್ತಿದೆ.ದಿನೇ ದಿನೇ ಜಾತಿಯ ಭಿನ್ನತೆಗಳು, ಆಚರಣೆಗಳ ಜನರ ನಡುವೆ ಕೇವಲ ಮೌನ ಅಂತರವನ್ನು ಹೆಚ್ಚಿಸುತ್ತಿದ್ದ ಕಾಲದಿಂದ ನಾವೀಗ ‘ಬೆಂಕಿ’ಹಚ್ಚುವ,ಸುಡುವ,ಕೊಚ್ಚಿಹಾಕುವ ಮಾತುಗಳನ್ನು ಕೇಳುತ್ತಿದ್ದೇವೆ. ಕರುಳಕಂದಮ್ಮಗಳನ್ನು ಮರ್ಯಾದಾಗೇಡು ಹತ್ಯೆಗಳವರೆಗೆ ಬಂದು ನಿಂತಿದ್ದೇವೆ. ಜಾತಿ ಎಂಬುದು ನಿಸ್ಸಂದೇಹವಾಗಿಯೂ ತಾರತಮ್ಯದ ಬಹುದೊಡ್ಡ ರೂಪವಾಗಿದೆ.

ಸುಮಾರು 250  ಮಿಲಿಯನ್ನಿಗಿಂತಲೂ ಹೆಚ್ಚಿರುವ ಇಲ್ಲಿನ ಹೊಲೆಯರು,ಮಾದಿಗರು,ಚಾಂಡಾಲರು ಮುಂತಾದ ಅಸ್ಪೃಶ್ಯರಿಗೆ ನೀಡಲಾದ ಎಲ್ಲಾ ರೀತಿಯ ಜಾತಿ ತಾರತಮ್ಯಗಳನ್ನು ಹೊಂದಿರುವುದು ಸುಳ್ಳಲ್ಲ.ಎಲ್ಲಾ ಮನುಷ್ಯರು ಸ್ವತಂತ್ರರು ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಸಮಾನವಾಗಿ ಹೊಂದಿದ್ದಾರೆ ಎಂದು ನಾವು ಎಷ್ಟೇ ಹೇಳಿಕೊಂಡರೂ ಸಹ, ವಾಸ್ತವ ಭಾರತದ ಕಥಾನಕಗಳು ಮತ್ತೆ ಮತ್ತೆ ಕರಾಳ ಭಾರತದ ದರ್ಶನಗಳನ್ನು ಮೂಡಿಸುತ್ತಲೇ ಇರುತ್ತವೆ. ಧರ್ಮ ಮತ್ತು ಬಣ್ಣಕ್ಕಿಂತ ಜಾತಿ ಬಹಳ ಆಳವಾಗಿರುವುದು ನಮಗೆ ಗೋಚರಿಸುತ್ತಲೇ ಇರುತ್ತದೆ.

ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಜಾತಿಯು ಪ್ರಧಾನವಾಗಿ ಆಳುತ್ತಿದೆ.ಆತನ ಉದ್ಯೋಗವೂ ಸಹ ಜಾತಿ ನಿಯಮಗಳಿಗೆ ಅನುಸಾರವಾಗಿ ಬೇಕು.ಒಂದು ಜಾತಿಯ ಸದಸ್ಯತ್ವವು ಆತನ ತಂದೆ ತಾಯಿಯಿಂದ ಹುಟ್ಟಿನ ಕಾರಣಕ್ಕೆ ಆರಂಭವಾಗಿಬಿಡುತ್ತದೆ.ಜಾತಿ ವ್ಯವಸ್ಥೆ ಎಂಬುದು ಕೇವಲ ಕಾನೂನಿನ ಅನುಮತಿಯನ್ನು ಹೊಂದಿರಲಿಲ್ಲ. ಆದರೆ ರಾಜ್ಯ ಮತ್ತು ಧರ್ಮದ ಅನುಮತಿಯನ್ನು ಹೊಂದಿತ್ತು.

Read also :  L.G Havanur | ಮರ್ಡರ್ ಕೇಸ್ ವಕೀಲರು ಎಂದೇ ಪ್ರಖ್ಯಾತಿ : ಎಲ್‌.ಜಿ.ಹಾವನೂರು

ಬಿ.ಶ್ರೀನಿವಾಸ
ದಾವಣಗೆರೆ

TAGGED:Dinamana.comKannada NewsLG Havanurಎಲ್.ಜಿ.ಹಾವನೂರುಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article Davangere Davanagere | ಕಾನೂನು ತಿಳಿಯುವುದು ಎಲ್ಲರ ಜವಾಬ್ದಾರಿ : ನ್ಯಾ.ಅಣ್ಣಯ್ಯನವರ್
Next Article davanagere Davanagere | ಹಾಜರಿ ಹಾಕಿ ಹೋದ ಕಾರ್ಯಕರ್ತೆ ಶಾಸಕರು ಎರಡು ತಾಸು ಕಾದರೂ ಬರಲೇ ಇಲ್ಲ!

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಮಲಯಾಳಂ ಮನೋರಥಂಗಳ್ ಚಿತ್ರದ ಟ್ರೇಲರ್ ಬಿಡುಗಡೆ : ಒಂಭತ್ತು ಕಥೆಗಳಿಗೆ ೮ ಜನ ನಿರ್ದೇಶಕರು

ಬೆಂಗಳೂರು : ಮಲಯಾಳಂನ ಅಚ್ಚುಮೆಚ್ಚಿನ ಬರಹಗಾರ, ಚಿತ್ರಕಥೆಗಾರ ಮತ್ತು ನಿರ್ದೇಶಕ ಎಂಟಿ ವಾಸುದೇವನ್ ನಾಯರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮನೋರಥಂಗಳ್…

By Dinamaana Kannada News

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ

ದಾವಣಗೆರೆ (Davanagere): ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ದಾವಣಗೆರೆ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ (ಎಚ್‍ಕೆಆರ್ ಬಣ)ದ…

By Dinamaana Kannada News

ಚೆಕ್ ಬೌನ್ಸ್ ಪ್ರಕರಣ: ಶಿಕ್ಷಕಿಗೆ ಕಾರಗೃಹ ಶಿಕ್ಷೆ

ಹರಿಹರ:  ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಇಲ್ಲಿನ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯವು ಆರೋಪಿತೆಗೆ ವಿಧಿಸಿದ್ದ 4 ತಿಂಗಳ…

By Dinamaana Kannada News

You Might Also Like

Two Wheeler (Bike) Repair
ತಾಜಾ ಸುದ್ದಿ

ದಾವಣಗೆರೆ | ದ್ವಿಚಕ್ರ ವಾಹನ(ಬೈಕ್) ರಿಪೇರಿ ಮತ್ತು ಸೇವೆ ಉಚಿತ ತರಬೇತಿ : ಜುಲೈ 23 ಕೊನೆಯ ದಿನ

By Dinamaana Kannada News
Youth Congress
ತಾಜಾ ಸುದ್ದಿ

ದಾವಣಗೆರೆ | ಜಾತ್ಯತೀತ , ಸಮಾಜವಾದಿ ಪದ ತೆಗೆಯುವ ಹೇಳಿಕೆ : ಆರ್‍ಎಸ್‍ಎಸ್ ಮುಖಂಡ ವಿರುದ್ದ ಕ್ರಮಕ್ಕೆ ಒತ್ತಾಯ

By Dinamaana Kannada News
MP visits STPI Bengaluru
ತಾಜಾ ಸುದ್ದಿ

ದಾವಣಗೆರೆ | ಸಂಸದರಿಂದ ಎಸ್‌ಟಿಪಿಐ ಬೆಂಗಳೂರು ಭೇಟಿ : ಐಟಿವಲಯಕ್ಕೆ ಹೊಸ ಉತ್ತೇಜನ

By Dinamaana Kannada News
ದಾವಣಗೆರೆ
ತಾಜಾ ಸುದ್ದಿ

ದಾವಣಗೆರೆ | ಆತ್ಮಹತ್ಯೆಗೆ ಯತ್ನ : ತಾಯಿ ಮತ್ತು  ಮಗು ರಕ್ಷಿಸಿದ 112 ಹೊಯ್ಸಳ ಸಿಬ್ಬಂದಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?