Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಕಂಗೊಳಿಸುತ್ತಿವೆ ಸಾಂಪ್ರದಾಯಿಕ, ಸಖಿ, ಯುವ, ವಿಶೇಷಚೇತನರ ಮತಗಟ್ಟೆಗಳು
ತಾಜಾ ಸುದ್ದಿ

ಕಂಗೊಳಿಸುತ್ತಿವೆ ಸಾಂಪ್ರದಾಯಿಕ, ಸಖಿ, ಯುವ, ವಿಶೇಷಚೇತನರ ಮತಗಟ್ಟೆಗಳು

Dinamaana Kannada News
Last updated: May 6, 2024 5:08 pm
Dinamaana Kannada News
Share
Sakhi
ಸಾಂಪ್ರದಾಯಿಕ ಮತಗಟ್ಟೆ
SHARE

ದಾವಣಗೆರೆ,ಮೇ.06 :  18 ನೇ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಪ್ರಜಾಪ್ರಭುತ್ವದ ಮತದಾನ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ಜಿಲ್ಲೆಯಾದ್ಯಂತ 63 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ ಮತದಾರರನ್ನು ಆಕರ್ಷಿಸಲಾಗುತ್ತಿದೆ.

ವಿಶೇಷ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳಿಂದಲೇ ನಿರ್ವಹಿಸಲ್ಪಡುವ ಸಖಿ ಮತಗಟ್ಟೆ ಇವು ಜಿಲ್ಲೆಯಲ್ಲಿ 35 ಮತಗಟ್ಟೆಗಳು, ಧ್ಯೇಯ ಆಧಾರಿತ ಮತಗಟ್ಟೆಗಳಲ್ಲಿ ಅಡಿಕೆ, ಕೃಷಿ, ವೀಳ್ಲೆದೆಲೆ, ಸಂಚಾರ ನಿಯಂತ್ರಣ, ಜಲಸಂರಕ್ಷಣೆ, ಸ್ಕೌಟ್ ಅಂಡ್ ಗೈಡ್ಸ್, ಅರಣ್ಯ, ಅಂಗನವಾಡಿ, ಸಾಂಪ್ರದಾಯಿಕ ಮತಗಟ್ಟೆಗಳಲ್ಲಿ ಪರಿಸರ ಸ್ನೇಹಿ, ಲಂಬಾಣಿ ಸಂಸ್ಕøತಿ, ಯಾದವ ಸಂಪ್ರದಾಯ, ಅಕ್ಕಿಪಿಕ್ಕಿ ಸಂಪ್ರದಾಯ ಸೇರಿದಂತೆ ಜನಜೀವನದ ಬಗ್ಗೆ ಗಮನ ಸೆಳೆಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಯುವಕರಿಂದ ನಿರ್ವಹಿಸಲ್ಪಡುವ ಯುವ ಮತಗಟ್ಟೆಗಳು, ವಿಶೇಷಚೇತನರಿಂದ ನಿರ್ವಹಿಸಲ್ಪಡುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಸಾಂಪ್ರದಾಯಿಕ ಮತಗಟ್ಟೆ;  ದಾವಣಗೆರೆ ದಕ್ಷಿಣ ಕ್ಷೇತ್ರದ ಮತಗಟ್ಟೆ 169 ಜಾಲಿನಗರದ ಜನತಾ ವಿದ್ಯಾಲಯದಲ್ಲಿ ಪರಿಸರ ಸ್ನೇಹಿಗೆ ಒತ್ತು ನೀಡಲಾಗಿದೆ. ಇಲ್ಲಿ ಬಿಸಿಲಿಗೆ ತಂಪಾಗಿರಲು ಮಣ್ಣಿನಿಂದ ಮಾಡಿದ ಮನೆ, ಛಾವಣಿ ಮೇಲೆ ತೆಂಗಿನ ಗರಿ, ಮಣ್ಣಿನಿಂದ ಮಡಿಕೆ ತಯಾರಿಸುವ ಟಿಗರಿ, ಉಪಯೋಗಿಸುವ ಮಡಿಕೆಗಳ ಪ್ರದರ್ಶನ, ಬಾವಿಯ ಸಂರಕ್ಷಣೆ, ಪಕ್ಷಿಗಳಿಗೆ ನೀರುಣಿಸುವುದು, ಪ್ಲಾಸ್ಟಿಕ್ ಬದಲಾಗಿ ಬಿದಿರಿನಿಂದ ತಯಾರಿಸಿದ ಬೀಸಣಿಕೆ, ಬುಟ್ಟಿಗಳ ಉಪಯೋಗ, ಪ್ಲಾಸ್ಟಿಕ್ ಬ್ಯಾಗ್ ಬದಲಾಗಿ ಬಟ್ಟೆ ಬ್ಯಾಗ್‍ಗಳ ಉಪಯೋಗ ಮಾಡುವ ಮೂಲಕ ಪರಿಸರ ಸಂರಕ್ಷಣೆ ವಿಷಯಾಧಾರಿತ ಮತಗಟ್ಟೆಯಾಗಿದೆ.  ಇದನ್ನು ಚಿತ್ರಕಲಾ ಪರಿಷತ್ ಕಲಾವಿದರು ನಿರ್ಮಾಣ ಮಾಡಿರುವರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಸುರೇಶ್‌ ಇಟ್ನಾಳ್‌  , ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಸಖಿ ಮತಗಟ್ಟೆಗೆ ಭೇಟಿ  :   ದಾವಣಗೆರೆ ಉತ್ತರದ ಎಂ.ಸಿ.ಸಿ. ಬಿ.ಬ್ಲಾಕ್‍ನಲ್ಲಿನ ಮತಗಟ್ಟೆ 208 ರಲ್ಲಿ ಸಖಿ ಮತಗಟ್ಟೆಯನ್ನು ಸ್ಥಾಪಿಸಿದ್ದು ಇಲ್ಲಿ ಪಿಆರ್‍ಓ, ಎಪಿಆರ್‍ಓ, ಮತಗಟ್ಟೆ ಸಿಬ್ಬಂದಿಗಳು ಮಹಿಳೆಯರೇ ಆಗಿರುತ್ತಾರೆ. ಇಲ್ಲಿ 656 ಪುರುಷ, 671 ಮಹಿಳಾ ಮತದಾರರು ಸೇರಿ 1327 ಮತದಾರರಿದ್ದಾರೆ.
ದಾವಣಗೆರೆ ಉತ್ತರದ ಬೇತೂರು ಗ್ರಾಮ ಪಂಚಾಯತ್‍ನಲ್ಲಿನ 23 ರ ಸಖಿ ಮತಗಟ್ಟೆಯಲ್ಲಿ 564 ಪುರುಷ, 593 ಮಹಿಳಾ ಮತದಾರರು ಸೇರಿ 1157 ಮತದಾರರಿದ್ದಾರೆ.
ಇಲ್ಲಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ; ವೆಂಕಟೇಶ್ ಎಂ.ವಿ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿ ವೀಕ್ಷಣೆ ಮಾಡಿ ಸಿದ್ದತೆಗಳ ಪರಿಶೀಲನೆ ನಡೆಸಿದರು.

ವಿಶೇಷ ಮತಗಟ್ಟೆಗಳ ವಿವರ ; ಜಗಳೂರು ತಾ; ಮುಸ್ಟೂರು 238 ನೇ ಮತಗಟ್ಟೆಯಲ್ಲಿ ಧ್ಯೇಯ ಮಾದರಿ ಜಲಾನಯನ ಪ್ರಾತ್ಯಕ್ಷಿತೆ, ಮಳೆ ನೀರು ಸಂರಕ್ಷಣೆ ಮಾಡುವ ಬಗ್ಗೆ ವಿವರಿಸಲಾಗಿದೆ.

ದಾವಣಗೆರೆ ದಕ್ಷಿಣದ ಮತಗಟ್ಟೆ 139 ರಲ್ಲಿ ಜಯದೇವ ಹಾಸ್ಟೆಲ್ ಆನಗೋಡು ಮಠ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷಿ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ.  ಇಲ್ಲಿ ಮೆಕ್ಕೆಜೋಳದ ಸ್ವಾಗತ ಕಮಾನು ನಿರ್ಮಾಣ, ಕೃಷಿ ಮಾಹಿತಿಯುಳ್ಳ ಫಲಕಗಳ ಅನಾವರಣ ಮಾಡಲಾಗಿದೆ.

ಹೊನ್ನಾಳಿ ತಾ; ಆಂಜನೇಯಪುರದಲ್ಲಿ ಲಂಬಾಣಿ ಸಾಂಪ್ರದಾಯಿಕ ಮತಗಟ್ಟೆ, ಚನ್ನಗಿರಿ ತಾ: ಅಸ್ತಾಪನಹಳ್ಳಿಯಲ್ಲಿ ಅಕ್ಕಿಪಿಕ್ಕಿ ಜನಾಂಗದ ಮತಗಟ್ಟೆ, ದಾವಣಗೆರೆ ನಗರದ ನೀರಾವರಿ ಇಲಾಖೆ ಮತಗಟ್ಟೆ 201 ರಲ್ಲಿ ಸಂಚಾರಿ ನಿಯಮಗಳ ಜಾಗೃತಿಯುಳ್ಳ ಮತಗಟ್ಟೆ, ಹರಿಹರ ವೀಳ್ಲೆದೆಲೆ, ಚನ್ನಗಿರಿ ಪಟ್ಟಣ ಅಡಿಕೆ ಬೆಳೆ ಕುರಿತಂತೆ ಮತಗಟ್ಟೆಗಳನ್ನು ವಿಶೇಷವಾಗಿ ಸಿದ್ದಪಡಿಸಲಾಗಿದೆ.

TAGGED:dinamaana.comLatest Kannada NewsSakhi Polling Station .ಕನ್ನಡ ಸುದ್ದಿದಿನಮಾನ.ಕಾಂಸಖಿ ಮತಗಟ್ಟೆ.
Share This Article
Twitter Email Copy Link Print
Previous Article sanduru ಸೊಂಡೂರಿನ ಕಗ್ಗತ್ತಲೆಯ ಕಥನಗಳು-15 ಬದಲಾದ ರಾಜಕಾರಣದ ವರಸೆಗಳು
Next Article Sahitya Parishad ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಬೇಕು : ಜಿ.ಎಸ್.ಸುಭಾಷ್ ಚಂದ್ರ ಬೋಸ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

DAVANAGERE NEWS : ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಗೆ : ದಾವಣಗೆರೆಯ ಪುಟಾಣಿ ಸ್ತುತಿ ಎಸ್.

ದಾವಣಗೆರೆ (DAVANAGERE ) : ನಗರದ ಪುಟಾಣಿ ಸ್ತುತಿ ಎಸ್. 7ನೇ ವಯಸ್ಸಿನಲ್ಲಿ ಕಣ್ಣು ಮುಚ್ಚಿ   ಪಿರಾಮಿಂಕ್ಸ್ ರೂಬಿಕ್ ಕ್ಯೂಬ್…

By Dinamaana Kannada News

Davanagere | ಮನೆಕಳ್ಳತನ ಪ್ರಕರಣ : ಒರಿಸ್ಸಾ ರಾಜ್ಯದ ಇಬ್ಬರ ಬಂಧನ

ದಾವಣಗೆರೆ (Davanagere) : ಮನೆ ಕಳ್ಳತನ ಪ್ರಕರಣದಲ್ಲಿ ಇಬ್ಬರು ಅಂತರರಾಜ್ಯ ಆರೋಪಿಗಳನ್ನು ಆರ್‌ಎಂಸಿ ಠಾಣೆ ಪೋಲಿಸರು ಬಂಧಿಸಿದ್ದಾರೆ. ಒರಿಸ್ಸಾ ರಾಜ್ಯದ…

By Dinamaana Kannada News

ಶಾಲೆಗಳ ಅಭಿವೃದ್ಧಿಗೆ ಗಮನ ಅಗತ್ಯ: ಜಿ. ಬಿ. ವಿನಯ್ ಕುಮಾರ್

ಹೊನ್ನಾಳಿ (honnalli)  : ದೇವಸ್ಥಾನ ನಿರ್ಮಾಣ ಮಾಡಲು ನಾವು ಎಷ್ಟು ಕಾಳಜಿ ತೋರಿಸುತ್ತೇವೆಯೋ ಅಷ್ಟೇ ಕಾಳಜಿ, ಗಮನವನ್ನು ಶಾಲೆಗಳ ಅಭಿವೃದ್ಧಿಗೆ…

By Dinamaana Kannada News

You Might Also Like

Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
PUC
ತಾಜಾ ಸುದ್ದಿ

ಪ್ರಥಮ PUC ಪ್ರವೇಶಾತಿಗೆ ಜುಲೈ 31 ಕೊನೆ ಅವಕಾಶ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?