ದಾವಣಗೆರೆ (Davanagere): ಜಿಲ್ಲಾ ವಕೀಲರ ಭವನದಲ್ಲಿ ಆಯುಷ್ ಇಲಾಖೆ, ವಕೀಲರ ಸಂಘದಿಂದ ಹಮ್ಮಿಕೊಂಡ ಉಚಿತ ತಪಾಸಣೆ ಮತ್ತು ಔಷಧ ವಿತರಣೆ ಶಿಬಿರ ಯಶಸ್ಸು ಕಂಡಿದೆ. ವಕೀಲರು, ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ, ಕಕ್ಷಿದಾರರು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಂಡರು.
ಎರಡೂ ಶಿಬಿರದಲ್ಲಿ ಸುಮಾರು 1 ಸಾವಿರ ಜನ ಪಾಲ್ಗೊಂಡು ಸದುಪಯೋಗ ಪಡೆದುಕೊಂಡಿದ್ದಾರೆ. ಕೆಲಸ ತಿಂಗಳು ನಡೆಸಿದ್ದ ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡು ಔಷಧ ಪಡೆದ ವಕೀಲರ ಅಭಿಪ್ರಾಯ ತಿಳಿಯುವ ಉದ್ದೇಶದಿಂದ ಬುಧವಾರ ಹಮ್ಮಿಕೊಂಡ ಶಿಬಿರ ಅದ್ಭುತ ಯಶ ಕಂಡಿತು.
ಈ ಕುರಿತು ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಯೋಗೇಂದ್ರ, ಕೊನೆಯ ಕ್ಯಾಂಪ್ ನಲ್ಲಿ 452 ಜನ ಪರೀಕ್ಷೆ ಮಾಡಿಕೊಕೊಂಡಿದ್ದು, ಎಲ್ಲರೂ ಚಿಕಿತ್ಸೆ ಔಷಧ ಪಡೆದಿದ್ದಾರೆ. ಉತ್ತಮ ಫಲಿತಾಂಶ ಸಿಕ್ಕಿದೆ ಎಂದು ವಕೀಲರು ಹೇಳಿದ್ದಾರೆ. ಖುದ್ದು ನ್ಯಾಯಾಲಯದ ಸಿಬ್ಬಂದಿ ಸಹ ಉತ್ತಮ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.
ವಕೀಲರು ಮಾತ್ರವಲ್ಲ ಕಕ್ಷಿದಾರರು, ಸಾರ್ವಜನಿಕರು ಸಹ ಇದರ ಉಪಯೋಗ ಪಡೆದುಕೊಂಡಿದ್ದಾರೆ. ಇದು ಉತ್ತಮ ಬೆಳವಣಿಗೆ. ಸಾವಿರಾರು ಜನ ಇದರ ಲಾಭ ಪಡೆದುಕೊಂಡಿದ್ದಾರೆ. ವಕೀಲರ ಸಂಘ ಮತ್ತು ವಕೀಲರು ಉತ್ತಮ ಸ್ಪಂದನೆ ದೊರೆತಿದೆ. ನಿಜಕ್ಕೂ ಇದು ನಮಗೆ ಉತ್ತಮ ಫಲಿತಾಂಶ ನೀಡಿ ಶಿಬಿರ ಎನ್ನಿಸುತ್ತದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಎಚ್. ಅರುಣ್ ಕುಮಾರ್ ಶಿಬಿರದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿ, ಆಯುಷ್ ಇಲಾಖೆ ಜಿಲ್ಲಾ ಅಧಿಕಾರಿ ಡಾ. ಯೋಗೇಂದ್ರ ಕುಮಾರ್ ಇಲಾಖೆ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಇಂಥ ಜನಪರ ಅಧಿಕಾರಿಗಳಿಂದ ಇಲಾಖೆಗೆ ಉತ್ತಮ ಹೆಸರು ಬರುತ್ತದೆ ಜೊತೆಗೆ ಇಲಾಖೆಯ ಸದುದ್ದೇಶ ಈಡೇರಿದಂತೆ ಆಗುತ್ತದೆ. ನಮ್ಮ ಭವನದಲ್ಲಿ ಹಮ್ಮಿಕೊಂಡ ಶಿಬಿರದಲ್ಲಿ ಎಲ್ಲರಿಗೂ ಉಚಿತ ಔಷಧ ನೀಡಿದ್ದಾರೆ. ಒಂದೇ ಒಂದು ಔಷಧವನ್ನು ಹೊರಗೆ ಬರೆದುಕೊಟ್ಟಿಲ್ಲ ಎಂದರು.
ಶಿಬಿರದ ಉದ್ಘಾಟನೆ ವೇಳೆ ಮಾತನಾಡಿದ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶರಾದ ವೇಲಾ ಡಿ.ಕೆ. ಅವರು, ಆಯುಷ್ ವೈದ್ಯಕೀಯ ವ್ಯವಸ್ಥೆ ಅತ್ಯುತ್ತಮ ವ್ಯವಸ್ಥೆ. ಇಲ್ಲಿ ಯಾವುದೇ ಅಡ್ಡ ಪರಿಣಾಮ ಇಲ್ಲದ ಈ ವೈದ್ಯಕೀಯ ಪದ್ಧತಿಯನ್ನು ಎಲ್ಲರೂ ಅಳಡಿಸಿಕೊಳ್ಳಿ ಎಂದರು.
Read also : World tuberculosis Day | ವಿಶ್ವ ಕ್ಷಯ ರೋಗ (ಟಿ ಬಿ) ದಿನಾಚರಣೆ : ರೋಗ ತಡೆಗೆ ಮುನ್ನಚ್ಚರಿಕೆ ಅವಶ್ಯ
ಸಂಘದ ಕಾರ್ಯದರ್ಶಿ ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್, ಉಪಾಧ್ಯಕ್ಷ ಬಸವರಾಜ್ ಗೋಪನಾಳು, ಜಿಲ್ಲಾಮಟ್ಟದ ಎಲ್ಲ ನ್ಯಾಯಾಧೀಶರು ಶಿಬಿರದ ಉದ್ಘಾಟನೆಯಲ್ಲಿ ಪಾಲ್ಗೊಂಡರು.