Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಅಂಬೇಡ್ಕರ್ ಜಗತ್ತಿನ ಸರ್ವಕಾಲಿಕ ಸರ್ವಶ್ರೇಷ್ಠರಲ್ಲಿ ಒಬ್ಬರು : ವಿಶ್ರಾಂತ ನ್ಯಾ. ಹೆಚ್. ಬಿಲ್ಲಪ್ಪ
ತಾಜಾ ಸುದ್ದಿ

ಅಂಬೇಡ್ಕರ್ ಜಗತ್ತಿನ ಸರ್ವಕಾಲಿಕ ಸರ್ವಶ್ರೇಷ್ಠರಲ್ಲಿ ಒಬ್ಬರು : ವಿಶ್ರಾಂತ ನ್ಯಾ. ಹೆಚ್. ಬಿಲ್ಲಪ್ಪ

Dinamaana Kannada News
Last updated: April 24, 2024 4:46 pm
Dinamaana Kannada News
Share
COURT DVG
ಡಾ.ಬಿ.ಆರ್.ಅಂಬೇಡ್ಕರ್‌ 133 ನೇ ಜಯಂತಿ ಹಿನ್ನಲೆ 8 ನೇ ಉಪನ್ಯಾಸ ಮಾಲಿಕೆ ಕಾರ್ಯಕ್ರಮ
SHARE

ದಾವಣಗೆರೆ, ಏ.24-  ಬದುಕಿನಲ್ಲಿ ಬಾಲ್ಯದಿಂದಲೂ ಅನುಭವಿಸಿದ ಸಂಕಷ್ಟಗಳನ್ನೇ ಅವಕಾಶಗಳನ್ನಾಗಿ ಮಾಡಿಕೊಂಡು, ಮಹಾ ಮಾನವತಾವಾದಿಯಾಗಿ ಬೆಳೆದ ಡಾ. ಅಂಬೇಡ್ಕರ್ ಜಗತ್ತಿನ ಸರ್ವಕಾಲಿಕ ಹತ್ತು ಸರ್ವಶ್ರೇಷ್ಠರಲ್ಲಿ ಒಬ್ಬರು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಅಭಿಪ್ರಾಯಪಟ್ಟರು.

ಜಿಲ್ಲಾ ವಕೀಲರ ಸಂಘದಲ್ಲಿ ಆಚರಿಸಿದ ಡಾ. ಅಂಬೇಡ್ಕರ್ರವರ 133ನೇ ಜಯಂತಿಯ ನಿಮಿತ್ತ ಏರ್ಪಡಿಸಿದ್ದ 8ನೇ ಉಪನ್ಯಾಸ ಮಾಲಿಕೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮೆಹರ್ ಜಾತಿಯ ತನ್ನ ತಂದೆ-ತಾಯಿಗಳಿಗೆ ಹದಿನಾಲ್ಕನೇ ಮಗನಾಗಿ ಜನಿಸಿ, ಅಪಾರ ವಿದ್ವತ್ತುಗಳಿಸಿ, ಅನೇಕ ಹುದ್ದೆಗಳನ್ನು ನಿರ್ವಹಿಸಿ, ರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಒಂದು ಶ್ರೇಷ್ಠ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಮುಂದಿನ ಒಂದು ಶತಮಾನಕ್ಕೆ ಆಗುವಷ್ಟು ಆಲೋಚನೆಗಳನ್ನು ಬಿಟ್ಟು ಹೋಗಿದ್ದಾರೆ. ತಮ್ಮ ಸಂಪಾದಕತ್ವದ“ಮೂಕನಾಯಕ” ಬಹಿಷ್ಕತ ಭಾರತ” “ಹೆಸಕಾರಿಣಿ ಸಭಾ” ಹಾಗೂ ತಾವೇ ಕಟ್ಟಿದ ರಾಜಕೀಯ ಪಕ್ಷದ ಮೂಲಕ ಜನತೆಯಲ್ಲಿ ಆತ್ಮವಿಶ್ವಾಸವನ್ನು ತುಂಬಿ  ಹೋಗಿದ್ದಾರೆ  ಎಂದು ಹೇಳಿದರು.

ನಿಷ್ಪಪಕ್ಷಪಾತ ನಿಲುವು, ಯಾರ ಬಗ್ಗೆಯೂ ಅಸೂಯೆ ಪಡದ ಅಂಬೇಡ್ಕರ್ ನ್ಯಾಯ ಮತ್ತು ಸಮಾನತೆಗಾಗಿ ತಮ್ಮ ಜೀವನವನ್ನು ಸವೆಸಿದ ಅಂಬೇಡ್ಕರ್ರವರ ಬದುಕು ಮತ್ತು ಸಾಧನೆಯ ಪ್ರಸ್ತುತತೆಯನ್ನು ಬಿಲ್ಲಪ್ಪ ವಿವರಿಸಿ ಹೇಳಿದರು.

ಅಂಧಶ್ರದ್ಧೆಗಳಿಂದ ದೂರವಾಗಿ, ಆಲೋಚನಾ ದಾಟಿಯನ್ನು ಬದಲಾಯಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯ ಎಂದು ಅಂಬೇಡ್ಕರ್ ದೃಢವಾಗಿ ನಂಬಿದ್ದರು. ಅವರು ರಚಿಸಿದ ಸಂವಿಧಾನ ಒಂದು ಜೀವಂತ ಚಲನಶೀಲ ದಾಖಲೆ ಎಂದು ವರ್ಣಿಸಿದರು.

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜೆ.ವಿ. ವಿಜಯಾನಂದ ಜಯಂತಿಯ ಅರ್ಥಪೂರ್ಣ ಆಚರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ತಾವು ಹೆಚ್.ಬಿಲ್ಲಪ್ಪನವರ ಶಿಷ್ಯ ಎಂದು ನೆನಪಿಸಿಕೊಂಡರು.

ಹಿರಿಯ ವಕೀಲರಾದ ಬಿ.ಎಂ. ಹನುಮಂತಪ್ಪ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿಶೇಷವಾಗಿ ಉಲ್ಲೇಖಿಸಿದರು.

ಸಮಾರಂಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ದಾವಣಗೆರೆ ವಲಯದ ಹಿರಿಯ ಕಾನೂನು ಅಧಿಕಾರಿ ಎ.ಎಂ. ಬಸವರಾಜ, ಸರ್ಕಾರಿ ಅಭಿಯೋಜಕ ಬಿ.ಮಂಜುನಾಥ, ಜಿಲ್ಲಾ ಸರ್ಕಾರಿ ವಕೀಲರಾದ ಎಸ್. ಪ್ರಕಾಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಸಭÉಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಲ್.ಹೆಚ್. ಅರುಣಕುಮಾರ್ ಮಾತನಾಡಿ, ಇಂದಿನ ಯುವಕರಿಗೆ ಸಂವಿಧಾನದ ಪ್ರಸ್ತುತತೆಯನ್ನು ತಿಳಿಸುವುದು ಅತ್ಯಗತ್ಯವಾಗಿದೆ. ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ವಕೀಲ ವೃಂದದ ಮೇಲಿದೆ ಎಂದರು.

ಆರಂಭದಲ್ಲಿ ಹೆಗ್ಗೆರೆ ರಂಗಪ್ಪ ವಚನ ಗೀತೆ ಹಾಗೂ ಅಂಬೇಡ್ಕರ್ ಕುರಿತ ಗೀತೆಯನ್ನು ಹಂಚಿದರು. ವಕೀಲ ಗುಮ್ಮನೂರು ಮಲ್ಲಿಕಾರ್ಜುನ ಅಂಬೇಡ್ಕರ್ ಕುರಿತ ಸ್ವ-ರಚಿತ ಎರಡು ಕಿರು ಕವನಗಳನ್ನು ವಾಚಿಸಿದರು.

ವಕೀಲರ ಸಂಘದ ವತಿಯಿಂದ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಕಾನೂನು ಅಧಿಕಾರಿ ಬಸವರಾಜ ಎ.ಎಂ. ಸರ್ಕಾರಿ ಅಭಿಯೋಜಕರಾದ ಬಿ.ಮಂಜುನಾಥ ಜಿಲ್ಲಾ ಸರ್ಕಾರಿ ವಕೀಲರಾದ ಎಸ್. ಪ್ರಕಾಶ್ ಹಾಗೂ ವಕೀಲರಾದ ಕೆ.ಹೆಚ್. ಹನುಮಂತಪ್ಪ, ಇವರುಗಳನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ ವಂದಿಸಿದರು. ಸಂಘದ ಕಾರ್ಯದರ್ಶಿ ಎಸ್. ಬಸವರಾಜ್ ನಿರೂಪಿಸಿದರು.

TAGGED:dinamaana.comDr. Ambedkar.Kannada Newsಕನ್ನಡ ಸುದ್ದಿಡಾ. ಅಂಬೇಡ್ಕರ್.ದಿನಮಾನ.ಕಾಂ
Share This Article
Twitter Email Copy Link Print
Previous Article suduru -mining -bellare ಸೊಂಡೂರಿನ ಕಗ್ಗತ್ತಲೆಯ ಕಥನಗಳು : ಮುಂಜಾನೆಯ ಕೊಲೆ-3
Next Article balloon davanagere ಬಾನಂಗಳಲ್ಲಿ ಮತದಾನ ಅಭಿಯಾನ 

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

DAVANAGERE CRIME NEWS : ಅಕ್ರಮವಾಗಿ ಮಾರಾಟ:10 ಲಕ್ಷ ಮೌಲ್ಯದ ಗಾಂಜಾ ವಶ, ಮೂವರು ಬಂಧನ

ದಾವಣಗೆರೆ (DAVANAGERE) :  ಅಕ್ರಮವಾಗಿ ಮಾರಾಟ ಮಾಡಲು ಗಾಂಜಾ ಸಂಗ್ರಹಿಸಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 10 ಲಕ್ಷ…

By Dinamaana Kannada News

Davanagere | ಪಾರ್ಕ್ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಡಿಎಸ್‍ಎಸ್ ವಿರೋಧ

ದಾವಣಗೆರೆ (Davanagere): ಪಾರ್ಕ್ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಡಿಎಸ್‍ಎಸ್ ಸಂಘಟನೆ ವಿರೋಧ ವ್ಯಕ್ತಪಡಿಸಿ ದಾವಣಗೆರೆ ತಹಶೀಲ್ದಾರ ಅವರಿಗೆ ಮನವಿ…

By Dinamaana Kannada News

Davanagere | ಯುವ ಪೀಳಿಗೆಗೆ ಚನ್ನಮ್ಮನ ಇತಿಹಾಸದ ಅರಿವು ಅವಶ್ಯ

ದಾವಣಗೆರೆ (Davanagere): ರಾಣಿ ಚನ್ನಮ್ಮ ಅವರು ಒಂದು ಸಮಾಜಕ್ಕೆ ಸೇರಿದವರಲ್ಲ. ಎಲ್ಲ ಸಮಾಜಗಳನ್ನು ಕಟ್ಟುವ ಕೆಲಸ ಮಾಡಿದಿ ವೀರ ವನಿತೆ.…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

By Dinamaana Kannada News
Political analysis
ರಾಜಕೀಯ

Political analysis | ವಿಜಯೇಂದ್ರ ಅವರಿಗೆ ಲಾಸ್ಟ್ ಚಾನ್ಸು?

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?