Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸವಳಂಗ ಹೊಸಕೆರೆಯಲ್ಲಿ ಪತ್ತೆಯಾದ ಪುರಾತನ ಶಿಲ್ಪ
ತಾಜಾ ಸುದ್ದಿ

ಸವಳಂಗ ಹೊಸಕೆರೆಯಲ್ಲಿ ಪತ್ತೆಯಾದ ಪುರಾತನ ಶಿಲ್ಪ

Dinamaana Kannada News
Last updated: July 17, 2024 4:36 pm
Dinamaana Kannada News
Share
Davanagere
ಹೊಸಕೆರೆಯಲ್ಲಿ ಪುರಾತನ ಶಿಲಾ ಶಿಲ್ಪ ಪತ್ತೆ
SHARE

ಹೊನ್ನಾಳ್ಳಿ :  ಸವಳಂಗ(ನ್ಯಾಮತಿ) ಗ್ರಾಮದ ಹೊಸಕೆರೆಯಲ್ಲಿ ಪುರಾತನ ಶಿಲಾ ಶಿಲ್ಪ ಪತ್ತೆಯಾಗಿದೆ ಎಂದು ಇತಿಹಾಸ ತಜ್ಞ ಬಾಲಕೃಷ್ಣ ಹೆಗಡೆ ತಿಳಿಸಿದ್ದಾರೆ.

ಹೊಸಕೆರೆಯಲ್ಲಿ ಅಪರೂಪದ ಶಿಲ್ಪ ಕಂಡುಬಂದಿದ್ದು, ಶಿಲ್ಪದ ಕೆಲ ಲಕ್ಷಣಗಳುನ್ನು ಗಮನಿಸಿದರೆ ಭೈರವ ಶಿಲ್ಪದಂತೆ ಕಂಡು ಬಂದರೂ ಇನ್ನು ಕೆಲ ಲಕ್ಷಣಗಳನ್ನು ಗಮನಿಸಿದಾಗ ವೀರಭದ್ರ ಶಿಲ್ಪದಂತೆ ಭಾಸವಾಗುತ್ತದೆ ಎಂದು ಅವರು ಹೇಳುತ್ತಾರೆ. ಮತ್ತೆ ಕೆಲ ಲಕ್ಷಣಗಳನ್ನು ಗಮನಿಸಿದರೆ ಕಾಳಿಯದ್ದಿರಬಹುದು ಅನಿಸುತ್ತದೆ. ಸುಮಾರು ವಿಜಯನಗರ ಕಾಲಕ್ಕೆ ಸೇರಿದ್ದ ಶಿಲ್ಪ ಇದಾಗಿದ್ದು ಕಪ್ಪು ಶಿಲೆಯಲ್ಲಿ ಇದನ್ನು ಖಂಡರಿಸಲಾಗಿದೆ.

ಶಿಲ್ಪ ಚತುಭುಜಗಳನ್ನು ಹೊಂದಿದ್ದು, ಬಲಭಾಗದ ಮುಂಗೈಯಲ್ಲಿ ಖಡ್ಗವನ್ನು ಮೇಲ್ಮುಖವಾಗಿ ಭುಜದ ಮೇಲೆ ಇಟ್ಟುಕೊಂಡಿರುವ ರೀತಿಯಲ್ಲಿದೆ. ಬಲಭಾಗದ ಇನ್ನೊಂದು ಕೈಯಲ್ಲಿ ತ್ರಿಶೂಲವಿದೆ ಎಂದಿರುವ ಅವರು ಶಿಲ್ಪದ ಎಡಗೈಯೊಂದು ಭಗ್ನಗೊಂಡಿದೆ, ಇನ್ನೊಂದು ಕೈಯಲ್ಲಿ ಪಾಶ ಇದೆ ಎಂದು ವಿವರಿಸಿದ್ದಾರೆ.

ಶಿರದ ಎಡ, ಬಲ ಭಾಗದಲ್ಲಿ ಸೂರ್ಯ ಚಂದ್ರರ ಕೆತ್ತನೆ ಇದೆ, ಸಾಮಾನ್ಯವಾಗಿ ವೀರ ಗಲ್ಲುಗಳಲ್ಲಿ ಈ ತರಹದ ಕೆತ್ತನೆಗಳನ್ನು ಕಾಣುತ್ತೇವೆ, ಆದರೆ ಇದು ವೀರಗಲ್ಲು ಆಗಲಿಕ್ಕಿಲ್ಲ. ಈ ಶಿಲ್ಪದಲ್ಲಿ ಎಲ್ಲಿಯೂ ಶಾಸನ ಕೆತ್ತನೆ ಕಂಡುಬಂದಂತ್ತಿಲ್ಲ. ಈ ಶಿಲ್ಪದ ಎಡ ಭಾಗದಲ್ಲಿ ಒಂದು ಚಿಕ್ಕ ಶಿಲ್ಪದ ಕೆತ್ತನೆ ಇದೆ. ವೀರಭದ್ರ ಶಿಲ್ಪವಾಗಿದ್ದರೆ ಇಕ್ಕೆಲೆಗಳಲ್ಲಿ ದಕ್ಷ-ಬ್ರಹ್ಮ ಶಿಲ್ಪಗಳು ಇರುತ್ತವೆ ಎಂದಿರುವ ಅವರು ಸದರಿ ಶಿಲ್ಪ ರುಂಢಮಾಲಾಧಾರಿಯಾಗಿದ್ದರೂ ಇದು ಕಾಳಿಯ ಶಿಲ್ಪ ಎಂದು ಹೇಳುವುದೂ ಕಷ್ಟ ಎಂಬ ಅಭಿಪ್ರಾಯ ನೀಡಿದ್ದಾರೆ.

ಈ ಶಿಲ್ಪ ಶಿವಗಣ ಶಿಲ್ಪವಾಗಿರಬಹುದು ಎಂದು ಹಿರಿಯ ಶಾಸನತಜ್ಞ ಜಗದೀಶ ಆಗಸಿ ಬಾಗಿಲವರ್ ಅಭಿಪ್ರಾಯಪಡುತ್ತಾರೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಶಿಲ್ಪಶಾಸ್ತ್ರದ ದೃಷ್ಣಿಯಿಂದ ಈ ಶಿಲ್ಪ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇದರ ಕುರಿತು ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ. ಬಳಿಕವಷ್ಟೇ ಈ ಶಿಲ್ಪ ಏನಿರಬಹುದೆಂದು ನಿಖರವಾಗಿ ಹೇಳಬಹುದು ಎಂದು ಹೆಗಡೆ ಹೇಳಿದ್ದಾರೆ.

ಕೆರೆಯಲ್ಲಿ ಕಂಡುಬಂದ ಶಿಲ್ಪದ ಬಗ್ಗೆ ಸವಳಂಗ ಗ್ರಾಮಸ್ಥರು ಇತಿಹಾಸ ತಜ್ಞರ ಗಮನಕ್ಕೆ ತಂದಿದ್ದಾರೆ ಎಂದು ಸವಳಂಗ ಗ್ರಾಮ ಪಂಚಾಯಿತಿ ಸದಸ್ಯ ಕೊಡತಾಳು ನಾಗರಾಜನಾಯ್ಕ, ಬಂಜಾರ ವಿದ್ಯಾರ್ಥಿಸಂಘದ ಅಧ್ಯಕ್ಷ ಮಂಜುನಾಯ್ಕ, ಪ್ರಧಾನ ಕಾರ್ಯದರ್ಶಿ ಕಿರಣನಾಯ್ಕ ತಿಳಿಸಿದರು.

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Benagalore “ಬ್ಯಾಕ್ ಬೆಂಚರ್ಸ್” ಗೆಲ್ಲಲೇಬೇಕು ನಿರ್ದೇಶಕ – ನಿರ್ಮಾಪಕ ರಾಜಶೇಖರ್
Next Article Badhra dam Shivamogga ಮಳೆ ಆರ್ಭಟ: ಭದ್ರಾ ಡ್ಯಾಂ ನಲ್ಲಿ 24 ಗಂಟೆಯಲ್ಲಿ 4.4 ಅಡಿ ನೀರು ಸಂಗ್ರಹ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ | ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡರಿಂದ ತಿರಂಗಾ ಯಾತ್ರೆ

ದಾವಣಗೆರೆ : ಕರ್ನಾಟಕ ಕಾಂಗ್ರೆಸ್ ಯುವ ಘಟಕದ ವತಿಯಿಂದ   ದಾವಣಗೆರೆಯಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಯೋಜಿಸಲಾಗಿದ್ದು, ರಾಜ್ಯ…

By Dinamaana Kannada News

Davanagere news | ಗಾಂಧೀಜಿ ಅವರ ಸಿದ್ದಾಂತ ಪ್ರಪಂಚಕ್ಕೆ ಮಾದರಿ : ಕೆ.ಎಸ್.ಬಸವಂತಪ್ಪ

ದಾವಣಗೆರೆ ಅ. 2 (Davanagere)  :  ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ತಮ್ಮ ಸರಳತೆಯಿಂದಲೇ ಇತರರಿಗೆ ಮೇಲ್ಪಂಕ್ತಿಯಾಗಿದ್ದು ಶಾಂತಿ ಮತ್ತು ಅಂಹಿಸಾ…

By Dinamaana Kannada News

Davanagere | ರಾಷ್ಟ್ರೀಯ ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ  (Davanagere) : ರಾಷ್ಟ್ರೀಯ ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.…

By Dinamaana Kannada News

You Might Also Like

Davanagere
ತಾಜಾ ಸುದ್ದಿಅಪರಾಧ ಸುದ್ದಿ

ಅಕ್ರಮವಾಗಿ ಪಡಿತರ ದಾಸ್ತಾನು:ವಿವಿಧ ಕಡೆ ದಾಳಿ ನಡೆಸಿ ವಶಕ್ಕೆ ಪಡೆದ ಪೊಲೀಸರು

By Dinamaana Kannada News
Political analysis
ರಾಜಕೀಯ

Political analysis|ಡಿಸಿಎಂ ಪಟ್ಟಕ್ಕೆ ಪ್ರಿಯಾಂಕ್-ಜಮೀರ್?

By Dinamaana Kannada News
N F Kittur. Teacher. Belgaum
ಅಭಿಪ್ರಾಯ

ಸ್ತ್ರೀಯರ ಸಾಧನೆ : ಎನ್ ಎಫ್ ಕಿತ್ತೂರ್

By Dinamaana Kannada News
Davanagere
ತಾಜಾ ಸುದ್ದಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ:ಹಸಿರೇ ಉಸಿರು|ಡಾ. ಡಿ. ಫ್ರಾನ್ಸಿಸ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?