Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು -10: ವೇಷಗಾರರ ಸಂಕಟ  
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು -10: ವೇಷಗಾರರ ಸಂಕಟ  

Dinamaana Kannada News
Last updated: May 1, 2024 8:32 am
Dinamaana Kannada News
Share
sanduri story 10
ವೇಷಗಾರರ ಸಂಕಟ
SHARE
Dinamaana Podcast
Dinamaana Podcast
ಸೊಂಡೂರಿನ ಕಗ್ಗತ್ತಲೆಯ ಕಥನಗಳು -10: ವೇಷಗಾರರ ಸಂಕಟ  
Loading
00:00 / 3:32
RSS Feed
Share
Link
Embed

Download file | Play in new window | Duration: 3:32 | Recorded on May 1, 2024

ಗಣಿಗಾರಿಕೆಯನ್ನೆ ನಂಬಿ ಬದುಕಿದ್ದ ಕುಟುಂಬಗಳು ಒಂದು ಕಡೆಯಾದರೆ ಅಂತಹ ಕುಟುಂಬಗಳನ್ನೆ ಅವಲಂಬಿಸಿ ಬದುಕುತ್ತಿದ್ದ ಸಾವಿರಾರು ಕೂಲಿ ಕಾರ್ಮಿಕರ ಕುಟುಂಬಗಳೂ ಇದ್ದವು. ಇವರನ್ನೆ ನಂಬಿ ಬದುಕುತ್ತಿದ್ದ ಕರಡಿ ಆಡಿಸುವವರು,  ಯಾವುದೋ ವೇಷ ಧರಿಸಿ ಬರುವ ಹಗಲುವೇಷ ಗಾರರು, ಸುಡುಗಾಡು ಸಿದ್ಧರು, ಕುರ್ರಮಾಮುಡುಗಾರು, ಮೈಗೆ ಚಾಟಿ ಬೀಸಿಕೊಳ್ಳುವ ದುರುಗ ಮುರಿಗಿಯವರು ಗಂಗಿ ಬಾರೆ.. ಗೌರಿ ಬಾರೆ ಎಂದು ಶಿವನ ಪಾಡನು ಮನೆಮನೆಗೆ ತಲುಪಿಸುವವರು..,ಇಂತಹ ಇನ್ನೂ ಎಷ್ಟೋ ಸಮುದಾಯಗಳಿದ್ದವು.

ಇವರೆಲ್ಲರು ಇಷ್ಟುದಿನ ಎಲ್ಲಿದ್ದರೋ ಏನೋ…ಗಣಿಗದ್ದಲದಲ್ಲಿ ಇವರ ವೇಷ ಭೂಷಣಗಳು,  ಶಂಖ,  ಜಾಗಟೆಗಳು,ಉರುಮಿಯಂತಹ ಉಪಕರಣಗಳ ಧೂಳು ಮತ್ತೆ ಒರೆಸುವಂತಾಯಿತು.ಹಳೆಯ ನೆನಪುಗಳಿಗೆ ಜಾರುವಂತಾಯಿತು.

ಕೊತ್ತಪ್ಯಾಟಿಗೆ ಪೋತೆ ಕೊಂಚಮು ಕಾಸನ್ನ ವಸ್ತುಂದನ್ನ..(ಹೊಸಪೇಟೆಗೆ ಹೋದರೆ ಸ್ವಲ್ಪ ರೊಕ್ಕ ಸಿಗುತ್ತೆ,) ಈಗ ಮನೆ ಮನೆಗೆ ಹೋದರೆ ನಾಯಿ ಅಟ್ಟಿಸಿಕೊಂಡು ಬರ್ತವೆ. ಧಣಿಗಳು ನೋಡಿಯೂ ನಾಯಿಗಳಿಗೆ ಗದರುವುದಿಲ್ಲ  ಎಂದು ತುಂಬು ಬೇಜಾರಿನಿಂದ ನುಡಿದ. ಹೊಸಪೇಟೆಯಲ್ಲಿ ಮತ್ತೆ ನಿಮಗೆ ಹೆಂಗೆ ರೊಕ್ಕ ಸಿಗುತ್ತದೆ? ಎಂದು ಕೇಳಿದೆ.

“ಅಲ್ಲೇನಿಲ್ಲ ಸೋಮಿ, ಟೀವಿ ಅಂಗಡಿ ಓಪನಿಂಗ್ ಐತಂತೆ, ಅಲ್ಲಿ ನಾವು ಸಾಲಕ ನಿಂತ್ಕೊಂಡು ಎಲ್ಲರನ್ನು ಸ್ವಾಗತಿಸಬಕು. ಕಹಳೆಯವನು ಕಹಳೆ ಊದುತ್ತಾನೆ. ದಾಸಪ್ಪನು ಜಾಗಟೆ ಬಾರಿಸುವನು, ಹಿಂಗೆ, ಹೊಟ್ಟೆಪಾಡಿಗೆ ನಮ್ಮ ದೇವರ ಕೆಲಸಗಳೆಲ್ಲ ಹೀಗೆ ಬದಲಾಗಿವೆ.ಅದಕ್ಕೆ ಬೇಜಾರಾಗಿದೆ. ಏನ್ಮಾಡೋದು? ಹೊಟ್ಟೆ ಕೇಳ್ಬೇಕಲ್ಲ ,?” ಎಂದ ಶ್ರೀ ರಾಮಚಂದ್ರ ಹೆಗಲಿಗೆ ಬಿಲ್ಲೇರಿಸಿ ಸೀತಾಮಾತೆಯೊಂದಿಗೆ ಹೊರಟೇಬಿಟ್ಟ!  ಸಣ್ಣ ಮಗ ಆಂಜನೇಯನ ವೇಷಧಾರಿ ಉದುರುವ ಬಾಲಕ್ಕೆ ಉಡುದಾರ ಸಿಕ್ಕಿಸಿಕೊಳ್ಳುತ್ತಲೇ ಅವರ ಹಿಂದೆಯೇ ಓಡಿದ.

ಹೀಗೆ ಹೋಗುವಾಗ,  “ನಾವು ಗಣಿಗಾರಿಕೆಯ ಮತ್ತಿನಲ್ಲಿ ಕಸುಬು ಪೂರ್ತಿ ಬಿಟ್ಟಿದ್ದೆವು ನೋಡಿ ಸೋಮಿ… ಈಗ ಅದೇ ಕೈ ಹಿಡೀತು. ಆದರೆ ಏನ್ಮಾಡುದು, ನಾವು ಮಹಾಭಾರತದ್ದೋ , ರಾಮಾಯಣದ್ದೋ ಡೈಲಾಗ್ ಹೊಡೀತೀವಿ. ಆದರೆ ಭಾಳ ಕಡೆ, ಮಹಾಭಾರತದ ದ್ರೌಪದಿ ವಸ್ತ್ರಾಪಹರಣ ದೃಶ್ಯವನ್ನೆ ಕೇಳುತಾರೆ ಸೋಮಿ.”

“………..”

“ಬಜಾರಿನಲ್ಲಿ ಎಲ್ಲರೆದುರಿಗೇ ನನ್ನ ಹೆಂಡತಿ ಸೀರೆನ ಸೆಳೀಬೇಕಲ್ಲ ಅಂತ ಬೇಸರ ಆಗ್ತದೆ.  ಆದ್ರೇನ್ಮಾಡೋದು ಹೊಟ್ಟೆಪಾಡಲ್ಲವೆ?” ಎಂದು ಹೇಳಿ ವಿಲಕ್ಷಣ ನಗೆ ಬೀರಿದ.

ಬಿ.ಶ್ರೀನಿವಾಸ

TAGGED:dinamaana.comKannada NewsSanduru stories.ಕನ್ನಡ ಸುದ್ದಿದಿನಮಾನ.ಕಾಂಸಂಡೂರಿನ ಕಥನಗಳು.
Share This Article
Twitter Email Copy Link Print
Previous Article Labor Day ‘ ಮೇ ದಿನ ಇದು ‘ಹುತಾತ್ಮರ ಮಹಾನ್‌ಗಾಥೆ’
Next Article sanduru stories ಸೊಂಡೂರಿನ ಕಗ್ಗತ್ತಲೆಯ ಕಥನಗಳು-11: ನಾಳೆಗಳ ಕಥೆಗಳನ್ನು ಅವ್ವಂದಿರು ಇಂದೇ ಹೇಳಿಬಿಡುತ್ತಾರೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಸಮಾಜದ ಎಲ್ಲ ಜನರೂ ಜಾತ್ಯಾತೀತರಾಗಿ ಬದುಕಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ 

ಬೆಂಗಳೂರು : ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತವಾದವರಲ್ಲ. ಜಾತ್ಯಾತೀತರಾಗಿ ಅವರು ಬದುಕಿದಂತೆ ಸಮಾಜದ ಎಲ್ಲಾ ಜನರು ಬದುಕಿ ಅವರನ್ನು ಸ್ಮರಿಸಬೇಕು…

By Dinamaana Kannada News

Davanagere | ಗಾಂಜಾ ಮಾರಾಟ ಓರ್ವನ ಬಂಧನ

ದಾವಣಗೆರೆ (Davanagere) : ಹದಡಿ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಇಎನ್ ಅಧಿಕಾರಿಗಳು ದಾಳಿ ನಡೆಸಿ…

By Dinamaana Kannada News

Davanagere | ಸರ್ಕಾರ ಕೊಟ್ಟ ಮಾತಿನಂತೆ ಒಳಮೀಸಲಾತಿ ಜಾರಿ ಮಾಡಬೇಕು : ಮಾದಾರ ಚೆನ್ನಯ್ಯ ಸ್ವಾಮೀಜಿ

ದಾವಣಗೆರೆ (Davanagere): ರಾಜ್ಯ ಸರ‍್ಕಾರ  ಹೊಸ ಆಯೋಗ ನೆಪದಲ್ಲಿ ಕಾಲಹರಣ ಮಾಡದೆ ಮೂರು ತಿಂಗಳಲ್ಲಿ  ನಿಗಧಿತ ಸಮಯದಲ್ಲಿ ಒಳಮೀಸಲಾತಿ ಜಾರಿ…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?