Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 60: ನೀವೆ ಲೆಕ್ಕ ಹಾಕ್ರಿ ಸರ್…
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 60: ನೀವೆ ಲೆಕ್ಕ ಹಾಕ್ರಿ ಸರ್…

Dinamaana Kannada News
Last updated: June 20, 2024 3:30 am
Dinamaana Kannada News
Share
sanduru stories
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 20-06-2024

ಮೈನಿಂಗ್ ಎಂಬ ಅನ್ಯಾಯದ ಪರಮಾವಧಿ (Sanduru Stories)

ಗಣಿಬಾಧಿತ ಜನರೆಂಬ ನತದೃಷ್ಟರ ಅಗೋಚರ ನೋವು ಮತ್ತು ಅವರ ಬದುಕಿನಲ್ಲಿ ಮೈನಿಂಗ್ ಎಂಬ ಅನ್ಯಾಯದ ಪರಮಾವಧಿಗೆ ಆಹುತಿಯಾದವರು ಯಾರನ್ನು ದೂರಬೇಕು? ಇಂತಹ ಸಂಕಟಗಳಲ್ಲು ಕಣ್ಣಗಲಿಸಿ ಉತ್ಸಾಹದಿಂದ ಕತೆಗಳ ಗಣಿಯನ್ನೆ ಹೇಳಲು ತಯಾರಾಗುತ್ತಾರೆ.

ನಾನೂ ಕೆಲಸ ಮಾಡಿದೆ’ಹೆಮ್ಮೆ (Sanduru Stories)

ಆತನೊಬ್ಬ ಮನೆ ಕಟ್ಟುವ ಸಾಮಾನ್ಯ ಮೇಸ್ತ್ರಿ.ಇದ್ದುದರಲ್ಲಿಯೇ ಸ್ವಲ್ಪ ಸ್ಥಿತಿವಂತನಂತೆ ಕಾಣುತ್ತಿದ್ದ.ಧಣಿಗಳ ಮನೆ ಕಟ್ಟುವ ತಂಡದಲ್ಲಿದ್ದನಂತೆ. ‘ಅದೋ ನೋಡಿ ಸಾರ್,ಆ ಬಂಗಲೆ ಐತಲ್ಲ,ಇದನ್ನು ಕಟ್ಟುವಾಗ ನಾನೂ ಕೆಲಸ ಮಾಡಿದೆ’ಹೆಮ್ಮೆಯಿಂದ ಹೇಳುತ್ತಿದ್ದ.

‘ಅದು ಕಾರಪುಡಿ ಅಣ್ಣಂದು (Sanduru Stories)

‘ಅದು ಕಾರಪುಡಿ ಅಣ್ಣಂದು ಸರ್’ಎಂದ ‘ಕಾರಪುಡಿ…?’ ‘ಹೌದು, ಕಾರಪುಡಿ ಅಣ್ಣ! ಕಾರಪುಡಿ ಅಡ್ಡಹೆಸರು,ಮೊದಲು ಕಾರಪುಡಿ ಮಾರುತ್ತಿದ್ದರಂತೆ. ಹಂಗಾಗಿ ಈ ಹೆಸ್ರು ಬಂದೈತೆ’

ಆತನ ಮನೆಯನ್ನು ಕಟ್ಟುವಾಗಲೂ ತಾನಿದ್ದುದಾಗಿಯೂ,ಅಂತವರ ಮನೆ ಕಟ್ಟುವಾಗ ಭಲೇ ನಂಬಿಕಸ್ಥರು ಬೇಕು ಮತ್ತು ಹಗಲು ಎಂದರೆ ಹಗಲು,ರಾತ್ರಿ ಎಂದರೆ ರಾತ್ರಿ ಕೆಲಸ ಮಾಡಬೇಕಾಗಿತ್ತು.ಗುಟ್ಟು ಕಾಪಾಡಿಕೊಳ್ಳುವ ಮಂದಿ ಬೇಕಿತ್ತು.ಹಂಗಾಗಿ ತಾನು ಕೆಲಸ ಮಾಡಿರುವುದಾಗಿ ಹೆಮ್ಮೆಯಿಂದ ಹೇಳಿದ. ‘ಆತನೇನು ಗಣಿಧಣೀನಾ..?’ ಕೇಳಿದೆ.

‘ಹೇ ಅಲ್ಲ ಸಾರ್, ಧಣಿಗಳ ಹತ್ರ ಸಂಬಳಕ್ಕಿದ್ದ ಕಾರಪುಡಿ’ ಎಂದ. ‘ಏನು ಕೆಲಸ…..?’ ಕೆಲಸಾ,ಇಷ್ಟ ನೋಡ್ರಿ…ರಾತ್ರಿ ಸಂಡೂರು , ತೋರಣಗಲ್ಲು, ಪಾಪಿನಾಯಕನಹಳ್ಳಿ, ವ್ಯಾಸನಕೆರೆ, ಅಂಕಮ್ಮನಹಾಳು ಮುಂತಾದ ಸ್ಟಾಕ್ ಯಾರ್ಡಗಳಿಂದ ಹೊರಟ ಅದಿರು ಹೊತ್ತ ಟಿಪ್ಪರುಗಳು ಕಾರವಾರದ ಸಮುದ್ರದ ಬಂದರಿನವರೆಗೂ ದಾರಿಯಲ್ಲಿ ಸಿಗುವ ಎಲ್ಲ ಸ್ಟೇಷನ್ಗಳಿಗೂ ಮಾಮೂಲು ಹಂಚುವ ಕೆಲಸ ಕಾರಪುಡಿ ಅಣ್ಣಂದು’.  ಬರೀ ಮಾಮೂಲಿ ಹಂಚುವ ಸಾಮಾನ್ಯ ವ್ಯಕ್ತಿ! ‘ಎಷ್ಟು ಕೋಟಿಗಳ ಒಡೆಯ..?’ಕೇಳಿದೆ.

‘ಹೇ…ಹೆಂಗೇಳ್ತೀರಿ ಸರ್, ನಾವು ರಾತ್ರಿ ಅವರ ಮನೆಯೊಳಗೆ ನೀರಿನ ಟ್ಯಾಂಕಿಗೆಂದು ಸಂಪು ಗುಂಡಿ ತೆಗೆದಿದ್ದೆವು. ಆಮ್ಯಾಲೆ ಅದರೊಳಗೆ ಕಬ್ಬಿಣದ ಟ್ರಜರಿ ಕುಂದ್ರಿಸಿದರು. ಆ ಮ್ಯಾಲೆ ಎರಡು ದಿನ ಬಿಟ್ಟು ಬನ್ನಿ ಎಂದರು.

Read also : Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 44 :  ಜಾತ್ರೆ ಮುಗೀತಲ್ಲ ಸಾರ್…!

ನಾವು ಎರಡು ದಿನಗಳ ನಂತರ  ಹೋದಾಗ ಅದರ ಮೇಲೆ ಟೈಲ್ಸ್ ಕೂಡಿಸಿ ಎಂದರು. ಕೂಡಿಸಿದೆವು.ಈ ಕೆಲಸಗಳೆಲ್ಲ ರಾತ್ರಿಯೇ ನಡೆದವು. ನಮಗೆ ಕೈ ತುಂಬ ರೊಕ್ಕ ಕೊಟ್ಟರು……ಹೇಳಿಕೆಂತಾ ಹೋದರೆ ಬೆಳಕು ಹರಿಯುವತಂಕನೂ ಮುಗಿಯಂಗಿಲ್ಲ ಬಿಡ್ರಿ ಸರ್,’ ಎಂದು ಹೇಳಿ ಕತ್ತಲಲ್ಲಿ ಇಳಿದು ಹೋದ.

ಬಿ.ಶ್ರೀನಿವಾಸ

TAGGED:Davanagere Newsdinamaana.comKannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article Davanagere ಅಂತರಾಷ್ಟ್ರೀಯ ಯೋಗ ದಿನಾಚರಣೆ : 5 ರಿಂದ 6 ಸಾವಿರ ಜನರು ಭಾಗಿ
Next Article Lokayukta Davanagere ಲೋಕಾ ಬಲೆಗೆ ಮಹಾನಗರ ಪಾಲಿಕೆ ನೌಕರರು

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ತಾಪಮಾನ ಹೆಚ್ಚಳ: ಗರ್ಭಿಣಿಯರ ಮೇಲೆ ದುಷ್ಪರಿಣಾಮ ಗರ್ಭಿಣಿ  ಮಹಿಳೆಯರಿಗೆ ಕೆಲವು ಟಿಪ್ಸ್ ನೀಡಿದ  ಆರೋಗ್ಯ ಇಲಾಖೆ

ಈ ಬಾರಿ ಬೇಸಿಗೆ ಕಾಲದಲ್ಲಿ ಜಾಗತಿಕ ತಾಪಮಾನ ಹೆಚ್ಚಳ ಹೆಚ್ಚಾಗಿದ್ದು, ಗರ್ಭಿಣಿ ಮಹಿಳೆಯರು ಭಾರೀ ಜಾಗೃತಿ ವಹಿಸಬೇಕೆಂದು ಆರೋಗ್ಯ ಇಲಾಖೆ…

By Dinamaana Kannada News

ಅಂಬೇಡ್ಕರ, ಗಾಂಧೀಜಿಯವರ ಭಾವಚಿತ್ರಗಳಿಗೆ ಅವಮಾನ : ಪ್ರತಿಭಟನೆ

ದಾವಣಗೆರೆ.ಜು.22;  ರಾಷ್ಟ್ರೀಯ ನಾಯಕರಾದ ಡಾ.ಬಿ.ಅರ್.ಅಂಬೇಡ್ಕರ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಗಳಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ…

By Dinamaana Kannada News

ನಾಗರಿಕಾ ಸೇವಾ ವಲಯ ,ನಾಗರಿಕ ಸಮಾಜದ ಸದಸ್ಯರ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ ಸೆ.30: ದಾವಣಗೆರೆ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ನಾಗರಿಕ ಸೇವಾ ವಲಯ ಹಾಗೂ ನಾಗರಿಕ ಸಮಾಜದ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಹರಿಹರ: ನಿಯಮಬಾಹಿರ ಮಣ್ಣು ಗಣಿಗಾರಿಕೆ ತಡೆಯಲು ಆಗ್ರಹಿಸಿ ಮನವಿ

By Dinamaana Kannada News
Davanagere
ತಾಜಾ ಸುದ್ದಿ

ಮೆಕ್ಕೆಜೋಳದ ಬೆಲೆ ಕುಸಿತ :ಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

By Dinamaana Kannada News
Davanagere
ತಾಜಾ ಸುದ್ದಿ

ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By Dinamaana Kannada News
Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?