Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಆರೋಗ್ಯ > ವಿಶ್ವ ಅಸ್ತಮಾ ದಿನಾಚರಣೆ : ಸತತ ಚಿಕಿತ್ಸೆಯಿಂದ ಅಸ್ತಮಾ ಕಾಯಿಲೆ ಹತೋಟಿಗೆ
ಆರೋಗ್ಯ

ವಿಶ್ವ ಅಸ್ತಮಾ ದಿನಾಚರಣೆ : ಸತತ ಚಿಕಿತ್ಸೆಯಿಂದ ಅಸ್ತಮಾ ಕಾಯಿಲೆ ಹತೋಟಿಗೆ

Dinamaana Kannada News
Last updated: May 9, 2024 5:46 am
Dinamaana Kannada News
Share
davanagere
ವಿಶ್ವ ಅಸ್ತಮಾ ದಿನಾಚರಣೆ
SHARE

ತೀವ್ರ ಅಸ್ತಮಾ ಎಂದರೇನು?

ಅಸ್ತಮಾ ಕಾಯಿಲೆಯು ಸಾಕಷ್ಟು ಜನರನ್ನು ಭಾದಿಸಿದರೂ ಸರಿಯಾದ ಹಾಗೂ ಸತತವಾದ ಚಿಕಿತ್ಸೆಯಿಂದ ಹತೋಟಿಗೆ ಬರುತ್ತದೆ. ಆದರೆ, ಶೇಕಡಾ 5 ಅಥವಾ ಅದಕ್ಕಿಂತ ಕಡಿಮೆ ಪ್ರತಿಶತ ರೋಗಿಗಳಲ್ಲಿ ಇದು ನಿಯಂತ್ರಣಕ್ಕೆ ತರುವುದು ಕಷ್ಟ. ಇದನ್ನು  ತೀವ್ರ ಅಸ್ತಮಾ ಎಂದು ಕರೆಯಲಾಗುತ್ತದೆ. ವಿಶ್ವದಲ್ಲಿ ಅಸ್ತಮಾ ಕಾಯಿಲೆ ಚಿಕಿತ್ಸೆಗೆ ಮಾರ್ಗಸೂಚಿ ತಯಾರಿಸುವ ಜೀನಾ (ಅಮೆರಿಕ) ಸಂಸ್ಥೆಯು ಇಂತಹ ಕ್ಲಿಷ್ಟ ಅಸ್ತಮಾವನ್ನು ಹಲವು ವಿಭಾಗಗಳಾಗಿ ವಿಂಗಡಿಸಿದೆ.

1) ಅನಿಯಂತ್ರಿತ ಅಸ್ತಮಾ

2) ಚಿಕಿತ್ಸೆ ಸ್ಪಂದನೆಗೆ ಕ್ಲಿಷ್ಟಕರ ಅಸ್ತಮಾ

3) ತೀವ್ರ ಅಸ್ತಮಾ

 ಅನಿಯಂತ್ರಿತ ಅಸ್ತಮಾ

ಇದರಲ್ಲಿ ರೋಗಿಯ ಚಿಕಿತ್ಸಾ ಕ್ರಮದ ಮೇಲೆ ವೈದ್ಯರು ಸರಿಯಾಗಿ ಗಮನ ಹಾರಿಸುವುದು ಮುಖ್ಯ. ಇದು ಸಾಮಾನ್ಯವಾಗಿ ಇನ್ಹೇಲರ್ ಔಷಧಿಗಳು ತೆಗೆದುಕೊಳ್ಳುವ ತಪ್ಪು ವಿಧಾನದಿಂದ ಅಥವಾ ಸತತವಾಗಿ ಪ್ರತಿ ದಿನ ಔಷಧಿ ಉಪಯೋಗಿಸದೆ ಇರುವುದರಿಂದ ಸಂಭವಿಸುತ್ತದೆ.

ಇದರಲ್ಲಿ ವೈದ್ಯರು ರೋಗಿಯನ್ನು ತನ್ನ ಎದುರು ಕೂರಿಸಿಕೊಂಡು ಇನ್ಹೇಲರ್ ಮನೆಯಲ್ಲಿ ಹೇಗೆ ಉಪಯೋಗಿಸುವಿರಿ ಮಾಡಿ ತೋರಿಸಿ? ಎಂದು ಖುದ್ದು ಪರೀಕ್ಷೆ ಮಾಡುವುದರಿಂದ ಮತ್ತು ಇಷ್ಟು ದಿನಕ್ಕೆ  ಔಷಧಿ ಸರಿಯಾಗಿ ತೆಗೆದುಕೊಂಡರೆ ಎಷ್ಟು ಖಾಲಿ ಆಗಬೇಕಿತ್ತೋ ಅಷ್ಟು ಆಗಿದೆಯೋ ಇಲ್ಲವೋ ಎಂದು ಪರೀಕ್ಷಿಸಬೇಕು. ರೋಗಿಯ ಹೇಳಿದಷ್ಟು ಔಷಧಿ, ಹೇಳಿದಷ್ಟು ಬಾರಿ, ಹೇಳಿದ ವಿಧಾನದಲ್ಲಿ ಉಪಯೋಗಿಸಿದರೆ ಅನಿಯಂತ್ರಿತ ಅಸ್ತಮಾ ನಿಯಂತ್ರಣಕ್ಕೆ ಬಹಳಷ್ಟು ಜನರಲ್ಲಿ ಬರುತ್ತದೆ.

ಚಿಕಿತ್ಸೆ ಸ್ಪಂದನೆಗೆ ಕ್ಲಿಷ್ಟಕರ ಅಸ್ತಮಾ

ಈ ಮೇಲೆ ಹೇಳಿದಂತೆ ಪರಿಶೀಲಿಸಿದಾಗ ಔಷಧಿ ತೆಗೆದುಕೊಳ್ಳುವ ವಿಧಾನ ಮತ್ತು ಸರಿಯಾಗಿ ಡೋಸ್ ಖಾಲಿ ಮಾಡುತ್ತಿದ್ದರೂ ನಿಯಂತ್ರಣಕ್ಕೆ ಬಾರದ ಅಸ್ತಮಾವನ್ನು ಚಿಕಿತ್ಸೆ ಸ್ಪಂದನೆಗೆ ಕ್ಲಿಷ್ಟಕರ ಅಸ್ತಮಾ ಎಂದು ಕರೆಯಲಾಗುತ್ತದೆ. ಇಂಥಹ ರೋಗಿಗಳು ಬಂದಾಗ ಅವರ ಶ್ವಾಸಕೋಶ ಹಾಗೂ ಅದನ್ನು ಹೊರತು ಪಡಿಸಿ ಇತರೆ ಅಂಗಾಂಗಗಳ ಆಳ ತಪಾಸಣೆ ನಡೆಸಬೇಕು. ರೋಗಿಯ ಜೀವನ ಹಾಗೂ ವಾಸಿಸುವ ಶೈಲಿ, ಕೆಲಸ ಮಾಡುವ ಸ್ಥಳದ ಪರಿಸರ ಮಾಲಿನ್ಯ ಇತ್ಯಾದಿ ಅರಿತುಕೊಳ್ಳಬೇಕು.

ಅಸ್ತಮಾದೊಂದಿಗೆ ಅಲರ್ಜಿ ನೆಗಡಿ, ಅಲರ್ಜಿ ಚರ್ಮದ ಕಾಯಿಲೆ, ಮಾನಸಿಕ ತುಮುಲ, ಕಿವಿ ಸೋರುವುದು, ಬ್ರಾಂಕಿಯೆಕ್ಟಸಿಸ್ ಕಾಯಿಲೆ, ಸ್ಲೀಪ್ ಆಪ್ನಿಯ ಕಾಯಿಲೆ, ಬೊಜ್ಜುತನ, ಹೃದಯದ ಕಾಯಿಲೆ ಏನಾದರೂ ಜೊತೆಗೆ ಇದೆಯೋ ಎಂದು ಖಚಿತ ಪಡಿಸಿಕೊಂಡು ಅದಕ್ಕೂ ಚಿಕಿತ್ಸೆ ನೀಡುವುದು ತುಂಬಾ ಮುಖ್ಯ.

ಜೊತೆಗೆ ರೋಗಿ ಅಸ್ತಮಾದ ಸರಿಯಾದ ಚಿಕಿತ್ಸೆ ತೆಗೆದುಕೊಂಡು ಕಮ್ಮಿ ಆಗದಿದ್ದರೆ, ಧೂಮಪಾನ ಮಾಡುತ್ತಾ ಇದ್ದಾರಾ? ಕೆಲಸ ಮಾಡುವ ಸ್ಥಳದಲ್ಲಿ ಧೂಳು ಹೊಗೆ ವಾತಾವರಣ ಇದೆಯಾ? ಮನೆ ಅಕ್ಕಪಕ್ಕ ಪಾರ್ಥೇನಿಯಂ ಬಹಳ ಇದೆಯಾ? ಇದನ್ನು ಎಲ್ಲಾ ಪೊಲೀಸರ ಥರ ಹುಡುಕಬೇಕಾಗಿ ಬರುತ್ತದೆ!   ಈ ಮೇಲ್ಕಂಡ ಸಮಸ್ಯೆ ಅರಿತು ಪರಿಹರಿಸಿದರೆ ಅಸ್ತಮಾ ನಿಯಂತ್ರಣ ಸಾಧ್ಯ.

ತೀವ್ರ ಅಸ್ತಮಾ

ಈ ಮೇಲೆ ಹೇಳಿದ 1 ಮತ್ತು 2 ಎಲ್ಲಾ ಬಗೆಹರಿಸಿದರೂ ನಿಯಂತ್ರಣಕ್ಕೆ ಬಾರದ ಅಸ್ತಮಾವನ್ನು ತೀವ್ರ ಅಸ್ತಮಾ ಎಂದು ಕರೆಯಲಾಗುತ್ತದೆ. ಇಲ್ಲಿ ಜೀನ ಸಂಸ್ಥೆ ಕೆಲವು ಫೀನೋಟೈಪ್ ಆಗಿ ವಿಂಗಡಿಸಿದೆ.

 

A)ಟಿ ಹೆಚ್ 2 ಅಸ್ತಮಾ:-

  1. a) ಇದು 40 ವರ್ಷ ಕೆಳಗಿನ ವಯಸ್ಸಿನಲ್ಲಿ ಪ್ರಾರಂಭ ಆಗುತ್ತದೆ.
  2. b) ದೀರ್ಘ ಅಲರ್ಜಿಯ ಅಸ್ತಮಾ.
  3. c) ವ್ಯಾಯಾಮದಿಂದ ಹೆಚ್ಚಾಗುವ ಅಸ್ತಮಾ.
  4. d) ಅಯಸ್ಪಿರಿನ್ ಮಾತ್ರೆ ಇಂದ ಹೆಚ್ಚಾಗುವ ಅಸ್ತಮಾ
  5. e) ಸುಧೀರ್ಘ ಇಯೋಸಿನೊಫಿಲ್ ಅಸ್ತಮಾ

 

B)ಟಿ ಹೆಚ್ 2 ಅಲ್ಲದ ಅಸ್ತಮಾ:-

  1. a) ಧೂಮಪಾನಿಗಳ ಅಸ್ತಮಾ.
  2. b) ಬೊಜ್ಜಿನ ಅಸ್ತಮಾ.
  3. c) ರಿಸ್ಟ್ರಿ ಕ್ತೀವ್ ಉಸಿರಾಟದ ನಾಳಗಳ ಅಸ್ತಮಾ.
  4. d) 40 ವರ್ಷ ವಯಸ್ಸು ಮೇಲ್ಪಟ್ಟವರಲ್ಲಿ ಕಂಡು ಬರುತ್ತದೆ.

 

ಇಂಥಹ ತೀವ್ರ ಅಸ್ತಮಾಗೆ ಇನ್ಹೇಲರ್ ಹೊರತು ಪಡಿಸಿ ಮನೋಕ್ಲೋನಲ್ ಆಂಟಿಬಾಡಿಸ್ ಅಂಥಹ ಚುಚ್ಚು ಮದ್ದು ಔಷಧಿ, ಬೊಜ್ಜನ್ನು ತೆಗೆಯುವ ಶಸ್ತ್ರ ಚಿಕಿತ್ಸೆ, ಸ್ಲೀಪ್ ಆಫ್ನಿಯ ನಿಯಂತ್ರಿಸುವ ಉಸಿರಾಟದ ಯಂತ್ರ, ಕೆಲವೊಮ್ಮೆ ಇನ್ಹೇಲರ್ ಗಳಲ್ಲಿ ಲಾಮ ಔಷಧಿಯೂ ಲಾಬ ಮತ್ತು ಐ.ಸಿ.ಎಸ್. ಔಷಧಿಗಳೊಂದಿಗೆ ಸೇರಿಸಬೇಕಾಗುತ್ತದೆ. ಸರಿಯಾದ ಹಾಗೂ ಸತತವಾದ ಚಿಕಿತ್ಸೆಯಿಂದ ಈ ಮೇಲೆ ಹೇಳಿದಂತೆ ಅಸ್ತಮಾ ಕಾಯಿಲೆಯನ್ನು ನಿಯಂತ್ರದಲ್ಲಿ ಇರಿಸಬಹುದು.

ಲೇಖಕರು 

ಡಾ.ಎನ್.ಹೆಚ್.ಕೃಷ್ಣ 

ಶ್ವಾಸಕೋಶದ ಹಾಗೂ ಉಸಿರಾಟದ ಕಾಯಿಲೆಗಳ ಸಲಹಾ ವೈದ್ಯರು

ದಾವಣಗೆರೆ 

TAGGED:dinamaana.comKannada NewsWorld Asthma Day.ಕನ್ನಡ ಸುದ್ದಿದಿನಮಾನ.ಕಾಂವಿಶ್ವ ಅಸ್ತಮಾ ದಿನಾಚರಣೆ.
Share This Article
Twitter Email Copy Link Print
Previous Article DAVANAGERE ಸೊಂಡೂರಿನ ಕಗ್ಗತ್ತಲೆಯ ಕಥನಗಳು-18 ಸುಪ್ರೀಮ್ ಕೋರ್ಟು ನೇಮಿಸಿದ ಸಾಗರಧಾರಾ ಸಮಿತಿ ವರದಿ
Next Article DAVANAGERE ಎಸ್ಸೆಸ್ಸೆಲ್ಸಿ ಪರೀಕ್ಷೆ: ಈಶ್ವರಮ್ಮ ಶಾಲೆಗೆ ಶೇ.100 ಫಲಿತಾಂಶ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಪೊಲೀಸ್‌ ವಶದಲ್ಲಿದ್ದ ವ್ಯಕ್ತಿ ಸಾವು : ಕಲ್ಲು ತೂರಾಟ, 7 ಪೊಲೀಸ್ ವಾಹನ ಜಖಂ

ಚನ್ನಗಿರಿ :   ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಮಟ್ಕಾ ಜೂಜಾಟ ಪ್ರಕರಣದ ಆರೋಪಿ ಆದೀಲ್ ಎಂಬಾತನನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಬಂದ…

By Dinamaana Kannada News

ಸವಾಲುಗಳ ಮೀರಿ ಜ್ಞಾನ, ಕೌಶಲ್ಯ ಪಡೆದು ಉಜ್ವಲ ಭವಿಷ್ಯ ನಿಮ್ಮದಾಗಿಸಿಕೊಳ್ಳಿ : ಎಸ್.ಆರ್. ಶಂಕಪಾಲ್  

ದಾವಣಗೆರೆ  (Davanagere):  ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಶನಿವಾರ 19 ಮತ್ತು 20ನೇ ಪದವಿ ಪ್ರದಾನ ಸಮಾರಂಭದಲ್ಲಿ…

By Dinamaana Kannada News

ಸ್ವಾಭಿಮಾನಕ್ಕೆ ಬಡತನ ಇರಬಾರದು, ಶ್ರೀಮಂತಿಕೆ ಇರಬೇಕು: ಜಿ. ಬಿ. ವಿನಯ್ ಕುಮಾರ್ ಸಲಹೆ

ದಾವಣಗೆರೆ (Davanagere): ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಸಂಪಾದಿಸಿಕೊಳ್ಳಿ. ಜ್ಞಾನ ಮತ್ತು ಒಳ್ಳೆಯ ಶಿಕ್ಷಣ ಪಡೆಯುವ ಮೂಲಕ ಸ್ವತಂತ್ರ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮ : ಸಹಾಯಧನ, ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

By Dinamaana Kannada News
Davangere
ತಾಜಾ ಸುದ್ದಿ

ಪಿಎಸ್‍ಐ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿ ಅವಧಿ ವಿಸ್ತರಣೆ

By Dinamaana Kannada News
Davanagere
ತಾಜಾ ಸುದ್ದಿ

ದೇವರಾಜ ಅರಸು ಅಭಿವೃದ್ದಿ ನಿಗಮ: ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ವಿಶ್ವಕರ್ಮ ಅಭಿವೃದ್ದಿ ನಿಗಮ : ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?