Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಮೋದಿ ಮೆಚ್ಚಿಸಲು ಓನ್ ನೇಷನ್ ಓನ್ ಎಲಕ್ಷನ್ ತರಲಾಗುತ್ತಿದೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಟೀಕೆ
ಅಭಿಪ್ರಾಯ

ಮೋದಿ ಮೆಚ್ಚಿಸಲು ಓನ್ ನೇಷನ್ ಓನ್ ಎಲಕ್ಷನ್ ತರಲಾಗುತ್ತಿದೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಟೀಕೆ

Dinamaana Kannada News
Last updated: December 21, 2024 8:44 am
Dinamaana Kannada News
Share
SHARE

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ “ಒಂದು ದೇಶ- ಒಂದು ಚುನಾವಣೆ” ಜಾರಿಯ ಉದ್ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ದೇಶವನ್ನು ಏಕಚಕ್ರಾಧಿಪತ್ಯದತ್ತ ಕೊಂಡೊಯ್ಯುವ ಷಡ್ಯಂತ್ರದಂತೆ ಕಾಣುತ್ತಿದೆ. ಮೋದಿ ಮೆಚ್ಚಿಸಲು ಮುಂದಾಗಿರುವ ಈ ಮಸೂದೆಯಿಂದ ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕಿಡಿಕಾರಿದರು.

ಕೇಂದ್ರ ಸರ್ಕಾರ ಜಾರಿ ಮಾಡಿರುವ “ಒಂದು ದೇಶ-ಒಂದು ಚುನಾವಣೆ ಕುರಿತು ಪ್ರತಿಕ್ರಿಯಿಸಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನಮನ್ನಣೆ ಕಳೆದುಕೊಂಡಿರುವುದು ಇತ್ತೀಚಿನ ಲೋಕಸಭಾ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ರುಜುವಾತಾಗಿದೆ. ಅದನ್ನು ಮರೆಮಾಚಲು ಮತ್ತು‌ ವಾಮಮಾರ್ಗದಲ್ಲಿ ‘ಜನ ಮತ’ವನ್ನು ತನ್ನ ಹಿತಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳಲು ಆರ್ ಎಸ್ ಎಸ್ ಮತ್ತು ಬಿಜೆಪಿ ನಡೆಸುತ್ತಿರುವ ಸಂಚಿನ ಭಾಗವೇ ಈ “ಒಂದು ದೇಶ- ಒಂದು ಚುನಾವಣೆ” ಆಗಿದೆ.

ಲೋಕಸಭೆ- ವಿಧಾನಸಭಾ ಚುನಾವಣೆಗಳು ಪ್ರತ್ಯೇಕ‌ ನಡೆದರೆ ಚರ್ಚಿತ ಸಂಗತಿ-ಸಂಕಥನಗಳು ಭಿನ್ನವಾಗಿರುತ್ತವೆ. ವಿಧಾನಸಭಾ ಚುನಾವಣೆಗಳಲ್ಲಿ ಆಯಾ ಪ್ರದೇಶದ ಒಲವು, ನಿಲುವು, ಹಿತಾಸಕ್ತಿಗಳು ಚರ್ಚೆಯ ಮುನ್ನೆಲೆಯಲ್ಲಿರುತ್ತವೆ. ಹೀಗಾಗಿಯೇ ದೇಶದ ಅನೇಕ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿವೆ. ತಮ್ಮ ಹಿತಕ್ಕೆ ಪೂರಕವಾಗುವಂತ ಪಕ್ಷಗಳನ್ನು ಜನ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ದೇಶದಲ್ಲೆಡೆ ಆಡಳಿತದಲ್ಲಿ ಕೇಸರಿಯನ್ನು ಹಬ್ಬಿಸುವ ಆರ್ ಎಸ್ ಎಸ್ ಉದ್ದೇಶ ಈಡೇರಿಲ್ಲ. ಒಂದು‌ ದೇಶ-ಒಂದು ಚುನಾವಣೆಯ ಮೂಲಕ ಈ ‘ಪ್ರಾದೇಶಿಕ ರಾಜಕೀಯ ವೈವಿಧ್ಯವನ್ನು ನಾಶ ಪಡಿಸಿ, ಏಕ ಚಕ್ರಾಧಿಪತ್ಯ ಸ್ಥಾಪಿಸಲು ಬಿಜೆಪಿ ಹವಣಿಸುತ್ತಿದೆ ಎಂದು ಸಂಸದೆ ಡಾ.ಪ್ರಭ ಮಲ್ಲಿಕಾರ್ಜುನ್ ಅವರು ಆರೋಪಿಸಿದ್ದಾರೆ.

ಜನಸಂಖ್ಯೆ, ಪ್ರದೇಶ ವ್ಯಾಪ್ತಿ ಮತ್ತಿತರ ಕಾರಣಗಳಿಂದ ಮುಂದಿನ ಕ್ಷೇತ್ರ‌ ಪುನರ್ವಿಂಗಡಣೆ ಹೊತ್ತಿಗೆ ಹಿಂದಿ ಭಾಷಿಕ ಉತ್ತರ ಮತ್ತು ಮಧ್ಯಭಾರತದ ರಾಜ್ಯಗಳು ಸಂಸತ್ ಕ್ಷೇತ್ರಗಳನ್ನು ಹೆಚ್ಚಿಸಿಕೊಳ್ಳಲಿವೆ. ದಕ್ಷಿಣದ ರಾಜ್ಯಗಳು ರಾಜಕೀಯವಾಗಿ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದರೂ ಉತ್ತರದ ‘ಶಕ್ತಿಯ ಮೇಲೆಯೇ ಅಧಿಕಾರದಲ್ಲಿ ಮುಂದುವರಿಯುವ ಲೆಕ್ಕಾಚಾರ ಬಿಜೆಪಿಯದು. ಹೀಗಾದರೆ, ಈಗಾಗಲೇ‌ ಅನುದಾನ ತಾರತಮ್ಯಕ್ಕೆ ಈಡಾಗಿರುವ ದಕ್ಷಿಣ ರಾಜ್ಯಗಳು ಇನ್ನಷ್ಟು ತುಳಿತಕ್ಕೆ ಒಳಗಾಗಬೇಕಾಗುತ್ತದೆ ಎಂದು ಸಂಸದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯಾವುದೇ ರಾಜ್ಯ ತನ್ನದೇ ರಾಜಕೀಯ ಕಾರಣಕ್ಕೆ ವಿಧಾನಸಭೆಯನ್ನು ವಿಸರ್ಜಿಸಿದರು ಅಥವಾ ಉಪಚುನಾವಣೆಗಳು ನಡೆದರು ಮುಂದಿನ ಅವಧಿವರೆಗೆ ಚುನಾವಣೆಗಾಗಿ ಕಾಯಬೇಕಾಗುತ್ತೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಹೊಡೆತ ಬೀಳಲಿದೆ. ರಾಜ್ಯಗಳು ಚುನಾವಣಾ ಸಮಯ ನಿರ್ಧರಿಸುವಲ್ಲಿ ತಮಗಿರುವ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತವೆ.

ಕೇಂದ್ರದಲ್ಲಿ ಮೂರು ಅವಧಿಯ ಅಧಿಕಾರ ನಡೆಸಿ‌ ಎಲ್ಲಾ ರೀತಿಯ ಸಂಪನ್ಮೂಲ ಕ್ರೋಢೀಕರಿಸಿ ಸದೃಢಗೊಂಡಿರುವ ಬಿಜೆಪಿ, ಇದೀಗ ಹಣಬಲ- ಅಧಿಕಾರ ಬಲದ ಮೂಲಕ ಸಣ್ಣಪುಟ್ಟ ಪಕ್ಷಗಳನ್ನು ಹಣಿಯುವ ಕೆಲಸಕ್ಕೆ ಕೈ ಹಾಕಿದೆ. ಒಂದು ದೇಶ- ಒಂದು ಚುನಾವಣೆಗೆ 15 ಪಕ್ಷಗಳ ತೀವ್ರ ವಿರೋಧವಿದ್ದಾಗ್ಯೂ ಅವುಗಳ ಮನವಿಗೆ ಮನ್ನಣೆ ನೀಡದೆ ಅಭಿಪ್ರಾಯ ಹತ್ತಿಕ್ಕಿ, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಸವಾರಿ ಮಾಡಲು ಬಿಜೆಪಿ, ಆರ್.ಎಸ್.ಎಸ್ ಮುಂದಾಗಿರುವುದು ಖಂಡನೀಯ ಎಂದು ಸಂಸದರು ವಾಗ್ದಾಳಿ ನಡೆಸಿದರು.

TAGGED:MP Dr. Prabha MallikarjunPrime Minister Narendra Modi
Share This Article
Twitter Email Copy Link Print
Previous Article davanagere ಅಂಬೇಡ್ಕರ್ ಬಗ್ಗೆ ಅವಹೇಳನ : ಅಮಿತ್ ಷಾ ಕ್ಷಮೆಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆಗ್ರಹ
Next Article Applications invited DAVANAGERE | ವೃತ್ತಿ ನಾಟಕ ಶಿಬಿರಕ್ಕೆ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಕನ್ನಡ ರಾಜ್ಯೋತ್ಸವ|ಕನ್ನಡವೇ ಸತ್ಯ,ಕನ್ನಡವೇ ನಿತ್ಯವಾಗಬೇಕಾದರೆ…..:

ಕನ್ನಡ ನಾಡು -ನುಡಿ 2000  ವರ್ಷಗಳ ಇತಿಹಾಸವನ್ನು ಹೊಂದಿದ್ದು, ಸಾಂಸ್ಕೃತಿಕವಾಗಿ, ಸಾಹಿತಿಕವಾಗಿ, ಐತಿಹಾಸಿಕವಾಗಿ ದಿವ್ಯ ಪರಂಪರೆ ಯನ್ನು ಉಳಿಸಿಕೊಂಡು ಬಂದಿದೆ.…

By ಗೀತಾ ಭರಮಸಾಗರ

ಮರ್ಯಾದೆಗೇಡು ಹತ್ಯೆ ಕಾಯ್ದೆ|ಮಾನ್ಯಪಾಟೀಲ್ ಹೆಸರಲ್ಲಿ ಜಾರಿಯಾಗಲಿ: ಬಸವರಾಜ್ ಸೂಳೆಬಾವಿ ಒತ್ತಾಯ

ಗದಗ: ಮರ್ಯಾದೆಗೇಡು ಹತ್ಯೆ ಕಾಯ್ದೆಯನ್ನು ಇನಾಂ ವೀರಾಪುರ ಗ್ರಾಮದಲ್ಲಿ ಮರ್ಯಾದಾಗೇಡು ಹತ್ಯೆಯಾದ ಮಾನ್ಯ ಪಾಟೀಲ್ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ ಎಂದು…

By Dinamaana Kannada News

Davangere Crime News : ಟಿಪ್ಪ‌ರ್ ಲಾರಿ (Tipper lorry) ಪಲ್ಟಿ : ಚಾಲಕ ಸಾವು

ದಾವಣಗೆರೆ (Davangere) :  ತಾಲ್ಲೂಕಿನ ಆವರಗೊಳ್ಳ ಗ್ರಾಮದಲ್ಲಿ  ಟಿಪ್ಪ‌ರ್ ಲಾರಿ ಪಲ್ಟಿ ಹೊಡೆದು ಚಾಲಕ ಮೃತಪಟ್ಟ ಘಟನೆ ನಡೆದಿದೆ. ಗದಗ…

By Dinamaana Kannada News

You Might Also Like

Davanagere
ಅಭಿಪ್ರಾಯ

ಧರ್ಮ ಸಹಿಷ್ಣುತೆಯ ದಾರ್ಶನಿಕ|ಸ್ವಾಮಿ ವಿವೇಕಾನಂದರು:ಲೇಖನ ಡಾ.ಗಂಗಾಧರಯ್ಯ ಹಿರೇಮಠ

By Dinamaana Kannada News
Justice Mahavira M. Karennavara
ಅಭಿಪ್ರಾಯ

ರಸ್ತೆ ಸುರಕ್ಷತಾ ತಿಂಗಳ ಜನವರಿ 2026: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜನರಿಗೆ ಉಪಯುಕ್ತ ಸಂದೇಶಗಳು

By ನ್ಯಾ.ಮಹಾವೀರ ಮ. ಕರೆಣ್ಣವರ
Mahavira M. Karennavara
ಅಭಿಪ್ರಾಯ

ಮಹಿಳೆಯರ ಸುರಕ್ಷತೆಗಾಗಿ ಇರುವ ಈ ವಿಶೇಷ ಕಾನೂನುಗಳ ಬಗ್ಗೆ ನಿಮಗೇನಾದರೂ ತಿಳಿದಿದೆಯೇ?ಇಲ್ಲಿದೆ ಸಂಪೂರ್ಣ ವಿವರ

By ನ್ಯಾ.ಮಹಾವೀರ ಮ. ಕರೆಣ್ಣವರ
Geeta Bharamasagar
ಅಭಿಪ್ರಾಯ

ಬದಲಾದ ಕಾಲದಲ್ಲಿ ಬದುಕಿನ ಮೌಲ್ಯಗಳು:ಗೀತಾ ಭರಮಸಾಗರ

By ಗೀತಾ ಭರಮಸಾಗರ
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?