Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ರಂಗಭೂಮಿ ದಿನಾಚರಣೆ | ಶಿಕ್ಷಣ,ಸಾಮಾಜಿಕ ಬದಲಾವಣೆಗೆ ರಂಗಭೂಮಿ  ಪ್ರಬಲ ಸಾಧನ : ಅರುಣಕುಮಾರ್
ತಾಜಾ ಸುದ್ದಿ

ರಂಗಭೂಮಿ ದಿನಾಚರಣೆ | ಶಿಕ್ಷಣ,ಸಾಮಾಜಿಕ ಬದಲಾವಣೆಗೆ ರಂಗಭೂಮಿ  ಪ್ರಬಲ ಸಾಧನ : ಅರುಣಕುಮಾರ್

Dinamaana Kannada News
Last updated: March 28, 2025 5:10 am
Dinamaana Kannada News
Share
Davanagere
Davanagere
SHARE

ದಾವಣಗೆರೆ (Davanagere): ರಂಗ ಅನಿಕೇತನ ದಾವಣಗೆರೆ ವತಿಯಿಂದ ರಂಗಕಲರವ-25 ಮತ್ತು ವಿಶ್ವರಂಗಭೂಮಿ ದಿನಾಚರಣೆಯನ್ನು   ನಗರದ ಎಂ.ಸಿ.ಸಿ. `ಬಿ’ ಬ್ಲಾಕ್‍ನಲ್ಲಿರುವ ಪ್ರೇಮಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಕೀಲರ ಸಂಘದ ಅಧ್ಯಕ್ಷ  ಎಲ್.ಹೆಚ್. ಅರುಣಕುಮಾರ್ ಮಾತನಾಡಿ,  ನಮ್ಮ ಸಮಾಜದಲ್ಲಿ ರಂಗಭೂಮಿಗಳ ಮಹತ್ವವನ್ನು ನೆನಪಿಸುವುದಕ್ಕಾಗಿ ಪ್ರತಿವರ್ಷ ವಿಶ್ವರಂಗಭೂಮಿ ದಿನವನ್ನು ಆಚರಿಸಲಾಗುತ್ತಿದೆ. ಪ್ರಾಚೀನ ಕಾಲದಿಂದಲೂ ರಂಗಭೂಮಿಗಳು ಸಹಾನುಭೂತಿ, ಸಮುದಾಯ ಮತ್ತು ಸಾಂಸ್ಕøತಿಕ ತಿಳುವಳಿಕೆಯನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತವೆ. ಶಿಕ್ಷಣ ಮತ್ತು ಸಾಮಾಜಿಕ ಬದಲಾವಣೆಗೆ ಪ್ರಬಲ ಸಾಧನವಾಗಿಯೂ ರಂಗಭೂಮಿ ಕಾರ್ಯನಿರ್ವಹಿಸುತ್ತಿದೆ.

ಇಂದು ವಿಶ್ವರಂಗಭೂಮಿ ದಿನವನ್ನು ರಂಗಭೂಮಿ ಮತ್ತು ಶಾಂತಿಯ ಸಂಸ್ಕøತಿಯ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ರಂಗ ಅನಿಕೇತನ ಅರ್ಥಪೂರ್ಣವಾಗಿ ಮಕ್ಕಳಲ್ಲಿ ರಂಗಭೂಮಿಯ ಕಲೆಯನ್ನು ಉಳಿಸುವ ಉದ್ದೇಶದಿಂದ ನಾಟಕವನ್ನು ಸಿದ್ಧ ಮಾಡಿ ಪ್ರದರ್ಶಿಸುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ತಿಳಿಸಿದರು.

ಇಂದು ರಂಗಭೂಮಿ ಸೇರಿದಂತೆ ಎಲ್ಲ ಜನಪದ ಕಲೆಗಳು ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದ್ದು, ಮುಂದಿನ ಜನತೆಗಾಗಿ ರಂಗಭೂಮಿ ಸೇರಿದಂತೆ ಎಲ್ಲ ಜನಪದ ಕಾರ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ನಿರಂತರ ಶ್ರಮ ಬೇಕಾಗಿದೆ ಎಂದು ತಿಳಿಸಿದರು.

ಧಾರವಾಡದ ನೀನಾಸಂ ರಂಗಕಲಾವಿದೆ ಶಶಿಕಲಾ ಎನ್. ಮಾತನಾಡಿ, ಚಿಂದಿ ಆಯುವ ಮಕ್ಕಳು, ಬಾಲಮಂದಿರದ ಮಕ್ಕಳು ಮತ್ತು ಇತರೆ ನಿರ್ಲಕ್ಷಿತ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಅವರ ಮೂಲಕ ನಾಟಕಗಳನ್ನು ಸಿದ್ಧಗೊಳಿಸಿ ಪ್ರದರ್ಶನ ಮಾಡಲಾಗುತ್ತಿದೆ. ಮಕ್ಕಳಲ್ಲಿ ಸಂಸ್ಕøತಿ ಮತ್ತು ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ತಾವು ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.

ಹಿರಿಯ ವಕೀಲರಾದ ಅನೀಸ್ ಪಾಷಾ ಮಾತನಾಡಿ, ಭಾರತೀಯ ರಂಗಭೂಮಿ ಸಂಗೀತ, ನೃತ್ಯ ಮತ್ತು ನಟನೆಯ ಮೂಲಕ ನಿರೂಪಣಾ ಕಲಾ ಪ್ರಕಾರವಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಆಧುನಿಕ ಭಾರತದಲ್ಲಿ ರಂಗಭೂಮಿಯನ್ನು  ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕಾಗಿ ತಿಳಿಸಿದರು.

ಅಧ್ಯಕ್ಷತೆಯನ್ನು ರಂಗ ಅನಿಕೇತನ ದಾವಣಗೆರೆಯ ಅಧ್ಯಕ್ಷರಾದ ಸುಧಾ ಹೆಚ್.ಎನ್. ಮಾತನಾಡಿ, ದಾವಣಗೆರೆಯಲ್ಲಿ ರಂಗ ಅನಿಕೇತನ ನಿರಂತರವಾಗಿ ರಂಗಚಟುವಟಿಕೆಯನ್ನು ಹಮ್ಮಿಕೊಳ್ಳುತ್ತಿದ್ದು, ಪ್ರಮುಖವಾಗಿ ಹೆಸರಾಂತ ಕಲಾವಿದರನ್ನು ಆಹ್ವಾನಿಸಿ ಮಕ್ಕಳಲ್ಲಿ ರಂಗಭೂಮಿ ಚಟುವಟಿಕೆಗಳನ್ನು ಹಮ್ಮಿಕೊಂಡು ಪ್ರದರ್ಶನವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಿರಿಯ ವಕೀಲರಾದ ಹೆಚ್.ಎಸ್.ಯೋಗೀಶ್, ವೆಂಕಟೇಶ್ ಮತ್ತು ಉಷಾ ಕೈಲಾಸದ್, ದಾವಣಗೆರೆ ದಿನೇಶ್, ನಿಸರ್ಗ, ಭಾರತಿ, ರೇಣುಕಾ, ಸಿದ್ಧರಾಜು, ಶಂಭುಲಿಂಗಪ್ಪ ಉಪಸ್ಥಿತರಿದ್ದರು.

ನಿರೂಪಣೆ ಅನಿತಾ ವಿ.ಟಿ. ನೆರವೇರಿಸಿದರು. ಉಷಾ ಕೈಲಾಸದ್ ಸ್ವಾಗತಿಸಿದರು.

ರಂಗಭೂಮಿ ದಿನಾಚರಣೆ ಅಂಗವಾಗಿ ಸರ್ವಾಂತರ್ಯಾಮಿ ಗಣಿತ ಎಂಬ ನಾಟಕ, ರಂಗಗೀತೆಗಳ ರೂಪಕ ಹಾಗೂ 2025ರ ರಂಗಸಂದೇಶವನ್ನು ವಿಭಿನ್ನವಾಗಿ ರೂಪಕದ ರೀತಿಯಲ್ಲಿ ಶಿಬಿರದ ಮಕ್ಕಳು ಪ್ರಸ್ತುತಪಡಿಸಿದರು.

TAGGED:Davanagere districtDavanagere NewsDinamana.comಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article davanagere ಪತಂಜಲಿ ಯೋಗ ಸಂಸ್ಥೆ | ಯೋಗದಿಂದ ಆತ್ಮಬಲ ವೃದ್ಧಿ: ಭವರ್‌ಲಾಲ್ ಆರ್ಯ
Next Article Davanagere 10 ವರ್ಷಗಳ ಅವಧಿಗೆ ಮರಳುಗಾರಿಕೆ ನಿಷೇಧಿಸಿ : ಡಿಎಸ್‍ಎಸ್ ಆಗ್ರಹ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಅಪ್ಪನ ಕನಸು ನನ್ನ ಕನಸೂ …ಎರಡೂ ನನಸಾಗಲಿಲ್ಲ

ಮಟ ಮಟ ಮಧ್ಯಾಹ್ನ,ರಣ ರಣ ಬಿಸಿಲು ಸುರಿಯುತ್ತಿತ್ತು.ಸುರಿವ ಬಿಸಿಲನ್ನೂ ಲೆಕ್ಕಿಸದೆ ಅಪ್ಪ ಗೋಣಿಚೀಲದಲ್ಲಿ ತೊಗರಿ ಹೊತ್ತು ನಡೆದಿದ್ದ.ಅಪ್ಪನ ಒಂಟೆಯಂತಹ ಕಾಲ್ಗಳು…

By Dinamaana Kannada News

ದಾವಣಗೆರೆ | ಜೈಲಿನ ಭಯ : ಕೋರ್ಟ್ ಆವರಣದಲ್ಲಿಯೇ ಕೈ ಕುಯ್ದುಕೊಂಡ ವ್ಯಕ್ತಿ!

ದಾವಣಗೆರೆ : ಜೈಲಿಗೆ ಕಳಿಸುತ್ತಾರೆಂದು ಹೆದರಿ ವ್ಯಕ್ತಿಯೋರ್ವ ಕೈ ಕುಯ್ದುಕೊಂಡು ರಂಪಾಟ ಮಾಡಿರುವ ಘಟನೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.‌…

By Dinamaana Kannada News

ವಕೀಲರು ಕೌಶಲ್ಯತೆ ವೃದ್ದಿಸಿಕೊಳ್ಳಬೇಕು : ಪ್ರೊ.ಡಾ.ನಟರಾಜ್

ದಾವಣಗೆರೆ: ಕೇಳುವ, ಪ್ರಶ್ನಿಸುವ ಮತ್ತು ಚರ್ಚಿಸುವ ಮನೋಭಾವ ಬೆಳಸಿಕೊಂಡಾಗ ಮಾತ್ರ ಪರಿಪೂರ್ಣರಾಗಲು ಸಾಧ್ಯ ಎಂದು ಚಿತ್ರದುರ್ಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಡಾ.ನಟರಾಜ್…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಹರಿಹರ: ನಿಯಮಬಾಹಿರ ಮಣ್ಣು ಗಣಿಗಾರಿಕೆ ತಡೆಯಲು ಆಗ್ರಹಿಸಿ ಮನವಿ

By Dinamaana Kannada News
Davanagere
ತಾಜಾ ಸುದ್ದಿ

ಮೆಕ್ಕೆಜೋಳದ ಬೆಲೆ ಕುಸಿತ :ಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

By Dinamaana Kannada News
Davanagere
ತಾಜಾ ಸುದ್ದಿ

ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By Dinamaana Kannada News
Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?