Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 57 : ಪಕ್ಷದ ಟಿಕೇಟ್ ಕೊಡಿಸಿದವರಿಗೇ ಹತ್ತು ಕೋಟಿ!
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 57 : ಪಕ್ಷದ ಟಿಕೇಟ್ ಕೊಡಿಸಿದವರಿಗೇ ಹತ್ತು ಕೋಟಿ!

Dinamaana Kannada News
Last updated: June 17, 2024 4:03 am
Dinamaana Kannada News
Share
sanduru
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 17-06-2024

ಬರ ರೈತರ ಪಾಲಿನ ಕ್ರೂರಿ (Sanduru Stories)

ಬಳ್ಳಾರಿ ಜಿಲ್ಲೆಯ ಬಿರುಬಿಸಿಲಿಗೆ ರೈತರ ಬದುಕು ಸದಾ ಅನಿಶ್ಚಿತತೆಯಲಿ ಬೇಯುತ್ತಿರುತ್ತದೆ.ಇಲ್ಲಿ ಎಲ್ಲ ಕಾಲಗಳೂ ಒಂದೇ ರೀತಿಯಾಗಿ ಕಂಡರೆ ಆಶ್ಚರ್ಯವೇನಿಲ್ಲ. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ ಎಂಬ ಬಯಲು ಸೀಮೆಯ ಊರಿನಲ್ಲಿ ಮಳೆ ಬಂದರೆ ಬಂದೀತು ಇಲ್ಲವಾದರೆ ಇಲ್ಲ.ಇಂತಹ ಊರುಗಳ ಪಾಲಿಗೆ ಬರ ಬಂದುಬಿಟ್ಟರಂತೂ ರೈತರ ಪಾಲಿನ ಅದರಷ್ಟು ಕ್ರೂರಿ ಮತ್ತು ನಿರ್ದಯಿ ಬೇರೆ ಯಾವುದೂ ಇರುವುದಕ್ಕೆ ಸಾಧ್ಯವಿಲ್ಲ. ಇಂದಿಗೂ ದಿನವೊಂದರ ಕೂಲಿ ಐವತ್ತು ಅರವತ್ತು ರೂಪಾಯಿಗಳ ಆಸುಪಾಸಿನಲ್ಲಿದೆ. ಅನ್ನಭಾಗ್ಯದ ಅಕ್ಕಿಯನ್ನು ಅಂಗಡಿಗೆ ಮಾರಿ ಬದುಕು ಕಟ್ಟಿಕೊಳ್ಳಬೇಕಿದೆ.

ಭಾರತದ ರಾಜಕಾರಣಿ ಅರ್ಥವಾಗಬೇಕಾದರೆ, ಅವನು ಸಾಮಾನ್ಯರಲ್ಲಿ ಸಾಮಾನ್ಯನಂತೆ ಬದುಕಿ ತೋರಿಸಬೇಕು.ಕನಿಷ್ಟ ಆದಾಯದ ಮಿತಿಯೊಳಗೆ ಬದುಕಿದರೆ ಬಡವರ ಬವಣೆಗಳು ಅರ್ಥವಾದೀತು. ಆದರೆ. ಗಣಿಗಾರಿಕೆಯ ಊರಿಗೆ ಬಂದ ಗಣಿಧಣಿಗಳೆಂಬ ಮಹಾಮಾರಿಗಳು ಎಲ್ಲಿಂದಲೋ ಇಳಿದು ಬಂದವರಲ್ಲ.ಅವರೂ ಇಲ್ಲಿಯೇ ಜನರ ನಡುವೆಯೇ ಇದ್ದವರು.

ಪ್ರಜಾಪ್ರಭುತ್ವ ಒದ್ದಾಡುತಿದೆ (Sanduru Stories)

ಒಂದು ಕಾಲದಲ್ಲಿ ಮಾಮೂಲಿ ಸೈಕಲ್ಲಿನಲ್ಲಿ ಇನ್ಷೂರೆನ್ಸ್ ಮಾಡಿಸಿರೆಂದು ಜನರನ್ನು ದುಂಬಾಲು ಬಿದ್ದವರೆ. ಮತ್ತೊಬ್ಬನಂತೂ ಖಾಸಗಿ  ಬಸ್ಸೊಂದರ ಏಜಂಟ್ ಆಗಿದ್ದುದನ್ನು ಮರೆತಿಲ್ಲ. ಇನ್ನು ಕೆಲವರು ಪುಡಿ ರೌಡಿಗಳು,ಬ್ಲ್ಯಾಕ್ ಮೇಲರ್ಗಳೆ . ಇಂಥವರ ಕೈಗೆ ಪ್ರಜಾಪ್ರಭುತ್ವ ಸಿಕ್ಕು ಒದ್ದಾಡುತಿದೆ. ದಿನಕ್ಕೊಂದು ರೀತಿಯ ಹೇರ್ಸ್ಟೈಲು, ಬಣ್ಣಬಣ್ಣದ ಕನ್ನಡಕಗಳ, ಉಡುಪು ಧರಿಸುವ ತರಹೇವಾರಿ ಫ್ಲೆಕ್ಸುಗಳನ್ನೆ ನೋಡುತ್ತ ಜನರು ಕಾಲವನ್ನು ಮರೆತು ನಿಂತರು.

Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-17 ಅಂತರಂಗ ಕಳೆದುಕೊಂಡ ನತದೃಷ್ಟ ಊರಿನಲ್ಲಿ…

ಗಾಂಧಿವಾದಿ ಚನ್ನಬಸವನಗೌಡರು (Sanduru Stories)

ಈ ಹಿಂದೆ ಇಂಥದೊಂದು ಊರಿಗೆ ಪಕ್ಕದಲ್ಲಿಯೇ ಇರುವ ಹೊಸಪೇಟೆ ಡ್ಯಾಮಿನಿಂದ ಹಗರಿಬೊಮ್ಮನಹಳ್ಳಿಗೆ ನೀರು ತರಲು ಭಗೀರಥ ಶ್ರಮ ಪಟ್ಟವರೆಂದರೆ ಬಾಚಿಗೊಂಡನಹಳ್ಳಿಯ ಚನ್ನಬಸವನಗೌಡರು. ಅಪ್ಪಟ ಗಾಂಧಿವಾದಿಯಾಗಿದ್ದ ಅವರು ಕಣ್ಮುಚ್ಚಿದ ದಿನ ಸಂಸ್ಕಾರ ಮಾಡಲೂ ಅವರ ಅಕೌಂಟಿನಲ್ಲಿ ಹಣವಿರಲಿಲ್ಲ. ಜನರಿಂದ ಚಂದಾ ಎತ್ತಿ ಸಂಸ್ಕಾರ ಮಾಡಬೇಕಾಯಿತು.  ಕೊನೇ ಕಾಲದಲ್ಲಿ ಸೋತುಹೋದ ಗೌಡರ ಆ ಕಂಗಳಲ್ಲಿ ತನ್ನ ಕೈಲಾಗದ್ದಕ್ಕೆ ಊರ ಜನರಲ್ಲಿ ಕ್ಷಮೆಕೇಳುವಂತಿದ್ದ ಅವರ ಕಣ್ಣುಗಳು  ನೋಡಿದ ನೋಟವಿನ್ನೂ ಹಾಗೆಯೆ ಇದೆ.

ಪ್ರಾದೇಶಿಕ ಪಕ್ಸಗಳಿಗೆ ಅಭ್ಯರ್ಥಿಗಳ ಕೊರತೆ (Sanduru Stories)

ಇಂತಹದೊಂದು ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿಟ್ಟಾಗ, ಕ್ಯಾಂಡಿಡೇಟುಗಳ ಕೊರತೆ ಎದುರಾಯಿತು. ರಾಷ್ಟ್ರೀಯ ಪಕ್ಷಗಳೇನೇನೋ ಮಾಡಿ ಅಭ್ಯರ್ಥಿಗಳನ್ನು ಹಾಕಿದರೆ, ಪ್ರಾದೇಶಿಕ ಪಕ್ಸಗಳಿಗೆ ಅಭ್ಯರ್ಥಿಗಳ ಕೊರತೆ ಕಾಡಿತು.

ಹೊಸಪೇಟೆಯಿಂದ ಸಂಡೂರಿನ ರಸ್ತೆಯಿಕ್ಕೆಲಗಳಲ್ಲಿ ಎಲ್ಲಿ ನೋಡಿದರಲ್ಲಿ ನೀಲಿಬೆಟ್ಟಗಳ ಸಾಲು. ಅದೋ ಅಲ್ಲಿ ಬೆಟ್ಟಗಳ ಸಾಲು ಕೆಳಗೆ ಹೊಲಗಳಿದ್ದವು. ಬೆಳೆದರೆ ಬೆಳೆಯವು, ಇಲ್ಲವಾದರೆ ಇಲ್ಲ. ಇಂತದ್ದೇ ಒಂದು ಹೊಲ ಬೆಟ್ಟದ ಬುಡಕ್ಕೆ ಇತ್ತು. ಬೆಟ್ಟದ ಮೇಲೆ ಗಣಿಗಾರಿಕೆ ನಡೆಯುತ್ತಿತ್ತು.ಅದೂ ಕೂಡ ಶಾಸಕರೊಬ್ಬರ ಸಂಬಂಧಿಯ  ಪ್ರಾಪರ್ಟಿಯಂತೆ.

ಬೆಟ್ಟದ ಮೇಲಿನ ಗಣಿಗಾರಿಕೆಯಿಂದಾಗಿ ತನ್ನ ಹೊಲದ ತುಂಬಾ ಅದಿರಿನ ಧೂಳು ಮಣ್ಣು ಜಾರಿ ಬಿದ್ದು ತನ್ನ ಹೊಲ ಹಾಳಾಗುತ್ತಿದೆಯೆಂದು ಕಂಪೆನಿಗಳ ವಿರುದ್ಧ ಆಗಾಗ ಗಲಾಟೆಗಳಾಗುತ್ತಿದ್ಧವು.ತನ್ನ ಹೊಲದಲ್ಲಿ ಏನನ್ನೂ ಬೆಳೆಯಲು ಸಾಧ್ಯವಾಗುತ್ತಿಲ್ಲವೆಂದು ಆ ಬಡ ಕಾನ್ಸ್ಟೇಬಲ್ ಪ್ರತಿದಿನ ಅಲವತ್ತುಕೊಳ್ಳುತ್ತಿದ್ದ.

ಯಾವಾಗ ಮಣ್ಣಿಗೂ ಬೆಲೆ ಬಂತೋ ಸ್ವತಃ ಆ ಪೊಲೀಸ್ ಕಾನ್ಸಟೇಬಲ್ ನೇ ಮುಂದೆ ನಿಂತು ಟನ್ನುಗಟ್ಟಲೆತುಂಬಿಸಿದ. ನೋಡುನೋಡುತ್ತಲೇ ಕೋಟಿ ಕೋಟಿ ರೊಕ್ಕ ಮನಿಗೆ ಬಂದು ಬೀಳತೊಡಗಿತು. ಸಾಮಾನ್ಯ ನೌಕರಿಯಲ್ಲಿದ್ದಾತ ಇದೀಗ ಮೈನಿಂಗ್ ಧಣಿಯಾಗಿಬಿಡುತ್ತಾನೆಂಬುದೆಲ್ಲ ಇಲ್ದಿ ಕಾಮನ್ ಆಗಿಹೋಗಿತ್ತು.

ಶಾಸಕನಾಗುವ ಆಸೆ (Sanduru Stories)

ಧಣಿಗಳು ಟಿಫನ್ನಿಗೆ ಏರೋಪ್ಲೇನಿನಲ್ಲಿ ಬೆಂಗಳೂರಿನ ಎಂ.ಟಿ.ಆರ್.ಹೋಟೆಲಿಗೆ ಹೋಗಿಬಂದರಂತೆ.ಮಧ್ಯಾಹ್ನ ಹೈದರಾಬಾದಿನಲ್ಲಿ ಊಟವಂತೆ…ರಾತ್ರಿ ಬೊಂಬಾಯಿಗಂತೆ ಇಂಥದ್ದೇ ಕಥೆಗಳು ಜನರ ಬಾಯಲ್ಲಿ ಸದಾ ಇರುತ್ತಿದ್ದವು. ಸಾಮಾನ್ಯರೆಲ್ಲ ಹೀಗೆ ಅಸಾಮಾನ್ಯರಂತಾಗಿ ಎಮ್ಮೆಲ್ಲೆ, ಮಿನಿಷ್ಟ್ರಗಳಾಗಿರುವಾಗ  ತಾನೇಕೆ ಶಾಸಕನಾಗಬಾರದು ಎಂಬ ಅಮಿತ ಆಸೆಯೊಂದು ಆ ಕಾನ್ಸ್ಟೇಬಲ್ಗೂ  ಹುಟ್ಟೀಬಿಟ್ಟಿತು.

ಟಿಕೆಟ್‌ ಕೊಡಿಸಿದರೆ ಹತ್ತು ಕೋಟಿ ಅಫರ್‌ (Sanduru Stories)

ರಾಷ್ಟ್ರೀಯ ಪಕ್ಷವೊಂದರ ಟಿಕೇಟನ್ನು ಯಾರೇ ಕೊಡಿಸಲಿ ಅಂತವರಿಗೆ ಹತ್ತುಕೋಟಿ ನಗದು ನೀಡಲಾಗುವುದೆಃದು ಘೋಷಿಸಲಾಯಿತು!. ಬರೀ ಟಿಕೇಟು ಕೊಡಿಸಿದವರಿಗೆ ಹತ್ತು ಕೋಟಿ! ಚುನಾವಣಾ ಖರ್ಚನ್ನೂ ಪಾರ್ಟಿಫಂಡೂ ಏನೂ ಬೇಡವೆಂದು ತಾನೇ ಸ್ವಂತ ಖರ್ಚು ಮಾಡಿ ಗೆದ್ದು ಬರುವೆನೆಂದು ಹೇಳಿದಾಗ ಆತನಿನ್ನೂ ಪೊಲೀಸ್ ಇಲಾಖೆಯ ಸಾಮಾನ್ಯ ಪೇದೆಯಾಗಿದ್ದ. ಬೇರೆ ಪಕ್ಷಗಳ ಹುನ್ನಾರದಿಂದಾಗಿ ಆತನಿಗೆ ಇಲಾಖೆಯಿಂದ ನೋಟಿಸ್ ನೀಡಿ ಸೇವೆಯಿಂದ ಅಮಾನತು ಮಾಡಿಸಲಾಯಿತು.

ಬಿ.ಶ್ರೀನಿವಾಸ

TAGGED:Davanagere Newsdinamaana.comKannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article harihara ಕ್ಯಾತನಹಳ್ಳಿ ಬಸಪ್ಪ ನಿಧನ
Next Article Davanagere ನಾಯಕತ್ವ ಗುಣವನ್ನು ಬೆಳೆಸಲು ಎನ್‌ಎಸ್‌ಎಸ್ ಸಹಕಾರಿ: ಡಾ.ದಳಪತಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಕಾಂಗ್ರೆಸ್ ಸರಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ : ಬಿ.ವೈ. ವಿಜಯೇಂದ್ರ

ದಾವಣಗೆರೆ (Davanagere): ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು…

By Dinamaana Kannada News

ಕ್ರೀಡಾಪಟುಗಳ ವಿದ್ಯಾರ್ಥಿ ವೇತನ : ಅವಧಿ ವಿಸ್ತರಣೆ

ದಾವಣಗೆರೆ ಜು.15  :  ರಾಜ್ಯ ಸರ್ಕಾರದ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ, ಪ್ರೌಢಶಾಲಾ…

By Dinamaana Kannada News

DAVANGERE : ಬಿಜೆಪಿ-ಜೆಡಿಎಸ್‌ ಪಿತೂರಿಗೆ ಜಗ್ಗುವುದಿಲ್ಲ : ಕೆ.ಸಿ. ವೇಣುಗೋಪಾಲ್

ಬೆಂಗಳೂರು, ಆಗಸ್ಟ್‌ 4- (DAVANGERE) : ಬಿಜೆಪಿ–ಜೆಡಿಎಸ್‌ ಪಕ್ಷಗಳ ಪಿತೂರಿಗೆ ನಾವು ಜಗ್ಗುವುದಿಲ್ಲ. ನಾವು ಜನರ ಬಳಿಗೆ ಹೋಗುತ್ತೇವೆ. ಅವರಿಗೆ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

By Dinamaana Kannada News
MLA Basavanthappa
ತಾಜಾ ಸುದ್ದಿ

ಆನಗೋಡಿನಲ್ಲಿ ರೈತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಬಸವಂತಪ್ಪ

By Dinamaana Kannada News
loka adlat davanagere
Blog

ದಾವಣಗೆರೆ ಲೋಕ್ ಆದಾಲತ್‌ : ಸಹಬಾಳ್ವೆ ನಡೆಸಲು 24 ಜೋಡಿಗಳು ನಿರ್ಧಾರ

By Dinamaana Kannada News
Davanagere
ತಾಜಾ ಸುದ್ದಿ

ಅನಧಿಕೃತ ಪಡಿತರ ಚೀಟಿ ಪತ್ತೆಹಚ್ಚಿ,ಹೊಸ ಪಡಿತರಕ್ಕೆಅವಕಾಶ :ಸಚಿವ ಕೆ.ಹೆಚ್.ಮುನಿಯಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?