ದಾವಣಗೆರೆ (Davanagere) : ನಕಲು ಕೀ ಬಳಸಿ ಮನೆಯ ಕಳ್ಳತನ ಮಾಡಿದ್ದ ಆರೋಪಿಯನ್ನು ಕೆಟೆಜೆ ನಗರ ಪೊಲೀಸರು ಬಂಧಿಸಿದ್ದಾರೆ.
ನಂದೀಶ ಬಂಧಿತ ಆರೋಪಿ.
ದಾವಣಗೆರೆ ನಗರದ ಜಯನಗರ ‘ಬಿ’ ಬ್ಲಾಕ್ ಟವರ್ ಲೇ ಔಟ್ ವಾಸಿ ಅಜ್ಜಪ್ಪ ಎಸ್ ರವರು ತಮ್ಮ ಮನೆ ಲಾಕ್ ಮಾಡಿಕೊಂಡು ತಮ್ಮ ಮದುವೆಗೆ ಹೋದ ಸಮಯದಲ್ಲಿ ದಿ 23-12-2024 ರಂದು ಸಂಜೆ 4.30 ಗಂಟೆಯಿಂದ ದಿನಾಂಕ;26-12-2024 ರಂದು ಸಂಜೆ 5.00 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯ ಇಂಟರ್ ಲಾಕ್ ಓಪನ್ ಮಾಡಿ 52000/- ರೂ ನಗದು ಹಣ ಮತ್ತು ಒಟ್ಟು ಸುಮಾರು 2,80,000/-ರೂ ಬೆಲೆಯ ಸುಮಾರು 45 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಪ್ರಕರಣದಲ್ಲಿ ಆರೋಪಿ ಹಾಗು ಮಾಲು ಪತ್ತೆಗಾಗಿ ಎಎಸ್ಪಿಗಳಾದ ವಿಜಯಕುಮಾರ್ ಎಂ.ಸಂತೋ಼ಷ್ , ಮಂಜುನಾಥ್. ಜಿ. ಹಾಗೂ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಸಿಪಿಐ ಸುನೀಲ್ ಕುಮಾರ್.ಹೆಚ್.ಎಸ್. ರವರ ನೇತೃತ್ವದಲ್ಲಿ ಪಿ.ಎಸ್.ಐ ಲತಾ.ಆರ್ ಹಾಗೂ ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಸಿದ್ದಪ್ಪ, ಗೀತಾ.ಸಿ.ಕೆ. ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳು ಮತ್ತು ಶ್ವಾನದಳ ತಂಡ ರಚಿಸಿ ಕಾರ್ಯಚರಣೆ ನಡೆಸಿ ಮೇಲ್ಕಂಡ ಪ್ರಕರಣದಲ್ಲಿನ ಆರೋಪಿ ನಂದೀಶ ವಶಕ್ಕೆ ಪಡೆದು 2,80,000/-ರೂ ಬೆಲೆಯ 1) 20 ಗ್ರಾಂ. ತೂಕದ ಬಂಗಾರದ ಕೊರಳ ಚೈನ್ 2) 25 ಗ್ರಾಂ. ತೂಕದ ಬಂಗಾರದ ಕೈ ಕಡಗ ಮತ್ತು 3) 30,000/- ರೂ ನಗದು ಮನೆಯ ನಕಲು ಕೀ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.
Read also : Harihara | ಮನೆ ಕಳ್ಳತನ ಪ್ರಕರಣ : ಆರೋಪಿ ಬಂಧನ