Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು-30 ಅಂತಿಮವಾಗಿ…..ಸೊಂಡೂರು!
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು-30 ಅಂತಿಮವಾಗಿ…..ಸೊಂಡೂರು!

Dinamaana Kannada News
Last updated: May 21, 2024 5:15 am
Dinamaana Kannada News
Share
sanduru
ಸಂಡೂರಿನ ಕಥನಗಳು
SHARE

Kannada News | Dinamaana.com | 21-05-2024

ಈ ಊರಿನ ದುರಂತ ಇಡೀ ಪ್ರಪಂಚವನ್ನೆ ಪ್ರತಿನಿಧಿಸುವುದರ ಸಂಕೇತ. ಗಣಿಗಾರಿಕೆ ಆರಂಭವಾದಾಗಲೇ ಮನುಷ್ಯರ ಅವನತಿ ಆರಂಭವಾಯಿತು. ಎಗ್ಗಿಲ್ಲದೆ ನಡೆದ ಅಕ್ರಮ ಮೈನಿಂಗ್ ಹಾವಳಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.  ಪ್ರತಿ ಊರಿಗೂ ಇರುವಂತೆ ಈ ಊರಿಗೂ ಸಂಸ್ಕೃತಿ ಎಂಬುದೊಂದಿತ್ತು.   ಸಂಸ್ಕೃತಿ ಎಂದರೆ ಅದೊಂದು ಜನಸಮುದಾಯವು ಬದುಕುವ ರೀತಿಯಾಗಿತ್ತು.ಈ ಮೊದಲು ಇದ್ದ ಕಂಪೆನಿಗಳು ಸುತ್ತಲಿನ ಸುಬ್ರಾಯನಹಳ್ಳಿ,ದೇವಗಿರಿ,ಕುಮಾರಸ್ವಾಮಿ ಬೆಟ್ಟಗಳ ತಪ್ಪಲಿನಲ್ಲಿ ಕಾರ್ಮಿಕರಿಗಾಗಿಯೆ ಇಂತಹ ಪುಟ್ಟ ಊರುಗಳನ್ನು ನಿರ್ಮಾಣ ಮಾಡಿದ್ದವು.

ಮನೆಗಳೆಂದರೆ ಹದಿನೈದು×ಇಪ್ಪತ್ತು ಅಡಿ ವಿಸ್ತೀರ್ಣದವಾಗಿದ್ದವು.ಆ ಪುಟ್ಟ ಮನೆಗಳಲ್ಲಿಯೇ ಇಡೀ ಸಂಸಾರವಂದಿಗರೆಲ್ಲರೂ ಕೂಡಿ ಕಾಲ ಕಳೆಯಬೇಕಾಗಿತ್ತು.ಹೀಗೆ ಗಣಿ ಕೂಲಿಗಾಗಿ ದುಡಿಯುವವರಿಗೆ ಖಾಕಿ ಯುನಿಫಾರ್ಮ್ ಕೊಡಲಾಗಿತ್ತು.ಸಂಬಳ ಅಂತೇನು ಇರಲಿಲ್ಲ. ಗೌರವಧನ ಎಂದು ತಿಂಗಳಿಗೆ ಆರುನೂರು ರೂಪಾಯಿಗಳಂತೆ ನೀಡುತ್ತಿದ್ದರು. ರೇಷನ್ನು ಕೊಡುತ್ತಿದ್ದರು.ಬರಪೀಡಿತ ಹೊಲಗಳನ್ನು ನೆಚ್ಚಿಕೊಂಡು ತೀವ್ರ ಬಡತನವನ್ನು ಅನುಭವಿಸುವ ಬ್ಯಾಸಾಯಕ್ಕಿಂತ ಇದೇ ವಾಸಿಯೆಂದು ಸುಮ್ಮನೆ ಕೆಲಸ ಮಾಡುತ್ತಿದ್ದರು.

ಮ್ಯೂಜಿಯಮ್ಮಿನಲ್ಲಿಟ್ಟ ವಸ್ತು

ತಮ್ಮ ಅಜ್ಜ ಮುತ್ತಜ್ಜರ ಕಾಲದಿಂದಲೂ ಇದ್ದ ಜಂತಿನ ತೊಲೆ ಕಂಬಗಳ ಮನೆಯ ನೆನಪುಗಳೆಲ್ಲ ಅಳಿಸಿಹೋದವು. ಅನಿಯಮಿತ,ಅನಿಯಂತ್ರಿತ ,ಅಕ್ರಮ ಗಣಿಗಾರಿಕೆ ಆರಂಭವಾದ ನಂತರವಂತೂ ಜನರ ಬದುಕು ಮತ್ತಷ್ಟು ದುಸ್ತರಗೊಂಡಿತು. ಹೊಲವಿಲ್ಲ ,ಮನೆಯಿಲ್ಲ, ಆರೋಗ್ಯವಾಗಿದ್ದರೂ, ಸಂಬಂಧಿಕರಿಲ್ಲದ , ಹಬ್ಬ ಹರಿದಿನಗಳಿಲ್ಲದ ಯಂತ್ರಗಳ ಜೊತೆಗೆ ಮನುಷ್ಯರೂ ಸಹ ಭಾವರಹಿತ  ಯಂತ್ರಗಳೇ ಆಗಿಹೋದರು.ಅಕ್ಷರಶ “ಮ್ಯೂಜಿಯಮ್ಮಿನಲ್ಲಿಟ್ಟ ವಸ್ತು”ಗಳಾಗಿಹೋದರು.

ಗಾಯಗೊಂಡ ಸಾಂಸ್ಕೃತಿಕ ಶರೀರ

ಹೌದು, ನವಯಾಂತ್ರಿಕ ವ್ಯವಸ್ಥೆಯೊಂದು ಜನಸಮುದಾಯಗಳ ಬದುಕುವ ರೀತಿಯನ್ನೆ ಬದಲಾಯಿಸಿ ಬಿಟ್ಟಿತು.ರೋಗಪೀಡಿತ ಜೀವನಕ್ರಮ, ದಿನನಿತ್ಯದ ಬದುಕುವ ಜಗತ್ತಾಗಿಹೋಯಿತು. ನೆಲ ಸಂಸ್ಕೃತಿಗಳು ನೆಲಕಚ್ಚಿದರೂ ಬಿಡದೆ, ಟಿಪ್ಪರುಗಳಲ್ಲಿ ದೇಶವಿದೇಶಗಳಿಗೆ ಅದಿರಿನೊಂದಿಗೆ ರಫ್ತಾದವು. ಸೊಂಡೂರು ಸುತ್ತಮುತ್ತಲಿನ ಸಾಂಸ್ಕೃತಿಕ ಶರೀರ ಗಾಯಗೊಂಡಿತು.

ನೈತಿಕ ವ್ಯವಸ್ಥೆಯೇ ಕುಸಿದಿದೆ

ಮನುಷ್ಯರ  ನೈತಿಕ ವ್ಯವಸ್ಥೆಯೇ ಕುಸಿದುಹೋದ ಅಥವಾ ಇಲ್ಲವಾಗಿ ಹೋದ ಇಂತಹ ಊರುಗಳಲ್ಲಿ ಬಹು ಸಂಕೀರ್ಣವಾದ ಅನಿಶ್ಚಿತತೆಯಲ್ಲಿ ಬದುಕುತ್ತಿರುವ ಜೀವಗಳ ಮರುಶೋಧನೆಗಿಳಿಯಬೇಕಿದೆ.

ಸಂತ್ರಸ್ಥರಿಗೆ ಸಮಾಧಾನವಿಲ್ಲ

ಎರಡನೇ ಜಾಗತಿಕ ಮಹಾಯುದ್ಧದ ಬಾಂಬು ದಾಳಿಯ ಪರಿಣಾಮದಿಂದಾಗಿ ಹಿರೋಶಿಮಾ -ನಾಗಸಾಕಿ ನಗರಗಳು ಅಳಿದುಳಿದ ಜನರನ್ನು, ಸಾಮ್ರಾಜ್ಯ ಶಾಹಿ ಒಂದೆಡೆ ಸೇರಿಸಿ ಹೊಸ ಊರೊಂದನ್ನು ನಿರ್ಮಾಣ ಮಾಡಿ ಇರಿಸಿತು.ಮಿರಿಮಿರಿ ಮಿಂಚುವ ರಸ್ತೆಗಳು,ಪ್ರತಿಯೊಬ್ಬರಿಗೂ ಮನೆ,ನೀರು,ಆಹಾರ,ಉದ್ಯೋಗ ಎಲ್ಲವನ್ನು ವ್ಯವಸ್ಥಿತವಾಗಿ ಮಾಡಲಾಯಿತು. ಆದರೆ ಆ ಸಂತ್ರಸ್ಥರಿಗೆ ಸಮಾಧಾನವಿರಲಿಲ್ಲ. ದಿನವಿಡೀ ಯಾರೊಂದಿಗೂ ಮಾತನಾಡದೆ ಮೌನಿಯಾದರು!ಊಟವನ್ನೂ ಕಡಿಮೆ ಮಾಡತೊಡಗಿದರು.

Read Also: ಸೊಂಡೂರಿನ ಕಗ್ಗತ್ತಲೆಯ ಕಥನಗಳು-21 ಹರಿಶಂಕರ !

ತಮ್ಮ ಸಂಪ್ರದಾಯಗಳು,ಆಚರಣೆಗಳಿಲ್ಲದ, ಹಿರೀಕರಿಲ್ಲದ, ಅಂಗಳದಲ್ಲಿ ಆಡುತ್ತಿದ್ದ ಮಕ್ಕಳು ಬಾಂಬು ದಾಳಿಗೆ ನರಳಿ ಸತ್ತ ನೆನಪುಗಳ ಹೊತ್ತ ಅವರಿಗೆ, ಹೊತ್ತು ದೀರ್ಘವೆನಿಸತೊಡಗಿತು.  ಆ ಮನುಷ್ಯರಿಗೆ ತಮಗೆ ತಾವೇ ಎಲ್ಲಿಂದಲೋ ತಂದಿಟ್ಟ ಮ್ಯೂಜಿಯಮ್ಮಿನ ವಸ್ತುಗಳು ತಾವು ಎಂಬ ಭಾವನೆ ಬಲವಾಗಿಬಿಟ್ಟಿತು. ಇಂಥ ಊರುಗಳಲ್ಲಿನ ಮನುಷ್ಯರನ್ನು ಯಾವುದೋ ಜಗತ್ತಿನಿಂದ ತಂದ ಪ್ರಾಣಿಗಳ ಹಾಗೆ,ವಸ್ತುಗಳ ಹಾಗೆ ಚಿತ್ರಿಸುವ ನಿರ್ಭಾವುಕ ಸಮಾಜ ಈ ಜನರ ಮುಂದೆ ಕುಬ್ಜ ವಾಗಿದ್ದು ಸತ್ಯ.ಚೈತನ್ಯ ಶೀಲ, ಸಂವೇದನಾಶೀಲ ಸಮಾಜ ಮಾತ್ರವೇ ಮನುಷ್ಯನಿಗಿರುವ ಅಗಾಧ ಸಾಧ್ಯತೆಗಳನ್ನು ರೂಪಿಸಬಲ್ಲುದು.

ಎಷ್ಟೋ ಜನರು ತಮ್ಮ ಹಳೆಯ ಜನಪದ ಹಾಡುಗಳನ್ನು,ಕತೆಗಳನ್ನು,ನೆನಪಿಗೆ ತಂದುಕೊಂಡು ತಮ್ಮಷ್ಟಕ್ಕೆ ತಾವೇ ಗುನುಗಲು ಶುರುವಿಟ್ಟುಕೊಂಡರಂತೆ.ಕೆಲವರಿಗಂತೂ ನೆನಪುಗಳೂ ಬರದೆ, ಹೊಂದಿಕೊಳ್ಳದೆ ಬದುಕುವುದು ಕಷ್ಟವಾಗತೊಡಗಿತು. ಇಂತಹದೊಂದು ವಿಚಿತ್ರ ಸನ್ನಿವೇಶದಲ್ಲಿ ಎಷ್ಟೋ ಮನುಷ್ಯರು ಹುಚ್ಚರಾಗಿಬಿಟ್ಟರಂತೆ.ಎಷ್ಟೋ ಜನ ಆತ್ಮಹತ್ಯೆಗೂ ಶರಣಾದರಂತೆ.ಇನ್ನು ಕೆಲವರಿಗೆ ಇಂತಹ ಸ್ಥಿತಿಗೆ ತಮ್ಮನ್ನು ತಂದಿಟ್ಟ ಪ್ರಭುತ್ವದ ವಿರುದ್ಧ ಪ್ರತಿರೋಧಿಸಲೂ ಆಗದೆ,ಬದುಕಲಿಕ್ಕೂ ಆಗದೆ ಸಾಯಲೂ ಆಗದಂತಹ ಸ್ಥಿತಿಯಲ್ಲಿ ಅವರಿದ್ದರು.

ಸೊಂಡೂರಿಗೂ ಹಿರೋಶಿಮಾ – ನಾಗಸಾಕಿಯ ಊರುಗಳಿಗೂ ವ್ಯತ್ಯಾಸ ಗಳಿದೆಯಾ?

ಕಣ್ಣಿಗೆ ಕಾಣದ ಇಂತಹ ಹಿಂಸೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದದ್ದು ಸಂವೇದನಾಶೀಲ, ಸೂಕ್ಷ್ಮತೆಗಳ ಅರಿವಿರುವ ಪ್ರಭುತ್ವದ ಜವಾಬ್ದಾರಿ ಎಂಬುದೇನೊ ನಿಜ. ಆದರೆ… ನಿರ್ಭಾವುಕ ವೋಟಿಂಗ್ ಮೇಷೀನುಗಳ ಮೂಲಕವೆ ಆಯ್ಕೆಯಾಗುವ ಪ್ರಭುತ್ವಕ್ಕೆ ಕಣ್ಣು,ಕಿವಿ,ಮೂಗು ಬಾಯಿಗಳಿಗಿಂತಲೂ , ಹೃದಯು ಇರಬೇಕಾದುದು ಅಗತ್ಯ. ಈಗ ಹೇಳಿ, ಸೊಂಡೂರಿಗೂ ಹಿರೋಶಿಮಾ – ನಾಗಸಾಕಿಯ ಊರುಗಳಿಗೂ ವ್ಯತ್ಯಾಸ ಗಳಿದೆಯಾ? ನನಗೇನೂ ಹಾಗನ್ನಿಸುವುದಿಲ್ಲ.

-ಬಿ.ಶ್ರೀನಿವಾಸ

TAGGED:dinamaana.comKannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article davanagere ಒಂದೇ ಕುಟುಂಬದ ಮೂವರು ಕಾಣೆ : ದೂರು ದಾಖಲು
Next Article Libraries Davanagere ಈ ವರ್ಷ 20 ಪಂಚಾಯಿತಿ ಗ್ರಂಥಾಲಯಗಳ ಡಿಜಿಟಲೀಕರಣ : ಸಿಇಓ ಸುರೇಶ್ ಬಿ.ಇಟ್ನಾಳ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಭೀಮ ಕೋರೆಗಾಂವ್ ಒಂದು ಸ್ವಾಭೀಮಾನದ ಯುದ್ಧ

ಭೀಮ ಕೋರೆಗಾಂವ್ ಇತಿಹಾಸದ ಕುತು ಹಿರಿಯ ವಕೀಲ ಮೋಹನ್ ಕುಮಾರ್ ಎಂ.ಸಿ ಅವರ ವಿಶೇಷ ಲೇಖನ.  ಇತಿಹಾಸವನ್ನು ಅರಿಯದವರು ಇತಿಹಾಸವನ್ನು…

By Dinamaana Kannada News

ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ ಜು.10 :  ಕರ್ನಾಟಕದ ಮಾಜಿ ಸೈನಿಕರ ಹಾಗೂ ಹೊರರಾಜ್ಯದ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಗೆ (ಅಧಿಕಾರಿಗಳನ್ನು ಹೊರತುಪಡಿಸಿ)…

By Dinamaana Kannada News

DAVANAGERE NEWS : ಹಿಂದುಳಿದ ವರ್ಗದ ಸಮುದಾಯದಗಳಿಗೆ ವಿವಿಧ ಯೋಜನೆಗಳ ಸಾಲ ಸೌಲಭ್ಯಗಳ ಅರ್ಜಿ ಆಹ್ವಾನ

ದಾವಣಗೆರೆ.ಆ.02  (Davangere district )   ಪ್ರಸಕ್ತ ಸಾಲಿನಲ್ಲಿ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

By Dinamaana Kannada News
Political analysis
ರಾಜಕೀಯ

Political analysis | ವಿಜಯೇಂದ್ರ ಅವರಿಗೆ ಲಾಸ್ಟ್ ಚಾನ್ಸು?

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?